Don't Miss!
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾರಣಾಸಿಯಿಂದ ಬಂದು, ಕನ್ನಡ ಕಲಿತು, ಡಬ್ ಮಾಡಿದ ಶಾನ್ವಿ
Recommended Video
ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ, ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಅವರೇ ಶಾನ್ವಿ ಶ್ರೀವಾತ್ಸವ.
'ಚಂದ್ರಲೇಖ' ಸಿನಿಮಾದಿಂದ ಶ್ವಾನ್ವಿ ಶ್ರೀವತ್ಸಾವ ಕನ್ನಡದಲ್ಲಿ ತಮ್ಮ ಕೆರಿಯರ್ ಶುರು ಮಾಡಿದರು. ಆಗ ಚಿತ್ರೀಕರಣದ ಸೆಟ್ ನಲ್ಲಿ ಅವರಿಗೆ ಕನ್ನಡ ಅರ್ಧ ಆಗುತ್ತಿರಲಿಲ್ಲ. ಆದರೆ, ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿ ಪಾತ್ರವಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ ಬರೆದಿದ್ದಾರೆ.
'ಶ್ರೀಮನ್ನಾರಾಯಣ'ನಿಗೆ ಮಸಿ ಬಳಿಯುವ ಪ್ರಯತ್ನ: ರಕ್ಷಿತ್ ಟಾರ್ಗೆಟ್ ಮಾಡಿದ ಕಿಡಿಗೇಡಿಗಳು!
ಮೊದಲ ಮೊದಲು ಶಾನ್ವಿಗೆ ಭಾಷೆ ತಿಳಿಯದ ಕಾರಣಕ್ಕೆ ಶೂಟಿಂಗ್ ಸೆಟ್ ನಲ್ಲಿ ತುಂಬ ಭಯ ಆಗುತ್ತಿತ್ತಂತೆ. 'ಚಂದ್ರಲೇಖ' ಸಿನಿಮಾದಲ್ಲಿ ದೆವ್ವದ ಪಾತ್ರ ಮಾಡಿದ್ದು, ಮುಂದೆ ಅದೇ ರೀತಿಯ ಪಾತ್ರಗಳು ಹುಡುಕಿಕೊಂಡು ಬಂದವಂತೆ. ಆದರೆ, 'ಮಾಸ್ಟರ್ ಪೀಸ್' ಸಿನಿಮಾದ ನಂತರ ಶಾನ್ವಿ ಅದೃಷ್ಟ ಬದಲಾಯಿತು.
'ತಾರಕ್' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದರು. 'ಮಫ್ತಿ' ಹಾಗೂ 'ಸಾಹೇಬ' ಸಿನಿಮಾದಲ್ಲಿ ನಟಿಸಿದರು. ಗಣೇಶ್ ಜೊತೆಗೆ 'ಸುಂದರಾಂಗ ಜಾಣ' ಹಾಗೂ 'ಗೀತಾ'ಗೆ ನಾಯಕಿಯಾದರು. ಕನ್ನಡದ ನಟಿಯ ರೀತಿ ಪ್ರೇಕ್ಷಕರು ಅವರನ್ನು ಇಷ್ಟಪಟ್ಟರು.
'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ನಿರ್ಮಾಪಕ
ಇದೀಗ ಶಾನ್ವಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ 55 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, 15 ದಿನಗಳ ಕಾಲ ಡಬ್ಬಿಂಗ್ ಮಾಡಿದ್ದಾರೆ. ಈ ಬಾರಿ ಲಕ್ಷ್ಮಿ ಪಾತ್ರದಲ್ಲಿ ಜನರ ಮುಂದು ಬರುತ್ತಿದ್ದು, ಕನ್ನಡಿಗರ ಪ್ರೀತಿಯ ನಿರೀಕ್ಷೆಯಲ್ಲಿ ಇದ್ದಾರೆ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಈ ರೀತಿ ಕನ್ನಡ ಜನರಿಗೆ ಶಾನ್ವಿ ಶ್ರೀವತ್ಸವ ತಿಳಿಸಿದ್ದಾರೆ.