Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುತ್ರನಿಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿ ನಟಿ ಮೇಘನಾ ರಾಜ್
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತನ್ನ ಪುತ್ರನಿಗೆ ಆರು ತಿಂಗಳು ತುಂಬಿದ ಸಂತಸದಲ್ಲಿದ್ದಾರೆ. ಜೂ.ಚಿರು ಜನಿಸಿ 6 ತಿಂಗಳಾಗಿದೆ. ಮುದ್ದಾದ ಮಗನ ಆರು ತಿಂಗಳ ಸಂಭ್ರಮವನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಗನ ಕ್ಯೂಟ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮ ಪಟ್ಟಿದ್ದಾರೆ. ಸುಂದರವಾದ ಕೇಕ್ ಕತ್ತರಿಸುವ ಮೂಲಕ ಮಗನ ಆರು ತಿಂಗಳ ಸಂಭ್ರಮವನ್ನು ಆಚರಿಸಿದ್ದಾರೆ. ನೀಲಿ ಬಣ್ಣದ ಉಡುಪು ಧರಿಸಿರುವ ಜೂ.ಚಿರು ಸಖತ್ ಮುದ್ದಾಗಿ ಕಾಣಿಸುತ್ತಿದ್ದಾನೆ. ಫೋಟೋ ಜೊತೆಗೆ ಮೇಘನಾ, '6 ತಿಂಗಳು ಕಳೆದಿದೆ. ಅಪ್ಪ ಮತ್ತು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ಸಣ್ಣ ತಪ್ಪಿನಿಂದಾಗಿ ಮತ್ತೆ ಕೊರೊನಾ ಭಯಕ್ಕೆ ಸಿಲುಕಿದ ಮೇಘನಾ ರಾಜ್
ನಟಿ ಮೇಘನಾ ಕಳೆದ ವರ್ಷ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡು ದುಃಖದಲ್ಲಿದ್ದ ಇಡೀ ಕುಟುಂಬಕ್ಕೆ ಜೂ.ಚಿರು ಸಂತೋಷವನ್ನು ಹೊತ್ತು ತಂದಿದ್ದಾನೆ. ಮಗನ ನಗುವಿನಲ್ಲಿ ಪತಿಯ ಸಾವಿನ ನೋವನ್ನು ಮರೆಯುತ್ತಿದ್ದಾರೆ ಮೇಘನಾ.
ಕೋವಿಡ್ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಮೇಘನಾ ಕೊರೊನಾ ಆತಂಕದ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
'ನಾನು ಮಾಡಿದ ಸಣ್ಣ ತಪ್ಪಿನಿಂದಾಗಿ ಮತ್ತೊಮ್ಮೆ ಕೊರೊನಾ ಭಯ ಅನುಭವಿಸುವಂತಾಯಿತು. ಇತ್ತೀಚೆಗೆ ನನ್ನ ಗೆಳೆಯರೊಬ್ಬರೊಂದಿಗೆ ಸಂಪರ್ಕದಲ್ಲಿದ್ದೆ. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಆಯಿತು. ಕೂಡಲೇ ನಾನು ಸೆಲ್ಫ್ ಐಸೋಲೇಷನ್ ಗೆ ಒಳಗಾದೆ. ಆದರೆ ಆ ಸಮಯದಲ್ಲಿ ನನ್ನ ಸಣ್ಣ ಮಗು, ನನ್ನ ತಂದೆ-ತಾಯಿಯ ಆರೋಗ್ಯದ ಬಗ್ಗೆ ಯೋಚಿಸಿ ತೀವ್ರವಾಗಿ ಆತಂಕಗೊಂಡಿದ್ದೆ. ತೀವ್ರ ಮಾನಸಿಕ ಒತ್ತಡ ಅನುಭವಿಸಿದೆ' ಎಂದು ಹೇಳಿದ್ದಾರೆ.
Recommended Video
'ಕೊರೊನಾ ಒಬ್ಬರ ದೇಹದಲ್ಲಿ ಒಂದೊಂದು ರೀತಿ ವರ್ತಿಸುತ್ತದೆ. ಕೆಲವರಿಗೆ ಏನೂ ಹಾನಿ ಮಾಡುವುದಿಲ್ಲ. ಕೆಲವರನ್ನು ಬಹಳ ಕಾಡಿಸುತ್ತದೆ. ಕೆಲವರ ಜೀವಕ್ಕೇ ಕುತ್ತು ತರುತ್ತದೆ. ರೋಗ ಬಂದವರನ್ನು, ಅವರ ಸುತ್ತ-ಮುತ್ತ ಇರುವವರನ್ನು, ಪ್ರೀತಿಪಾತ್ರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತಗೊಳಿಸುತ್ತದೆ. ನಾವು ನಮ್ಮ ಜಾಗೃತೆಯಲ್ಲಿರದೆ ಬೇರೆ ದಾರಿಯೇ ಇಲ್ಲ' ಎಂದು ಮೇಘನಾ ಹೇಳಿದ್ದಾರೆ.