Don't Miss!
- News CAA: ಸಿಎಎ ಜಾರಿ ಪ್ರಶ್ನಿಸಿ 230ಕ್ಕೂ ಹೆಚ್ಚು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೈಂಗಿಕ ದೌರ್ಜನ್ಯದ ಬಗ್ಗೆ ರಾಗಿಣಿ, ಪ್ರಣೀತಾ ಮಾತು
ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಕನ್ನಡ ನಟಿಯರು ಕೂಡ ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಇದೀಗ ನಟಿ ರಾಗಿಣಿ ದ್ವಿವೇದಿ ಹಾಗೂ ಪ್ರಣೀತಾ ಈ ಬಗ್ಗೆ ಮೌನ ಮುರಿದಿದ್ದಾರೆ.
ಬಾಲಿವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿದ್ದ ಮೀಟೂ ಅಭಿಯಾನ ಕನ್ನಡಕ್ಕೆ ಕೂಡ ಬಂದಿತ್ತು. ಈಗಾಗಲೇ ಈ ಬಗ್ಗೆ ನಟಿ ಸಂಗೀತ ಭಟ್, ಐಂದ್ರಿತಾ ರೇ, ಶೃತಿ ಹರಿಹರನ್ ಮಾತನಾಡಿದ್ದಾರೆ. ಈಗ ಈ ಅಭಿಯಾನದ ಬಗ್ಗೆ ರಾಗಿಣಿ ಹಾಗೂ ಪ್ರಣೀತಾ ಸಹ ಹೇಳಿಕೆ ನೀಡಿದ್ದಾರೆ.
ಒಂದೇ ಕುಟುಂಬದ ಇಬ್ಬರು ನಟರ 'ಕಾಮ ಪುರಾಣ' ಬಿಚ್ಚಿಟ್ಟ ಸಂಗೀತಾ ಭಟ್
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮೀಟೂ ಅಭಿಯಾನ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಅದಕ್ಕೆ ಈ ಇಬ್ಬರು ನಟಿಯರು ಧ್ವನಿಗೂಡಿಸಿದ್ದಾರೆ. ಮುಂದೆ ಓದಿ..
ಗಿಮಿಕ್ ಆಗಿ ತೆಗೆದುಕೊಳ್ಳಬಾರದು
''ನಾನು ಚಿತ್ರರಂಗಕ್ಕೆ ಬಂದು 10 ವರ್ಷವಾಯ್ತು. ನನಗೆ ಇದುವರೆಗೆ ಈ ರೀತಿಯ ತೊಂದರೆ ಆಗಿಲ್ಲ. ಇದನ್ನು ಪ್ರಚಾರದ ಗಿಮಿಕ್ ಆಗಿ ತೆಗೆದುಕೊಳ್ಳಬಾರದು. ಕೆಲವು ಘಟನೆಗಳನ್ನ ನೋಡಿದಾಗ ಇದನ್ನ ಪ್ರಚಾರಕ್ಕೆ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿಯಲಾಗುತ್ತೆ. '' - ರಾಗಿಣಿ ದ್ವಿವೇದಿ, ನಟಿ
ತಮಿಳು ನಟ ಕೊಟ್ಟ ಕಾಟವನ್ನ ಬಿಚ್ಚಿಟ್ಟ ಸಂಗೀತಾ ಭಟ್
ಒಳ್ಳೆಯ ಉದ್ದೇಶಕ್ಕಾಗಿ ಅಭಿಯಾನ ಪ್ರಾರಂಭವಾಗಿದೆ
''ಒಳ್ಳೆಯ ಉದ್ದೇಶಕ್ಕಾಗಿ ಇದೊಂದು ಅಭಿಯಾನ ಪ್ರಾರಂಭವಾಗಿದೆ. ಈ ರೀತಿ ತೊಂದರೆಗೆ ಸಿಲುಕಿದವರು ಮುಂದೆ ಬಂದು ಮಾತನಾಡಿ. ಇದಕ್ಕೆ ನನ್ನ ಬೆಂಬಲವಿದೆ. ಶೋಷಣೆಗೆ ಒಳಗಾದವರು ಮುಂದೆ ಬಂದು ಹೇಳಿಕೆ ನೀಡುತ್ತಿರುವುದು ಸ್ವಾಗತಾರ್ಹ. ಸಮಾಜದಲ್ಲಿ ಇದರಿಂದ ಒಂದು ಉತ್ತಮ ಬದಲಾವಣೆ ತರಲು ಸಾಧ್ಯ.'' - ರಾಗಿಣಿ ದ್ವಿವೇದಿ, ನಟಿ
ಒಂದು ವೇದಿಕೆ ಇರಲಿಲ್ಲ
''ಮೀಟೂ ಅಭಿಯಾನದ ಮೂಲಕ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಧ್ವನಿ ಸಿಕ್ಕಂತಾಗಿದೆ. ಇಷ್ಟು ದಿನ ಒಂದು ವೇದಿಕೆ ಇರಲಿಲ್ಲ. ಈಗ ಆ ರೀತಿಯ ಅನುಭವ ಆಗಿರುವವರು ಮುಂದೆ ಬಂದು ಹೇಳಿಕೊಳ್ಳಲು ಒಂದು ಶಕ್ತಿ ಸಿಕ್ಕಿದೆ.'' - ಪ್ರಣೀತಾ, ನಟಿ
ನನಗೆ ಲೈಂಗಿಕ ದೌರ್ಜನ್ಯದ ಅನುಭವಾಗಿಲ್ಲ
''ನನಗೆ ಎಲ್ಲಿಯೂ ಲೈಂಗಿಕ ದೌರ್ಜನ್ಯದಂತಹ ಅನುಭವಾಗಿಲ್ಲ. ಮೀಟೂ ಬಂದ ಮೇಲೆ ಎಲ್ಲರೂ ಧೈರ್ಯವಾಗಿ ತಮ್ಮ ಕರಾಳ ಅನುಭವವನ್ನು ಹೊರ ಹಾಕುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.'' - ಪ್ರಣೀತಾ, ನಟಿ