ಧರ್ಮಸ್ಥಳಕ್ಕೆ ಭೇಟಿ ನೀಡಿದ ನಟಿ ರಚಿತಾ ರಾಮ್
ಇಂದು ಎಲ್ಲರೂ ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಅದೇ ರೀತಿ ನಟಿ ರಚಿತಾ ರಾಮ್ ಹಬ್ಬದ ದಿನ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ರಚಿತಾ ರಾಮ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಮಂಜುನಾಥನ ದರ್ಶನ ಪಡೆದಿದ್ದಾರೆ. ಸಿನಿಮಾದ ಕೆಲಸಗಳ ನಡುವೆ ಹಬ್ಬದ ದಿನ ದೇವರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ದೇವರು ಎಂದರೆ ಅಪಾರ ನಂಬಿಕೆ ಭಕ್ತಿ ಹೊಂದಿರುವ ರಚಿತಾ ಇಂದು ಧರ್ಮಸ್ಥಳಗೆ ಹೋಗಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ರಚಿತಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಧರ್ಮಸ್ಥಳದ ಧರ್ಮಧಿಕಾರಿ ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಅವರ ಜೊತೆಗೆ ಫೋಟೋ ತೆಗೆದುಕೊಂಡಿದ್ದಾರೆ.
ರಚಿತಾ ರಾಮ್ ಸದ್ಯ 'ನಟ ಸಾರ್ವಭೌಮ' ಸಿನಿಮಾದ ಯಶಸ್ವಿನಲ್ಲಿ ಇದ್ದಾರೆ. ಈ ವರ್ಷ ರಚಿತಾ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. 'ಐ ಲವ್ ಯೂ', 'ರುಸ್ತುಂ', 'ಏಪ್ರಿಲ್' ಹಾಗೂ 'ಆನಂದ್' ರಚಿತಾ ಅವರ ಮುಂದಿನ ಸಿನಿಮಾವಾಗಿದೆ.
More from Filmibeat
English summary
Kannada actress Rachita Ram visits Dharmasthala today (March 4th) on the occasion of Maha Shivratri.


Click it and Unblock the Notifications











