Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್, ಉಪ್ಪಿ, ವಿಷ್ಣು ನಂತರ ಶಕ್ತಿದೇವತೆ ಮೊರೆ ಹೋದ ರಚಿತಾ ರಾಮ್
ಎಂತಹ ಸ್ಟಾರ್ ಗಳೇ ಆದರೂ ಗುರುಗಳು ಹಾಗೂ ದೇವರ ಭಕ್ತರಾಗಿರುತ್ತಾರೆ. ಅದೇ ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಶಕ್ತಿದೇವತೆಗಳ ಪೂಜಿಸುತ್ತಾ ಬಂದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿಂಷಾ ಮಾರಮ್ಮ ದೇವಿಯನ್ನ ಪೂಜೆ ಮಾಡಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಚಾಮುಂಡೇಶ್ವರಿಯನ್ನ ಪೂಜಿಸುತ್ತಾರೆ.
ಇನ್ನು ಅನೇಕ ಸ್ಟಾರ್ ಗಳ ಆರಾಧ್ಯ ದೈವ ಆಗಿರುವ ಈ ದೇವತೆಯ ಮೊರೆ ಹೋಗಿದ್ದಾರೆ ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್. ತುಮಕೂರಿನ ಬಳಿ ಇರುವ ದಸರಿಘಟ್ಟದಲ್ಲಿರುವ ಚೌಡೇಶ್ವರಿ ದೇವಿಯ ದೇವಾಸ್ಥಾನಕ್ಕೆ ರಚಿತಾ ರಾಮ್ ಇತ್ತಿಚಿಗಷ್ಟೇ ಭೇಟಿ ಕೊಟ್ಟಿದ್ದಾರೆ.
ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ದರಸಿಘಟ್ಟ ಚೌಡೇಶ್ವರಿ ದೇವಿಯ ಮೊರೆ ಹೋಗಿರೋ ರಚಿತಾ ರಾಮ್ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ದೇವಿಯ ಪೂಜೆ ಮಾಡುವ ಅರ್ಚಕರ ಬಳಿ ಮಾತನಾಡಿದ್ದಾರಂತೆ.
ದಚ್ಚು ಚಿತ್ರಕ್ಕೆ ಮತ್ತೆ ರಚ್ಚುನೇ ನಾಯಕಿ
ರಚಿತಾ ರಾಮ್ ಅವರಿಗೂ ಮುಂಚೆ ಸಾಕಷ್ಟು ಸ್ಟಾರ್ ಕಲಾವಿದರು ಈ ದೇವಾಲಯಕ್ಕೆ ಬೇಟಿ ಕೊಟ್ಟಿದ್ದಾರೆ. ಶಕ್ತಿದೇವತೆ ಎಂದೇ ಪ್ರಖ್ಯಾತಿ ಪಡೆದಿರುವ ಧಸರಿಘಟ್ಟದ ದೇವಾಲಯಕ್ಕೆ ಯಶ್ಮ ಉಪೇಂದ್ರ ಹಾಗೂ ಮೈಸೂರಿನ ಮಹಾರಾಜರು, ಪ್ರಧಾನಿ ನರೇಂದ್ರ ಮೋದಿ ಇನ್ನೂ ಅನೇಕರು ಬಂದು ದೇವಿಗೆ ಪೂಜೆ ಸಲ್ಲಿಸಿದ್ದಾರೆ.