Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಶ್ರೀಕಾಂತ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನಟಿ ಶ್ರೀರೆಡ್ಡಿ
ಇತ್ತೀಚಿಗಷ್ಟೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ ಮಾಡಿದ್ದ ನಟಿ ಶ್ರೀರೆಡ್ಡಿ ಈಗ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಶ್ರೀರೆಡ್ಡಿ ವಿರುದ್ಧವಾಗಿ ಯಾರೇ ಮಾತನಾಡಿದ್ರು, ಅವರ ಬಗ್ಗೆ ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸುತ್ತಿದ್ದಾರೆ.
ಇದೀಗ, ತೆಲುಗು ನಟ ಶ್ರೀಕಾಂತ್ ಅವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ ಟಾಲಿವುಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶ್ರೀರೆಡ್ಡಿ ಅವರ ಆರೋಪಗಳೆಲ್ಲವೂ ಸುಳ್ಳು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶ್ರೀಕಾಂತ್ ಗೆ ಶ್ರೀರೆಡ್ಡಿ ಕೂಡ ತಿರುಗೇಟು ನೀಡಿದ್ದಾರೆ.
ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಅರೆನಗ್ನ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ
'ಕಾಸ್ಟಿಂಗ್ ಕೌಚ್' ವಿವಾರದಲ್ಲಿ ತೆಲುಗು ಇಂಡಸ್ಟ್ರಿಯನ್ನ ಬೆಂಬಿಡದೆ ಕಾಡುತ್ತಿರುವ ಶ್ರೀರೆಡ್ಡಿ ಒಬ್ಬೊಬ್ಬರ ಬಗ್ಗೆಯೇ ಹೇಳಿಕೆಗಳನ್ನ ಕೊಡ್ತಿದ್ದಾರೆ. ಶ್ರೀರೆಡ್ಡಿಯ ಈ ವೇಗಕ್ಕೆ ಬ್ರೇಕ್ ಹಾಕಿರುವ ಕಲಾವಿದರ ಸಂಘ, ಆಕೆಯ ಜೊತೆ ಸಿನಿಮಾಗಳನ್ನ ಮಾಡದಂತೆ ಸೂಚನೆ ನೀಡಿದೆ. ಅಷ್ಟಕ್ಕೂ, ಶ್ರೀಕಾಂತ್ ಬಗ್ಗೆ ಶ್ರೀರೆಡ್ಡಿ ಏನಂದ್ರು.? ಮುಂದೆ ಓದಿ....
ಶ್ರೀರೆಡ್ಡಿ ಬಗ್ಗೆ ಶ್ರೀಕಾಂತ್ ಏನು ಹೇಳಿದ್ದರು.?
ನಟ ಶ್ರೀಕಾಂತ್ ಬಗ್ಗೆ ಏನಂದ್ರು ಎನ್ನವುದಕ್ಕೂ ಮೊದಲು, ಶ್ರೀರೆಡ್ಡಿ ಬಗ್ಗೆ ಶ್ರೀಕಾಂತ್ ಏನು ಹೇಳಿದ್ದರು ಎಂಬುದು ತಿಳಿಯಬೇಕಿದೆ. ವಾಣಿಜ್ಯ ಮಂಡಳಿಯ ಎದುರು ಅರೆನಗ್ನ ಪ್ರತಿಭಟನೆ ಮಾಡಿದ ನಂತರ ಕಲಾವಿದರ ಸಂಘ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಕಾಂತ್ ''ಟಿವಿಯಲ್ಲಿ ಶ್ರೀರೆಡ್ಡಿಯ ಪ್ರತಿಭಟನೆ ನೋಡಿ ಎಲ್ಲರಿಗೂ ಶಾಕ್ ಆಗಿದೆ. ಮಕ್ಕಳು, ಹೆಂಗಸರು ನೋಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದುಕೊಂಡಿದ್ದವರೆಲ್ಲ ಇಂತಹ ಘಟನೆ ನೋಡಿ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ'' ಎಂದಿದ್ದರು.
