Don't Miss!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಹಬ್ಬ ಆಚರಿಸಿದ ನಟಿ ಮೇಘನಾ ರಾಜ್
ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಸಾಮಾನ್ಯವಾಗಿ ಯಾವುದೇ ಹಬ್ಬ ಆಗಲಿ ಅದನ್ನು ಚೆನ್ನಾಗಿ ಆಚರಣೆ ಮಾಡುವುದು ಹೆಣ್ಣು ಮಕ್ಕಳು. ಹೊಸ ಬಟ್ಟೆ, ಪೂಜೆ, ರುಚಿಯಾದ ಅಡುಗೆ ಹೀಗೆ ಎಲ್ಲವನ್ನು ನಿಷ್ಠೆಯಿಂದ ಮಾಡುವ ಹೆಣ್ಣು ಮಕ್ಕಳು ಹಬ್ಬಕ್ಕೆ ಒಂದು ಅರ್ಥವನ್ನು ತಂದುಕೊಡುತ್ತಾರೆ.
ಸದ್ಯ, ನಟಿ ಮೇಘನಾ ರಾಜ್ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ವಿಶೇಷ ಅಂದರೆ, ಇದು ಅವರ ಮದುವೆಯ ಬಳಿಕ ಬರುತ್ತಿರುವ ಮೊದಲ ಗಣೇಶ ಹಬ್ಬ. ಅದಕ್ಕೂ ವಿಶೇಷ ಅಂದರೆ, ಅವರು ಈ ಹಬ್ಬವನ್ನು ತಮ್ಮ ಹೊಸ ಚಿತ್ರ 'ಇರುವುದೆಲ್ಲವ ಬಿಟ್ಟು' ಟೀಂ ಜೊತೆಗೆ ಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ.
'ಇರುವುದೆಲ್ಲವ ಬಿಟ್ಟು' ರಿಲೀಸ್ ಡೇಟ್ ಫಿಕ್ಸ್ : ವಿದೇಶದಲ್ಲಿಯೂ ಬಿಡುಗಡೆ ಮಾಡಲು ತಯಾರಿ
ಚಿತ್ರದ ನಿರ್ದೇಶಕರಾದ ಕಾಂತ ಕನ್ನಲ್ಲಿ, ನಟ ತಿಲಕ್, ಶ್ರೀ ಮಹದೇವ್ ಹಾಗೂ ನಿರ್ಮಾಪಕ ದೇವರಾಜ್ ದಾವಣಗೆರೆ ಜೊತೆಗೆ ಈ ಬಾರಿ ಮೇಘನಾ ಹಬ್ಬ ಆಚರಣೆ ಮಾಡಿದ್ದಾರೆ.
ಮೇಘನಾ ರಾಜ್ ನಟನೆಯ 'ಇರುವುದೆಲ್ಲ ಬಿಟ್ಟು' ಸಿನಿಮಾ ಇದೇ ತಿಂಗಳ 21ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದೆ. ಟ್ರೇಲರ್ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದ್ದು, ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ.
'ಬೇರೆಯವರ ಮುಂದೆ ಗೆದ್ದು ಖುಷಿಪಡಬೇಕು, ನಮ್ಮವರ ಮುಂದೆ ಸೋತು ಖುಷಿಪಡಬೇಕು..' ಎಂಬ ಸಂಭಾಷಣೆ ಎಲ್ಲರ ಮನಸಿಗೆ ಹತ್ತಿರ ಆಗಿದೆ.