twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾದಲ್ಲಿ ಗೆಲ್ಲದಿದ್ದರೇನಂತೆ, ಸಿಸಿಎಲ್ ರಾಯಭಾರಿ ಆಗಿಲ್ವಾ?

    By Suneetha
    |

    'ಕಣ್ ಕಣ್ಣ ಸಲಿಗೆ' ಅಂತ ನಟ ಧರ್ಮ ಕೀರ್ತಿರಾಜ್ ಅವರ ಜೊತೆ ಡ್ಯುಯೆಟ್ ಹಾಡಿದ್ದ ನಟಿ ಶರ್ಮಿಳಾ ಮಾಂಡ್ರೆ ಮತ್ತೆ 'ಮುಮ್ತಾಜ್' ಚಿತ್ರದಲ್ಲಿ ಅದೇ ಧರ್ಮ ಅವರ ಜೊತೆ ನಟಿಸಿದ್ದರು.

    ಆಮೇಲೆ ಚಂದನವನದ ತೆರೆಯ ಮೇಲೆ ಪತ್ತೆಯೇ ಇಲ್ಲದ ಮಾಂಡ್ರೆ ಇದೀಗ ದಿಢೀರ್ ಅಂತ ಸಿ.ಸಿ.ಎಲ್ ಕರ್ನಾಟಕ ಬುಲ್ಡೋಜರ್ ತಂಡದ ರಾಯಭಾರಿಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.[ಸಿಸಿಎಲ್ ಮ್ಯಾಚ್ ನಿಂದ ಕಿಚ್ಚ ಅವರಿಗೆ ಸಿಗುವ ಸಂಭಾವನೆ ಎಷ್ಟು]

    ಇನ್ನು ಶರ್ಮಿಳಾ ಅವರದೇ ಸಾಲಿಗೆ ಸೇರ್ಪಡೆಗೊಳ್ಳುವ ಮತ್ತೋರ್ವ ನಟಿ ಪಾರ್ವತಿ ನಾಯರ್. ಹೌದು ಈ ಇಬ್ಬರು ನಟಿ-ಮಣಿಯರು ಇದೀಗ ಸಿ.ಸಿ.ಎಲ್ ನ ಪ್ರಚಾರ ರಾಯಭಾರಿಗಳಾಗಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡದವರನ್ನು ಹುರಿದುಂಬಿಸುವ ಕೆಲಸ ಮಾಡಲಿದ್ದಾರೆ.

    ನಟಿ ಪಾರ್ವತಿ ನಾಯರ್ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ್ದು, ಆಯ್ತು ತದನಂತರ ಕನ್ನಡದಲ್ಲಿ ನಟ ಕಿಶೋರ್ ಅವರ ಜೊತೆ 'ವಾಸ್ಕೋಡಿಗಾಮ' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಆದರೂ ನಟಿಗೆ ಯಾಕೋ ಅದೃಷ್ಟ ಒಲಿಯಲಿಲ್ಲ.

    ಅಂದಹಾಗೆ ಸಿನಿಮಾ ಮಾಡಿ ಗುರುತಿಸಿಕೊಳ್ಳದಿದ್ದರೆ ಏನಂತೆ ಇದೀಗ ಸಿ.ಸಿ.ಎಲ್ ಮೂಲಕ ಗುರುತಿಸಿಕೊಂಡು ಮುಂದಿನ ದಿನಗಳಲ್ಲಿ ಇಬ್ಬರು ಒಳ್ಳೆ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರಾ ಅಂತ ಕಾದು ನೋಡಬೇಕಿದೆ.

    English summary
    Actress Sharmila Mandre and Actress Parwathy Nair ambassador for CCL Cricket league (Karnataka Bulldozers).
    Monday, January 25, 2016, 18:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X