Don't Miss!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುರೂಪಿ ಚಲನಚಿತ್ರೋತ್ಸವಕ್ಕೆ ನಟಿ ತಾರಾ ಚಾಲನೆ
ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟಿ ಹಾಗೂ ಅರಣ್ಯ ನಿಗಮ ಮಂಡಳಿ ಅಧ್ಯಕ್ಷೆ ತಾರಾ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮೈಸೂರೆಂದರೆ ಆಪ್ತ ತಾಣ. ಎಲ್ಲರನ್ನೂ ಅಪ್ಪಿ ಒಪ್ಪಿಕೊಂಡಿರುವ ಈ ಊರಿಗೆ ಬಂದರೆ ಹೊಸ ಶಕ್ತಿ ಸಿಗುತ್ತದೆ. ಕಲೆಗಳ ತವರೂರು ಮೈಸೂರು. ಈ ನಗರದಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಬಹಳ ಖುಷಿಯಿಂದ ಉದ್ಘಾಟನೆ ನೆರವೇರಿಸಿದ್ದೇನೆ ಎಂದು ತಿಳಿಸಿದರು.
ಮಾರ್ಚ್ 03 'ವಿಶ್ವ ಕನ್ನಡ ಸಿನಿಮಾ ದಿನ': ಸಿಎಂ ಘೋಷಣೆ
ಚಲನಚಿತ್ರ ಒಂದು ಸಮಗ್ರ ಕಲೆ. ಇದರಲ್ಲಿ ಜಾತಿ, ಧರ್ಮ ಹುಡುಕಬಾರದು. ಕಲೆ ಎಲ್ಲವನ್ನೂ ಮೀರಿ ನಿಂತಿದೆ. ಕೇವಲ ಸೂಟುಬೂಟು ಹಾಕಿಕೊಂಡವರು ಮಾತ್ರ ಸಿನಿಮಾ ನೋಡಲು ಬರುವುದಿಲ್ಲ. ಸಿನಿಮಾಗೆ ಎಲ್ಲಾ ವರ್ಗದ ಪ್ರೇಕ್ಷಕರು ಇದ್ದಾರೆ. ಕಲಾವಿದನಿಗೆ ಗಡಿ, ಭಾಷೆಗಳ ಮಿತಿ ಇರುವುದಿಲ್ಲ. ಕಲಾವಿದರೆಲ್ಲವೂ ಒಗ್ಗಟ್ಟಾಗಿ ಇರಬೇಕು ಎಂದು ತಿಳಿಸಿದರು.
ಈ ಬಾರಿ ಬಹುರೂಪಿ ನಾಟಕೋತ್ಸವ ತಾಯಿ ಎಂಬ ಥೀಮ್ ಅಡಿ ನಡೆಯುತ್ತಿರುವುದು ಖುಷಿಯ ವಿಚಾರ. ಎಲ್ಲಾ ಪುರುಷರ ಹಿಂದೆ ಒಬ್ಬ ತಾಯಿ ಇದ್ದಾಳೆ. ಎಲ್ಲಾ ತಾಯಿ ಹಿಂದೆ ಒಬ್ಬ ಪುರುಷ ಇದ್ದಾನೆ. ತಾಯಿಗೆ ಆಕೆ ಅಷ್ಟೇ ಸಾಟಿ. ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸಿನಿಮಾ ಕೂಡ ಚಲನಚಿತ್ರೋತ್ಸವದಲ್ಲಿದೆ. ನಮ್ಮೆಲ್ಲರ ಹೃದಯ ಕಮಲದಲ್ಲಿ ಅವರು ಶಾಶ್ವತವಾಗಿ ನೆಲೆಸಿದ್ದಾರೆ. ಅವರಿಗೆ ಸಾವಿಲ್ಲ, ಸದಾ ಜೀವಂತವಾಗಿರುತ್ತಾರೆ ಎಂದರು.
ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರವಾದಿ ಮ್ಯಾನ್ ಮನು, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲ ಮಠಪತಿ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಂಚಾಲಕ ಅಂಜುಸಿಂಗ್ ಸೇರಿದಂತೆ ಇತರರು ಇದ್ದರು.
ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳಿವು
ಮೊದಲ ದಿನ ಕೊಡವ ಭಾಷೆಯ ದ ಸ್ಟೋರಿ ಆಫ್ ಕಾವೇರಿ, ಇಂಗ್ಲಿಷ್ ಭಾಷೆಯ ಕೇರಿಂಗ್ ಫಾರ್ 7 ಬಿಲಿಯನ್, ಕಜಕಿಸ್ತಾನದ ಕುರ್ಮಾಂಜನ್ ದಡ್ಕ ಚಿತ್ರ ಪ್ರದರ್ಶನಗೊಂಡವು.