Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಣ್ಣ ಹಚ್ಚಿದ 'ಮನ ಮೆಚ್ಚಿದ ಹುಡುಗಿ' ಸುಧಾರಾಣಿ ಪುತ್ರಿ ನಿಧಿ
ನಟ-ನಟಿಯರ ಮಕ್ಕಳು ಬಣ್ಣ ಹಚ್ಚುವುದರಲ್ಲಿ ಹೊಸ ವಿಷಯ ಏನಿಲ್ಲ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ರಕ್ಷಿತಾ, ದರ್ಶನ್, ವಿನಯ್ ರಾಜ್ ಕುಮಾರ್ ಹಾಗೂ ಲೇಟೆಸ್ಟ್ ಆಗಿ ಜೈಜಗದೀಶ್ ಮೂವರು ಪುತ್ರಿಯರು...ಹೀಗೆ ಅಪ್ಪ-ಅಮ್ಮ ನಡೆದು ಬಂದ ಹಾದಿಯಲ್ಲೇ ಮಕ್ಕಳು ಸಾಗಿದಂತೆ ನಟಿ ಸುಧಾರಾಣಿ ಪುತ್ರಿ ನಿಧಿ ಕೂಡ ಬಣ್ಣದ ಪ್ರಪಂಚಕ್ಕೆ ಅಡಿಯಿಟ್ಟಿದ್ದಾರೆ.
ಹಾಗಂತ ನಿಧಿ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಬದಲಾಗಿ, ಮೈಸೂರು ಟಾರ್ಪಲಿನ್ಸ್ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ಮಿಂಚಿದ್ದಾರೆ. [ಕನ್ನಡ ನಟಿ ಸುಧಾರಾಣಿ ಪತಿ ಬೇರಾರೂ ಅಲ್ಲ, 'ಇವರೇ'.!]
ಹಾಗ್ನೋಡಿದ್ರೆ, ನಿಧಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಏಳನೇ ವಯಸ್ಸಿನಲ್ಲಿ. ಆಗಲೇ, ಅಮ್ಮ ಸುಧಾರಾಣಿ ಜೊತೆ ಚಿತ್ರವೊಂದರಲ್ಲಿ ನಿಧಿ ಆಕ್ಟ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಅರ್ಧಕ್ಕೆ ನಿಂತುಹೋಯ್ತು. [ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!]
ಅದಾದ ಬಳಿಕ, ಓದಿನಲ್ಲೇ ಆಸಕ್ತಿ ತೋರಿದ್ದ ನಿಧಿ ಈಗ ಜಾಹಿರಾತಿನಲ್ಲಿ ಮಿನುಗಿದ್ದಾರೆ. ಸದ್ಯಕ್ಕಿನ್ನೂ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಧಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ. ಓದು ಮುಗಿದ ಬಳಿಕ ನಟನೆ ಬಗ್ಗೆ ಮಾತು ಎನ್ನುತ್ತಾರೆ.