Don't Miss!
- Finance ಇನ್ಮುಂದೆ OTP ವಂಚನೆಗೆ ಬೀಳಲಿದೆ ಬ್ರೇಕ್, ಏನಿದು ಹೊಸ ವ್ಯವಸ್ಥೆ?
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- News ಬೊಂಬಾಟ್ ಲುಕ್ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಬೈಕ್
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಂಗೆಮರದ ಕೆಳಗೆ ಶೃಂಗಾರವಾಡಿದ್ದ ಪಂಚತಂತ್ರ ನಾಯಕಿ ಈಗ ನಿರ್ಮಾಪಕಿ!
ಪಂಚತಂತ್ರ ಸಿನಿಮಾದ 'ಶೃಂಗಾರದ ಹೊಂಗೆಮರ..' ಹಾಡನ್ನು ಸಿನಿರಸಿಕರು ಮರೆಯುವಂತಿಲ್ಲ. ಹಾಡಿಗೆ ತಕ್ಕಂತೆ ರೊಮ್ಯಾಂಟಿಕ್ ಆಗಿ ಮೈಬಳುಕಿಸಿದ್ದ ನಾಯಕಿ ಸೋನಲ್ ಮಂಥೇರೋ ಇದ್ದಕ್ಕಿದ್ದಂತೆ ನಿರ್ಮಾಪಕಿಯಾಗಿಬಿಟ್ಟಿದ್ದಾರೆ.
Recommended Video
ಪಂಚರಂಗಿ ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ, ಬಾಲಿವುಡ್ ಗೂ ಅಡಿಯಿಟ್ಟುಬಂದ ಸೋನಲ್ ಇದ್ದಕ್ಕಿದ್ದಂತೆ ನಿರ್ಮಾಪಕಿಯಾಗಿದ್ದಾರೆ.
ಕನ್ನಡ ಸಿನಿಮಾದಲ್ಲಿ ಅವಕಾಶಗಳು ಸಾಕಷ್ಟು ಸಿಗುವ ವೇಳೆಯಲ್ಲಿಯೇ ಏಕಾ-ಏಕಿ ಹೀಗೆ ನಿರ್ಮಾಪಕಿಯಾಗಿರುವುದು ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.
ಸೋನಲ್ ಅವರು ವೆಬ್ ಸರಣಿಯೊಂದನ್ನು ನಿರ್ಮಾಣ ಮಾಡಿದ್ದಾರೆ. ಥ್ರಿಲ್ಲರ್ ಮಾದರಿಯ ಈ ವೆಬ್ಸೀರೀಸ್ ನ ಪ್ರತಿ ಎಪಿಸೋಡ್ 20 ನಿಮಿಷವಿರುತ್ತದೆ, ಒಟ್ಟು ಆರು ಎಪಿಸೋಡ್ ಈಗಾಗಲೇ ತಯಾರಾಗಿದೆ ಎನ್ನಲಾಗುತ್ತಿದೆ.
ಸೋನಲ್ ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ತುಳುವಿನಲ್ಲಿ ಎಕ್ಕ ಸಾಕಾ, ಜೈ ತುಳುನಾಡು, ಒಇಲಿಬೈಲ್ ಯಮುನಕ್ಕ. ಅರ ಮೊದಲ ಕನ್ನಡ ಸಿನಿಮಾ ಅಭಿಸಾರಿಕ.
ಸೋನಲ್ ಅವರು ಪಂಚತಂತ್ರ ಸಿನಿಮಾದಲ್ಲಿ ನಟಿಸುವ ಮುನ್ನಾ, ಎಂಎಲ್ಎ, ಮದುವೆ ದಿಬ್ಬಣ, ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲೂ ಅವರು ನಟಿಸಿದ್ದಾರೆ, ಅದರ ಜೊತೆ ಬುದ್ದಿವಂತ 2 ಸಿನಿಮಾದಲ್ಲೂ ಪಾತ್ರ ಮಾಡಿದ್ದಾರೆ.