Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಪ್ಪಳದಲ್ಲಿ ರಾಕಿಂಗ್ ಸ್ಟಾರ್ ಪತ್ನಿ ರಾಧಿಕಾ ಪಂಡಿತ್ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್, ತಮ್ಮ 'ಯಶೋಮಾರ್ಗ'ದ ನೇತೃತ್ವದಲ್ಲಿ ಹಲವು ಮಹತ್ವದ ಕಾರ್ಯಗಳನ್ನ ಹಮ್ಮಿಕೊಂಡಿದ್ದು, ಈಗಾಗಲೇ ಆ ಕೆಲಸಗಳಿಗೆ ಚಾಲನೆ ಕೊಟ್ಟಿದ್ದಾರೆ. ಅಂದ್ಹಾಗೆ, 'ಯಶೋಮಾರ್ಗ'ದಲ್ಲಿ ಕೇವಲ ಯಶ್ ಮಾತ್ರ ತೊಡಗಿಸಿಕೊಂಡಿಲ್ಲ. ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಕೂಡ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ.[ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]
ಇತ್ತೀಚೆಗಷ್ಟೇ 'ಯಶೋಮಾರ್ಗ' ಕಚೇರಿ ಉದ್ಘಾಟಿಸಿದ್ದ ರಾಕಿಂಗ್ ಸ್ಟಾರ್ ದಂಪತಿ, ಈಗ ಕೊಪ್ಪಳದಲ್ಲಿ ಕೆರೆ ಅಭಿವೃದ್ದಿ ಯೋಜನೆಗೆ ಒಟ್ಟಿಗೆ ಚಾಲನೆ ಕೊಟ್ಟಿದ್ದಾರೆ. ಈ ವೇಳೆ ರಾಧಿಕಾ ಪಂಡಿತ್, ಕೊಪ್ಪಳದ ಅಭಿಮಾನಿಗಳ ಎದುರು ತಮ್ಮ ಅಭಿಮಾನದ ಮಾತುಗಳನ್ನ ಹಂಚಿಕೊಂಡರು. ಹಾಗಾದ್ರೆ, ಮಿಸಸ್ ರಾಮಾಚಾರಿ ಏನ್ ಹೇಳಿದ್ರು.....? ಮುಂದೆ ಓದಿ....
ನಿಮ್ಮ ಬೆಂಬಲ, ಪ್ರೀತಿ, ಪ್ರೋತ್ಸಾಹ ಬೇಕು!
''ನಿಜವಾಗಲೂ ತುಂಬಾ ಖುಷಿ ಆಗ್ತಿದೆ. ಒಂದು ಒಳ್ಳೆ ಕೆಲಸ ಯಶಸ್ವಿಯಾಗುವುದಕ್ಕೆ ಬೇಕಾಗಿರುವುದು ಬೆಂಬಲ, ಪ್ರೀತಿ, ಪ್ರೋತ್ಸಾಹ, ಆರ್ಶೀವಾದ. ಅದನ್ನೇಲ್ಲ ನೀವು ಕೊಡ್ತೀರಾ ಎನ್ನುವ ನಂಬಿಕೆ. 'ಯಶೋಮಾರ್ಗ' ಟೀಮ್ ಮಾಡುವುದಕ್ಕೆ ಹೊರಟಿರುವ ಈ ಕಾರ್ಯಕ್ಕೆ ನಿಮ್ಮ ಸಹಕಾರವಿರಲಿ''.
ಒಳ್ಳೆ ಕೆಲಸಕ್ಕೆ ಅಡ್ಡಿ ಬರುತ್ತೆ!
''ಒಳ್ಳೆ ಕಾರ್ಯ ಅಂದ್ರೆ, ಅದಕ್ಕೆ ಅಡ್ಡಿಗಳು, ಆಡಚಣೆಗಳು ಬಂದೇ ಬರುತ್ತೆ. ಅದಕ್ಕೆ ನಾವು ಕಿವಿ ಕೊಡದೆ, ಒಳ್ಳೆ ಕೆಲಸ ನಡೆದುಕೊಂಡು ಹೋಗಲಿ ಎಂದು ಕೆಲಸ ಮಾಡೋಣ'' ಎಂದು ಕೇಳಿಕೊಂಡರು.
ಭೂಮಿ ಪೂಜೆ ನೆರೆವೇರಿಸಿದ ಯಶ್-ರಾಧಿಕಾ
ಕೊಪ್ಪಳದ ತಲ್ಲೂರು ಕೆರೆಯ ಅಭಿವೃದ್ದಿ ಕೆಲಸಕ್ಕೆ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಚಾಲನೆ ಕೊಟ್ಟಿದ್ದು, ಭೂಮಿ ಪೂಜೆ ನೆರೆವೇರಿಸಿದರು.
'ಯಶೋಮಾರ್ಗ'ದ ಜೊತೆ ರಾಧಿಕಾ ಹೆಜ್ಜೆ!
'ಯಶೋಮಾರ್ಗ ಫೌಂಡೇಶನ್' ನಟ ಯಶ್ ಅವರ ಸಾರಥ್ಯದಲ್ಲಿ ಹುಟ್ಟಿಕೊಂಡಿರುವ ಸಂಸ್ಥೆ. ಈ ಸಂಸ್ಥೆಯ ಪ್ರತಿಯೊಂದು ಕೆಲಸದಲ್ಲಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಜೊತೆಯಾಗಿದ್ದಾರೆ. ''ಯಶೋಮಾರ್ಗದಿಂದ ಆಗುವ ಒಳ್ಳೆ ಕೆಲಸಗಳಲ್ಲಿ ನಾನು ಬಾಗಿಯಾಗಲಿದ್ದೇನೆ'' ಎಂದು ರಾಧಿಕಾ ಅವರು ಹೇಳಿದಾಗೆ, ಪತಿಯ ಆಶಯಕ್ಕೆ ಪತ್ನಿಯೂ ಬೆಂಬಲವಾಗಿ ನಿಂತಿದ್ದಾರೆ.['ಯಶೋಮಾರ್ಗ'ಕ್ಕಾಗಿ ಹೊಸ ಕಚೇರಿ ಸ್ಥಾಪಿಸಿದ ಯಶ್ ದಂಪತಿ]