Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬೆಳಕು 'ಸರಿತಾ'ಗೆ ತಮಿಳಿನಲ್ಲಿ ಹೊಸ ಇನಾಮ್
ಚಲಿಸುವ ಮೋಡಗಳು, ಹೊಸ ಬೆಳಕು, ಮೌನಗೀತೆ, ಕಾಮನಬಿಲ್ಲು, ಮುಗಿಲ ಮಲ್ಲಿಗೆ, ಭಕ್ತ ಪ್ರಹ್ಲಾದ, ಎರಡು ರೇಖೆಗಳು ಸೇರಿದಂತೆ ಮುಂತಾದ ಚಿತ್ರಗಳ ಮೂಲಕ ಜನಮನ ಸೂರೆಗೊಂಡ ತಾರೆ ಸರಿತಾ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ತನ್ನ ಪತಿ ಮುಕೇಶ್ ಎರಡನೇ ಮದುವೆಯಾಗಿದ್ದು, ನೃತ್ಯಪಟು ಮಿಥಿಲ್ ದೇವಿಕಾ ಅವರ ಕೈಹಿಡಿದದ್ದು ಸರಿತಾ ಸಾಂಸಾರಿಕ ಜೀವನ ತಾಳತಪ್ಪಿತ್ತು. ಈಗವರು ಸ್ವಲ್ಪ ರಿಲ್ಯಾಕ್ಸ್ ಆದಂತೆ ಕಾಣುತ್ತಿದ್ದಾರೆ. ತಮಿಳಿನ 'ಇನಾಂ' ಚಿತ್ರಕ್ಕೆ ಸಹಿಹಾಕಿದ್ದು ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ. ['ಕಾಮನಬಿಲ್ಲು' ಸರಿತಾ ಸಂಸಾರದಲ್ಲಿ 'ತಪ್ಪಿದ ತಾಳ']
ಚಿತ್ರದಲ್ಲಿ ಸರಿತಾ ಅವರು ಸುನಾಮಿಕಾ ಪಾತ್ರ ಪೋಷಿಸಲಿದ್ದಾರೆ. ಸುನಾಮಿಯ ಕಾರಣ ತನ್ನೆಲ್ಲಾ ಬಂಧು ಬಳಗ ಕಳೆದುಕೊಂಡು ಅನಾಥೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಶ್ರೀಲಂಕಾ ಯುದ್ಧದಲ್ಲಿ ತಂದೆತಾಯಿಯನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ತಾಯಿಯಾಗಿ ಅವರ ಪಾತ್ರ ಇರುತ್ತದೆ.
ಅನಾಥ ಮಕ್ಕಳನ್ನು ತಾನು ಹೆತ್ತ ಮಕ್ಕಳಂತೆ ನೋಡಿಕೊಳ್ಳುವ ಸುನಾಮಿಕಾ ಮತ್ತೆ ಶ್ರೀಲಂಕಾ ಅಂತರ್ಯುದ್ಧದಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. 204ರಲ್ಲಿ ತೆಲುಗಿನ ಅರ್ಜುನ್ ಚಿತ್ರದಲ್ಲಿ ಸರಿತಾ ಅಭಿನಯಿಸಿದ್ದರು. ಅದಾದ ಬಳಿಕ ಅವರು ಬಣ್ಣಹಚ್ಚಲಿಲ್ಲ. ಇದೀಗ ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ.