Don't Miss!
- News ಡಿಸಿಎಂ, ಸಿಎಂ ಅಯೋಗ್ಯರು ಎಂದ ಸದಾನಂದ ಗೌಡ : ಡಿ ಕೆ ಶಿವಕುಮಾರ್ ಏನಂದ್ರು?
- Sports RCB: ಆರ್ಸಿಬಿ ಮಾಲೀಕತ್ವ ಬದಲಾವಣೆಯ ಅಗತ್ಯವಿದೆ; ಟೆನ್ನಿಸ್ ತಾರೆ ಮಹೇಶ್ ಭೂಪತಿ
- Lifestyle ಹಾವನ್ನು ಚಿಟಿಕೆ ಹೊಡೆದಂತೆ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ಕೌಶಲ್ಯಕ್ಕೆ ಜನರು ಫಿದಾ: 17 ಮಿಲಿಯನ್ಗೂ ಅಧಿಕ ವ್ಯೂವ್ಸ್ ಪಡೆದ ವೀಡಿ
- Automobiles Tata: 10 ಕೋಟಿ ಕಿ.ಮೀ ಮೈಲಿಗಲ್ಲು ದಾಟಿದ ಟಾಟಾ ಪವರ್ನ EV ಚಾರ್ಜಿಂಗ್ ನೆಟ್ವರ್ಕ್
- Finance ಓಲಾ S1 X ಎಲೆಕ್ಟ್ರಿಕ್ ಸ್ಕೂಟರ್ಗಳ ಬೆಲೆ ಕಡಿತ, ಪ್ರಸ್ತುತ ದರ ಎಷ್ಟು ತಿಳಿಯಿರಿ
- Technology ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಸೇರಲಿದೆ ಈ ಆಕರ್ಷಕ ಫೀಚರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರಗ್ಸ್ ಬಗ್ಗೆ ಕೇಳುತ್ತಿದ್ದಂತೆ ಉರಿದುಬಿದ್ದ ನಟಿ ರಚಿತಾ ರಾಮ್
ಸ್ಯಾಂಡಲ್ ವುಡ್ ನಟ-ನಟಿಯರು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಚಂದನವನಕ್ಕೂ ನಶೆಯ ನಂಟಿದೆಯಾ? ಎಂದು ಕೇಳಿದ್ದಕ್ಕೆ ನಟಿ ರಚಿತಾ ರಾಮ್ ಫುಲ್ ಗರಂ ಆಗಿದ್ದಾರೆ. ನನಗೆ ಗೊತ್ತಿದ್ದರೂ, ನೋಡಿದ್ದರೂ ಅದು ನನಗೆ ಬೇಡವಾದ ವಿಷಯ ಎಂದು ಸಿಟ್ಟಾಗಿದ್ದಾರೆ.
Recommended Video
ಇತ್ತೀಚಿಗೆ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಭಾಗಿಯಾಗಿದ್ದ ರಚಿತಾಗೆ, ಮಾಧ್ಯಮದವರು ಡ್ರಗ್ ಮಾಫಿಯಾದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ರಚಿತಾ, 'ನಾನು ಟಿವಿ ನೋಡುವುದಿಲ್ಲ, ನನ್ನ ತಲೆಯಲ್ಲಿ ಕೋವಿಡ್, ಲಾಕ್ ಡೌನ್, ಈಗ ಸಿನಿಮಾಗಳು ಬಿಟ್ಟರೆ ಬೇರೇನೂ ಇಲ್ಲ' ಎಂದಿದ್ದಾರೆ. ಮುಂದೆ ಓದಿ...
ವಾಮ ಮಾರ್ಗದಲ್ಲಿ ಗೆದ್ದವರೇ ನಶೆಯ ದಾಸರಾಗಿದ್ದಾರೆ, ಅವರನ್ನು ಬೆತ್ತಲೆ ಮಾಡಿ: ನಟ ಜಗ್ಗೇಶ್
ರಚಿತಾ ರಾಮ್ ಪ್ರತಿಕ್ರಿಯೆ
ಸ್ಯಾಂಡಲ್ ವುಡ್ ಡ್ರಗ್ ನಂಟಿನ ಬಗ್ಗೆ ರಚಿತಾ, "ಯಾರೋ ಮಾಡ್ತಾರೆ ಅಂತ ನಾನು ಯಾಕೆ ಆ ಬಗ್ಗೆ ಕಾಮೆಂಟ್ ಮಾಡಬೇಕು, ನನಗೆ ಅದು ಗೊತ್ತಿಲ್ಲದೆ ಇರುವ ವಿಷಯ, ನನಗೆ ಅದು ಬೇಡದೇ ಇರುವ ವಿಷಯ, ಬೇಡದೆ ಇರುವ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದಿದ್ದಾರೆ.
