Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈವಾ ಸ್ಟೋರ್ ಉದ್ಘಾಟಿಸಿ ಮುದ್ದಾಗಿ ಕನ್ನಡ ಮಾತಾಡಿದ 'ಗೂಗ್ಲಿ' ನಟಿ ಕೃತಿ
ಮೂರು ವರ್ಷಗಳ ಬಳಿಕ ಕನ್ನಡಕ್ಕೆ ಮರಳಿ ಬಂದಿದ್ದಾರೆ 'ಗೂಗ್ಲಿ' ಚೆಲುವೆ ಕೃತಿ ಕರಬಂಧ. ಆದರೆ ಸಿನಿಮಾಕ್ಕಾಗಿ ಅಲ್ಲ ಬದಲಿಗೆ ಮಳಿಗೆಯೊಂದರ ಉದ್ಘಾಟನೆಗೆ.
ಬೆಂಗಳೂರಿನ ಇಂದಿರಾನಗರದಲ್ಲಿ ಮೊದಲ ಮೈವಾ ಮಳಿಗೆಯ ಉದ್ಘಾಟನೆ ಸಮಾರಂಭದಲ್ಲಿ ನಟಿ ಕೃತಿ ಕರಬಂಧ ಪಾಲ್ಗೊಂಡಿದ್ದರು. ಪಂಜಾಬಿ ಮೂಲದವರಾದ ಕೃತಿ ಕರಬಂಧ ಕಾರ್ಯಕ್ರಮದಲ್ಲಿ ಮುದ್ದಾಗಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು.
''ನನಗೆ ಮೈವಾದ ಉತ್ಪನ್ನಗಳು ಬಹಳ ಇಷ್ಟವಾಗುತ್ತವೆ. ನಾನು ಈ ಮೊದಲು ಮೈವಾದ ಆನ್ಲೈನ್ ಸ್ಟೋರ್ನಲ್ಲಿ ಅವರ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತಿದ್ದೆ. ಅವರ ಉತ್ಪನ್ನಗಳು ನಿನ್ನ ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಉತ್ತಮವಾದ 'ಡಿವೈನ್' ಸುವಾಸನೆ ತುಂಬುತ್ತವೆ'' ಎಂದಿದ್ದಾರೆ.
''ಕೊರೊನಾ ಸಮಯದಲ್ಲಿ ನನಗೆ ಮನೆಯ ಮಹತ್ವ ಹೆಚ್ಚು ಅರಿವಾಯ್ತು. ಮನೆಯನ್ನು ನಾವು ಸದಾ ಸುಂದರವಾಗಿಟ್ಟುಕೊಳ್ಳಬೇಕು. ಮರಳಿ-ಮರಳಿ ಮನೆಗೆ ಬರಬೇಕು ಎಂದೆನಿಸುವಂತೆ ನಮ್ಮ ಮನೆಯನ್ನು ನಾವು ಇರಿಸಿಕೊಳ್ಳಬೇಕು'' ಎಂದಿದ್ದಾರೆ ಕೃತಿ ಕರಬಂಧ.
''ನಾನು ಮೊದಲ ಬಾರಿಗೆ ಮೈವಾದ ವೆನ್ನಿಲ್ಲಾ ಪಾಮ್ ಕೇಕ್ ಕ್ಯಾಂಡನ್ ಖರೀದಿಸಿದ್ದೆ. ಆ ಕ್ಯಾಂಡಲ್ನಿಂದ ನಮ್ಮ ಮನೆಯೆಲ್ಲ ವೆನ್ನಿಲ್ಲಾದಂತೆ ಸುವಾಸನೆ ಬೀರುತ್ತಿತ್ತು. ನನಗೆ ಅದು ಬಹಳ ಇಷ್ಟವಾಯಿತು. ಆಗಿನಿಂದಲೂ ನಾನು ಮೈವಾದ ವಸ್ತುಗಳನ್ನು ಕೊಳ್ಳುತ್ತಿದ್ದೇನೆ'' ಎಂದರು ಕೃತಿ ಕರಬಂಧ.
''ಈ ಸ್ಟೋರ್ ಉದ್ಘಾಟನೆಗೆ ಬಂದಾಗಲೇ ನನಗೆ ಗೊತ್ತಾಗಿತ್ತು. ಮೈವಾದಲ್ಲಿ ಇನ್ನೂ ಎಷ್ಟೋಂದು ಅದ್ಭುತವಾದ ವಸ್ತುಗಳು ಸಿಗುತ್ತವೆ ಎಂಬುದು. ಮೈವಾದ ವಸ್ತುಗಳೆಲ್ಲವೂ ಕೈಯಿಂದಲೇ ಮಾಡಿರುವವು. ಮೈವಾ ತನ್ನ ಉದ್ಯಮದ ಮೂಲಕ ಸಬಲೀಕರಣ ಸಹ ಮಾಡುತ್ತಿದೆ. ಜೊತೆಗೆ ಪುನರ್ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ. ಮೈವಾದಲ್ಲಿ ಶಾಪಿಂಗ್ ಮಾಡುವುದು ಮಹಿಳಾ ಸಮಬಲೀಕರಣಕ್ಕೆ ಸಹಾಯ ಮಾಡಿದಂತಾಗುತ್ತದೆ. ಮೈವಾದ ಎಲ್ಲರಿಗೂ ಶುಭಾಶಯಗಳು'' ಎಂದರು ಕೃತಿ ಕರಬಂಧ.