ಗಣೇಶ ಹಬ್ಬ ಆಚರಿಸಿದ ನಟಿ ಮೇಘನಾ ರಾಜ್
ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಸಾಮಾನ್ಯವಾಗಿ ಯಾವುದೇ ಹಬ್ಬ ಆಗಲಿ ಅದನ್ನು ಚೆನ್ನಾಗಿ ಆಚರಣೆ ಮಾಡುವುದು ಹೆಣ್ಣು ಮಕ್ಕಳು. ಹೊಸ ಬಟ್ಟೆ, ಪೂಜೆ, ರುಚಿಯಾದ ಅಡುಗೆ ಹೀಗೆ ಎಲ್ಲವನ್ನು ನಿಷ್ಠೆಯಿಂದ ಮಾಡುವ ಹೆಣ್ಣು ಮಕ್ಕಳು ಹಬ್ಬಕ್ಕೆ ಒಂದು ಅರ್ಥವನ್ನು ತಂದುಕೊಡುತ್ತಾರೆ.
ಸದ್ಯ, ನಟಿ ಮೇಘನಾ ರಾಜ್ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ವಿಶೇಷ ಅಂದರೆ, ಇದು ಅವರ ಮದುವೆಯ ಬಳಿಕ ಬರುತ್ತಿರುವ ಮೊದಲ ಗಣೇಶ ಹಬ್ಬ. ಅದಕ್ಕೂ ವಿಶೇಷ ಅಂದರೆ, ಅವರು ಈ ಹಬ್ಬವನ್ನು ತಮ್ಮ ಹೊಸ ಚಿತ್ರ 'ಇರುವುದೆಲ್ಲವ ಬಿಟ್ಟು' ಟೀಂ ಜೊತೆಗೆ ಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಚಿತ್ರದ ನಿರ್ದೇಶಕರಾದ ಕಾಂತ ಕನ್ನಲ್ಲಿ, ನಟ ತಿಲಕ್, ಶ್ರೀ ಮಹದೇವ್ ಹಾಗೂ ನಿರ್ಮಾಪಕ ದೇವರಾಜ್ ದಾವಣಗೆರೆ ಜೊತೆಗೆ ಈ ಬಾರಿ ಮೇಘನಾ ಹಬ್ಬ ಆಚರಣೆ ಮಾಡಿದ್ದಾರೆ.

ಮೇಘನಾ ರಾಜ್ ನಟನೆಯ 'ಇರುವುದೆಲ್ಲ ಬಿಟ್ಟು' ಸಿನಿಮಾ ಇದೇ ತಿಂಗಳ 21ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದೆ. ಟ್ರೇಲರ್ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದ್ದು, ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ.

'ಬೇರೆಯವರ ಮುಂದೆ ಗೆದ್ದು ಖುಷಿಪಡಬೇಕು, ನಮ್ಮವರ ಮುಂದೆ ಸೋತು ಖುಷಿಪಡಬೇಕು..' ಎಂಬ ಸಂಭಾಷಣೆ ಎಲ್ಲರ ಮನಸಿಗೆ ಹತ್ತಿರ ಆಗಿದೆ.


Click it and Unblock the Notifications