'ನಾನು ಭಾಗಿಯಾಗಿದ್ದರೆ ಮಾತನಾಡುತ್ತಿದ್ದೆ...'
ಹಾಗಾದರೆ ಸ್ಯಾಂಡಲ್ ವುಡ್ ನಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲವಾ? ಎಂದು ಪತ್ರಕರ್ತರು ಕೇಳಿದ್ದಕ್ಕೆ, "ನಾನು ಇದರಲ್ಲಿ ಭಾಗಿಯಾಗಿದ್ದರೆ ಮಾತನಾಡುತ್ತಿದ್ದೆ, ನನಗೆ ಬೇಡದೆ ಇರುವ ವಿಷಯದ ಬಗ್ಗೆ ನಾನು ಮಾತನಾಡಲ್ಲ, ಬೇಡದೆ ಇರುವ ಪ್ರಶ್ನೆ ಕೇಳಿದರೆ ಯಾರು ಕೂಡ ಉತ್ತರಿಸಲ್ಲ" ಎಂದು ಮಾಧ್ಯಮದವರ ಮೇಲೆ ಸಿಟ್ಟಾಗಿದ್ದಾರೆ.
ಡ್ರಗ್ಸ್ ಪ್ರಕರಣ: ಮಾಧ್ಯಮಗಳ ಮೇಲೆ ರಾಗಿಣಿ ಮುನಿಸು
ನನಗೆ ಗೊತ್ತಿದ್ದರೂ ಅದು ನನಗೆ ಬೇಡವಾದ ವಿಷಯ
"ನನ್ನ ಸಂಬಂಧವಾಗಿ ಏನಾದರೂ ಇದ್ದರೆ ಮಾತ್ರ ನಾನು ಮಾತನಾಡುತ್ತೇನೆ. ಬೇಡದೆ ಇರುವ ವಿಚಾರ ಏನೇ ಇದ್ದರು ನಾನು ಕಾಮೆಂಟ್ ಮಾಡಲ್ಲ. ನನಗೆ ಗೊತ್ತಿದ್ದರೂ, ನೋಡಿದ್ದರೂ ಅದು ನನಗೆ ಬೇಡವಾದ ವಿಷಯ. ನೆಗೆಟಿವ್ ಸುದ್ದಿಗಳ ಬಗ್ಗೆ ತಲೆ ಕೂಡ ಹಾಕಲ್ಲ, ಅದು ನನಗೆ ಸಂಬಂಧಿಸಿದ ಸುದ್ದಿ ಆದರೂ ನಾನು ನೋಡಲ್ಲ. ನನಗೆ ತುಂಬಾ ಕೆಲಸವಿದೆ. ಬೇರೆಯವರು ಯಾರೋ ಏನೋ ಮಾಡ್ತಿದ್ದಾರೆ ಅಂದರೆ ನಾನು ಯಾಕೆ ಭಾಗಿಯಾಗಬೇಕು. ಅವರ ಹಣೆಬರಹ ಅವರು ನೋಡಿಕೊಳ್ಳುತ್ತಾರೆ." ಎಂದಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್
'ಕಸ್ತೂರಿ ನಿವಾಸ' ಸಿನಿಮಾದಲ್ಲಿ ರಚಿತಾ
ರಚಿತಾ ರಾಮ್ ಅಭಿನಯದ ಹೊಸ ಸಿನಿಮಾಗೆ ಕಸ್ತೂರಿ ನಿವಾಸ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ರಚಿತಾ ಭಾಗಿಯಾಗಿದ್ದರು. ಅಣ್ಣಾವ್ರ ಸಿನಿಮಾ ಹೆಸರನ್ನೇ ರಚಿತಾ ರಾಮ್ ಸಿನಿಮಾಗೂ ಇಟ್ಟಿರುವುದು ಅಚ್ಚರಿ ಮೂಡಿಸಿತ್ತು. ಆದರೆ ಅಣ್ಣಾವ್ರ ಅಭಿಮಾನಿಗಳ ಮನವಿಯ ಮೇರೆಗೆ 'ಕಸ್ತೂರಿ ನಿವಾಸ' ಹೆಸರನ್ನು ಬದಲಾಯಿಸಲಾಗಿದೆಯಂತೆ. ಚಿತ್ರಕ್ಕೆ ಸದ್ಯ 'ಕಸ್ತೂರಿ' ಎಂದು ಟೈಟಲ್ ಇಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.