ಯೋಧ ಗುರು ಕುಟುಂಬದ ನೆರವಿಗೆ ಬಂದ ಸುಮಲತಾ

ಪುಲ್ವಾಮಾ ದಾಳಿಯಿಂದ ಬಲಿಯಾದ ಯೋಧರಲ್ಲಿ ಕರ್ನಾಟಕದ ಗುರು ಕೂಡ ಒಬ್ಬರು. ಈ ವೀರ ಭಾರತೀಯ ಪುತ್ರನ ಅಂತಿಮ ಸಂಸ್ಕಾರ ಇದೀಗ ನಡೆಯುತ್ತಿದೆ.

ಯೋಧ ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ಕೊಟ್ಟ ಸುಮಲತಾ ಅಂಬರೀಶ್‌

ಮಂಡ್ಯದ ಯೋಧ ಗುರು ಕುಟುಂಬದ ನೆರವಿಗೆ ನಟಿ ಸುಮಲತಾ ಬಂದಿದ್ದಾರೆ. ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವುದಾಗಿ ಸುಮಲತಾ ಹೇಳಿದ್ದಾರೆ. ಗುರು ಅವರ ಕುಟುಂಬದ ಬಳಿ ಯಾವುದೇ ಜಮೀನು ಇರಲಿಲ್ಲ. ಹೀಗಾಗಿ ಅಂತಿಮ ಸಂಸ್ಕಾರ ಎಲ್ಲಿ ನಡೆಯುವುದು ಎಂಬ ಗೊಂದಲ ಇತ್ತು. ಈ ವೇಳೆ ಸುಮಲತಾ ಅಂತ್ಯ ಸಂಸ್ಕಾರಕ್ಕೆ ತಾವೇ ಭೂಮಿ ನೀಡುವುದಾಗಿ ತಿಳಿಸಿದ್ದರು.

ಬಳಿಕ ಜಿಲ್ಲಾಡಳಿತ ಸರ್ಕಾರಿ ಜಮೀಮಿನಲ್ಲಿ ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡಿದೆ. ಆದರೆ, ತಮ್ಮ ಮಾತಿನಂತೆ ನಡೆದುಕೊಳ್ಳುವುದಾಗಿ ಹೇಳಿದ ಸುಮಲತಾ ಅರ್ಧ ಎಕರೆ ಜಾಗವನ್ನು ಗುರು ಕುಟುಂಬಕ್ಕೆ ನೀಡುವುದಾಗಿ ಪ್ರಕಟಿಸಿದರು.

actress sumalatha ambareesh gave half acer land to martyr soldier guru

ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲಿ ಇರುವ ಜಮೀನಿನಲ್ಲಿ ಅರ್ಧ ಎಕರೆ ಜಮೀನನ್ನು ಯೋಧ ಗುರು ಅವರ ಕುಟುಂಬಕ್ಕೆ ನೀಡಲಾಗುತ್ತಿದೆ. ಮಂಡ್ಯದ ಸೊಸೆಯಾಗಿ ಇದು ನನ್ನ ಕರ್ತವ್ಯ ಎಂದು ಸುಮಲತಾ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಸದ್ಯ, ಸುಮಲತಾ ತಮ್ಮ ಪುತ್ರ ಅಭಿಷೇಕ್ ನಟನೆಯ 'ಅಮರ್' ಚಿತ್ರದ ಚಿತ್ರೀಕರಣಕ್ಕಾಗಿ ಮಲೇಷ್ಯಾದಲ್ಲಿ ಇದ್ದು, ವಾಪಸ್ ಬಂದ ಬಳಿಕವೇ ಗುರು ಕುಟುಂಬದ ಹೆಸರಿಗೆ ಜಮೀನು ರಿಜಿಸ್ಟರ್ ಮಾಡಿಸಲಿದ್ದಾರಂತೆ.

More from Filmibeat

English summary
Kannada actor Amabreesh wife Sumalatha Ambareesh gave half acer land to martyr soldier H.Guru. She tweeted about this and said this is my duty as daughter in law of Mandya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X