Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವ ಕಳೆದುಕೊಳ್ಳುತ್ತಿದ್ದೇವೆ, ದಯವಿಟ್ಟು ಸಹಾಯ ಮಾಡಿ: ನಟಿ ಸಂಯುಕ್ತಾ
ಬೆಂಗಳೂರಿನಲ್ಲಿ ಆಸ್ಪತ್ರೆ ಬೆಡ್ಗಳು, ಆಮ್ಲಜನಕ, ರೆಮ್ಡಿಸಿವರ್ ಇಂಜೆಕ್ಷನ್ಗಳಿಗೆ ಆಹಾಕಾರವೆದ್ದಿದೆ. ಆಸ್ಪತ್ರೆಗಳ ಮುಂದೆ ರೋಗಿಗಳು ಸಾಲುಗಟ್ಟಿ ನಿಂತಿದ್ದಾರೆ. ಆಮ್ಲಜನಕ ಸಿಗದೆ ರಸ್ತೆಯಲ್ಲಿ ರೋಗಿಗಳು ನರಳಾಡುತ್ತಿದ್ದಾರೆ. ಈ ವಿಷಮ ಪರಿಸ್ಥಿತಿ ಕೇವಲ ಸಾಮಾನ್ಯರಿಗಲ್ಲ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ.
ಕನ್ನಡದ ಯುವ ನಟಿ ಸಂಯುಕ್ತಾ ಹೊರನಾಡು ಇಂದು ಸಂಜೆ 4 ಗಂಟೆ ವೇಳೆಗೆ ಟ್ವೀಟ್ ಮಾಡಿದ್ದು, ಕೋವಿಡ್ ವಾರ್ ರೂಂಗಳ ಕರೆಗಳು ಬ್ಯುಸಿ ಬರುತ್ತಲೇ ಇವೆ. ಎಷ್ಟು ಹೊತ್ತು ಕಾದರು ಕರೆಗಳು ಕನೆಕ್ಟ್ ಆಗುತ್ತಿಲ್ಲ. ಬೆಂಗಳೂರು ಪೂರ್ವ, ಪಶ್ಚಿಮ ಜೋನ್ಗಳ ವಾರ್ ರೂಮ್ಗಳಿಂದ ಉತ್ತರವೇ ಬರುತ್ತಿಲ್ಲ' ಎಂದಿದ್ದಾರೆ.
ಆರು ಗಂಟೆಗಳಿಂದಲೂ ನಾವು ಐಸಿಯುಗಾಗಿ ಕಾಯುತ್ತಿದ್ದೇವೆ. ಆಮ್ಲಜನಕ ಕೊರತೆ, ಬೆಡ್ಗಳ ಕೊರತೆಯಿಂದ ರೋಗಿಗಳು ಆತಂಕದಲ್ಲಿ ಆಸ್ಪತ್ರೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ನಾವು ಜೀವನಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೊದಲು ಭ್ರಷ್ಟಾಚಾರವನ್ನು ಹೋಗಲಾಡಿಸಿ. ಯಾರು ಮಾಡಿದ್ದು? ಏಕೆ ಮಾಡಿದ್ದು ಎಲ್ಲಾ ಆಮೇಲೆ. ನಮಗೆ ಸಹಾಯ ಬೇಕಿದೆ ಈಗಲೇ'' ಎಂದು ಮನವಿ ಮಾಡಿದ್ದಾರೆ ನಟಿ ಸಂಯುಕ್ತಾ ಹೊರನಾಡು.
ಬೆಂಗಳೂರಿನಲ್ಲಿ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಖಾಲಿಯಿಲ್ಲ. ಆಮ್ಲಜನಕ ಕೊರತೆ, ಐಸಿಯು ಬೆಡ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಆಮ್ಲಜನಕ ಸೂಕ್ತ ಸಮಯಕ್ಕೆ ದೊರೆಯದೆ ಹಲವರು ಅಸುನೀಗಿದ್ದಾರೆ. ಪರಿಸ್ಥಿತಿ ದಿನೇ-ದಿನೇ ಹದಗೆಡುತ್ತಿದೆ.
Recommended Video
ನಗರದಲ್ಲಿ ಬೆಡ್ ಬ್ಲಾಕಿಂಗ್ಗಾಗಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಅವಶ್ಯಕತೆ ಇರುವ ಸಾವಿರಾರು ಜನರಿಗೆ ಬೆಡ್ಗಳು ಸಿಗುತ್ತಿಲ್ಲ. ಏಜೆಂಟ್ಗಳ ಮೂಲಕ ಬೆಡ್ಗಳು ಬುಕ್ ಆಗುತ್ತಿವೆ ಎಂದು ಆರೋಪಿಸಲಾಗಿದೆ.