Don't Miss!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈಲಿನಲ್ಲೇ ವಿಜಯದಶಮಿ ಹಬ್ಬ ಆಚರಿಸಿದ ಸಂಜನಾ ಗಲ್ರಾನಿ ಮತ್ತು ರಾಗಿಣಿ
ನಾಡಿನಾದ್ಯಂತ ದಸರಾ ಹಬ್ಬದವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಚಿತ್ರರಂಗ ಸಹ ಹಬ್ಬದ ಸಂಭ್ರಮದಲ್ಲಿದೆ. ಆದರೆ ಸ್ಯಾಂಡಲ್ ವುಡ್ ನ ಇಬ್ಬರು ನಟಿಯರು ಮಾತ್ರ ಜೈಲಿನಲ್ಲೇ ಕಾಲಕಳೆಯುವಂತಾಗಿದೆ. ಹೌದು, ಡ್ರಗ್ಸ್ ಜಾಲದ ಸಂಬಂಧ ಹರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಗಲ್ರಾನಿ ಇಬ್ಬರು ಜೈಲಿನಲ್ಲೇ ಈ ಬಾರಿ ದಸರಾ ಹಬ್ಬ ಆಚರಣೆ ಮಾಡಿದ್ದಾರೆ.
ಸುಮಾರು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲುವಾಸ ಅನುಭವಿಸುತ್ತಿರುವ ನಟಿ ಸಂಜನಾ ಮತ್ತು ರಾಗಿಣಿ ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ವಿಜಯದಶಮಿ ಹಬ್ಬದ ಸಮಯದಲ್ಲಾದರೂ ಜಾಮೀನು ಪಡೆದು ಮನೆಯಲ್ಲಿ ಹಬ್ಬ ಆಚರಣೆ ಮಾಡಬಹುದು ಎಂದುಕೊಂಡಿದ್ದ ನಟಿಯರ ಕನಸು ನನಸಾಗಿಲ್ಲ. ಹಾಗಾಗಿ ಜೈಲಿನಲ್ಲೇ ಹಬ್ಬ ಆಚರಣೆ ಮಾಡಬೇಕಾಗಿದೆ.
ಸಂಜನಾ-ರಾಗಿಣಿ ಗೆ ಜಾಮೀನು ನೀಡುವಂತೆ ಬೆದರಿಕೆ ಪತ್ರ ಬರೆದವನ ಬಂಧನ
ಮೂಲಗಳ ಪ್ರಕಾರ ನಟಿಯರಿಬ್ಬರು ಜೈಲಿನಲ್ಲೇ ಇರುವ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಿ ಹಬ್ಬ ಮಾಡಿದ್ದಾರಂತೆ. ಜೊತೆಗೆ ಆಯುಧ ಪೂಜೆಯಲ್ಲೂ ಪಾಲ್ಗೊಂಡಿದ್ದಾರೆ. ಹಬ್ಬದ ದಿನ ನೀಡುವ ವಿಶೇಷ ಒಬ್ಬಟ್ಟಿನ ಊಟವನ್ನು ಸವಿದಿದ್ದಾರೆ. ಪ್ರತೀವರ್ಷ ಮನೆಯಲ್ಲಿ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡುತ್ತಿದ್ದ ನಟಿಯರು ಈ ವರ್ಷ ಜೈಲಿನಲ್ಲಿ ಇರುವಂತೆ ಆಗಿದೆ.
Recommended Video
ನಟಿ ರಾಗಿಣಿಯನ್ನು ಸೆಪ್ಟಂಬರ್ 4ರಂದು ಬಂಧಿಸಲಾಗಿದೆ. ಸೆಪ್ಟಂಬರ್ 8ರಂದು ನಟಿ ಸಂಜನಾ ಅವರನ್ನು ಬಂಧಿಸಲಾಗಿದೆ. ಇಬ್ಬರೂ ನಟಿಯರ ಜಾಮೀನು ಅರ್ಜಿ ಮುಂದಕ್ಕೆ ಹೋಗುತ್ತಲೆ ಇದೆ. ಕೊನೆಯಪಕ್ಷ ದೀಪಾವಳಿ ಹಬ್ಬಕ್ಕಾದರೂ ಜಾಮೀನು ಸಿಗಬಹುದಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ದೀಪಾಳಿಯನ್ನಾದರೂ ಕುಟುಂಬದ ಅದ್ದೂರಿಯಾಗಿ ಆಚರಿಸುತ್ತಾರಾ ಎಂದು ಕಾದುನೋಡಬೇಕು.