ಹೊಂಗೆಮರದ ಕೆಳಗೆ ಶೃಂಗಾರವಾಡಿದ್ದ ಪಂಚತಂತ್ರ ನಾಯಕಿ ಈಗ ನಿರ್ಮಾಪಕಿ!
ಪಂಚತಂತ್ರ ಸಿನಿಮಾದ 'ಶೃಂಗಾರದ ಹೊಂಗೆಮರ..' ಹಾಡನ್ನು ಸಿನಿರಸಿಕರು ಮರೆಯುವಂತಿಲ್ಲ. ಹಾಡಿಗೆ ತಕ್ಕಂತೆ ರೊಮ್ಯಾಂಟಿಕ್ ಆಗಿ ಮೈಬಳುಕಿಸಿದ್ದ ನಾಯಕಿ ಸೋನಲ್ ಮಂಥೇರೋ ಇದ್ದಕ್ಕಿದ್ದಂತೆ ನಿರ್ಮಾಪಕಿಯಾಗಿಬಿಟ್ಟಿದ್ದಾರೆ.
Recommended Video
ಪಂಚರಂಗಿ ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ, ಬಾಲಿವುಡ್ ಗೂ ಅಡಿಯಿಟ್ಟುಬಂದ ಸೋನಲ್ ಇದ್ದಕ್ಕಿದ್ದಂತೆ ನಿರ್ಮಾಪಕಿಯಾಗಿದ್ದಾರೆ.
ಕನ್ನಡ ಸಿನಿಮಾದಲ್ಲಿ ಅವಕಾಶಗಳು ಸಾಕಷ್ಟು ಸಿಗುವ ವೇಳೆಯಲ್ಲಿಯೇ ಏಕಾ-ಏಕಿ ಹೀಗೆ ನಿರ್ಮಾಪಕಿಯಾಗಿರುವುದು ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.

ಸೋನಲ್ ಅವರು ವೆಬ್ ಸರಣಿಯೊಂದನ್ನು ನಿರ್ಮಾಣ ಮಾಡಿದ್ದಾರೆ. ಥ್ರಿಲ್ಲರ್ ಮಾದರಿಯ ಈ ವೆಬ್ಸೀರೀಸ್ ನ ಪ್ರತಿ ಎಪಿಸೋಡ್ 20 ನಿಮಿಷವಿರುತ್ತದೆ, ಒಟ್ಟು ಆರು ಎಪಿಸೋಡ್ ಈಗಾಗಲೇ ತಯಾರಾಗಿದೆ ಎನ್ನಲಾಗುತ್ತಿದೆ.
ಸೋನಲ್ ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ತುಳುವಿನಲ್ಲಿ ಎಕ್ಕ ಸಾಕಾ, ಜೈ ತುಳುನಾಡು, ಒಇಲಿಬೈಲ್ ಯಮುನಕ್ಕ. ಅರ ಮೊದಲ ಕನ್ನಡ ಸಿನಿಮಾ ಅಭಿಸಾರಿಕ.
ಸೋನಲ್ ಅವರು ಪಂಚತಂತ್ರ ಸಿನಿಮಾದಲ್ಲಿ ನಟಿಸುವ ಮುನ್ನಾ, ಎಂಎಲ್ಎ, ಮದುವೆ ದಿಬ್ಬಣ, ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲೂ ಅವರು ನಟಿಸಿದ್ದಾರೆ, ಅದರ ಜೊತೆ ಬುದ್ದಿವಂತ 2 ಸಿನಿಮಾದಲ್ಲೂ ಪಾತ್ರ ಮಾಡಿದ್ದಾರೆ.


Click it and Unblock the Notifications