ನಮಗೆ ದೂರು ನೀಡಬೇಕು
''ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ ಹೀಗೆ ಪ್ರತಿಯೊಂದಕ್ಕು ಸಂಘಟನೆಗಳಿವೆ. ಏನಾದರೂ ಸಮಸ್ಯೆಗಳು ಇದ್ದರೇ, ಆಯಾ ವಿಭಾಗಕ್ಕೆ ದೂರು ನೀಡಿ. ಇಲ್ಲಿ ಸದಸ್ಯರು ಆಗಿರಲೇಬೇಕು ಅಂತ ಇಲ್ಲ. ಅದನ್ನ ಬಿಟ್ಟು ಟಿವಿಯಲ್ಲಿ ಕೂತು, ಸೋಶಿಯಲ್ ಮೀಡಿಯಾದಲ್ಲಿ ಕಿರುಚಾಡಿದ್ರೆ ಸಮಸ್ಯೆಯಾಗುವುದು ನಮಗೆ'' ಎಂದು ಶ್ರೀರೆಡ್ಡಿಗೆ ಬುದ್ದಿವಾದ ಹೇಳಿದ್ರು.
ರಕುಲ್ ಪ್ರೀತ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ ಮಾಧವಿ ಲತಾ.!
ನೀವು ಸಿನಿಮಾ ಮಾಡುವಾಗ ನಾಚಿಕೆ ಆಗಲ್ವಾ.?
''ಕಪ್ಪು ಕನ್ನಡಕಗಳನ್ನ ಹಾಕ್ಕೊಂಡು, ಕಾರುಗಳಲ್ಲಿ ಓಡಾಡ್ಕೊಂಡು ಸಿನಿಮಾ ಮಾಡ್ತೀರ. ನೀವು ಮಾಡುವಂತಹ ಸಿನಿಮಾಗಳಿಂದ ಮಕ್ಕಳಿಗೆ ನಾಚಿಕೆ ಆಗಲ್ವಾ.? ಉತ್ತರ ಕರ್ನಾಟಕದಿಂದ ನಟಿಯರನ್ನ ಕರೆಸಿ ಎಕ್ಸ್ ಪೋಸ್ ಮಾಡಿಸುವಾಗ ನಾಚಿಕೆ ಅನಿಸಿಲ್ವಾ.? ಎಂದು ಶ್ರೀರೆಡ್ಡಿ ಪ್ರಶ್ನಿಸಿದ್ದಾರೆ.
ಮದುವೆ ಆಗಿದ್ದರೂ ಮೈಮೇಲೆ ಬೀಳುವಾಗ ನಾಚಿಕೆ ಆಗಲ್ವಾ.?
''ನಿಮಗೆ ಮದುವೆ ಆಗಿದ್ದರೂ ಮತ್ತೊಬ್ಬರ ಪಕ್ಕದಲ್ಲಿ ಕೂತ್ಕೊಂಡು ಅವರ ಮೇಲೆ ಕೈ ಹಾಕಿವುದು, ಮೈಮೇಲೆ ಬೀಳುವಾಗ ನಾಚಿಕೆ ಆಗಿಲ್ವಾ. ಮಕ್ಕಳು ಈಗ ನೆನಪಾಗ್ತಾರೆ ಅಂದ್ರೆ, ನೀವು ಸಿನಿಮಾ ಮಾಡುವಾಗ ಮಕ್ಕಳು ನೆನಪಾಗಲಿಲ್ಲ. ನಿಮ್ಮ ಸಿನಿಮಾಗಳನ್ನ ಮಕ್ಕಳು ನೋಡುವಂತಿದೆಯಾ.?'' ಎಂದು ಶ್ರೀರೆಡ್ಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಪ್ರಮೈಸ್ ಆದ್ರೆ ಮಾತ್ರ ಸಿನಿಮಾ: ನೋವನ್ನ ತೊಡಿಕೊಂಡ ನಟಿ ಶ್ರೇರೆಡ್ಡಿ