Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದ 'ಗೂಳಿಹಟ್ಟಿ' ಗದ್ದಲ
'ಗೂಳಿಹಟ್ಟಿ' ಸಿನಿಮಾ ರಿಲೀಸ್ ಆಗಿ ಮೂರು ದಿನಗಳು ಕಳೆದಿವೆ ಅಷ್ಟೆ. ಅಷ್ಟು ಬೇಗ 'ಗೂಳಿಹಟ್ಟಿ' ಅಡ್ಡದಲ್ಲಿ ಗಲಾಟೆ ಶುರುವಾಗಿದೆ.
'ಗೂಳಿಹಟ್ಟಿ' ಚಿತ್ರದ ನಾಯಕಿ ತೇಜಸ್ವಿನಿಗೆ ನಾಯಕ ಪವನ್ ಸೂರ್ಯ ಬಾಯಿಗೆ ಬಂದ ಹಾಗೆ ಬೈಯ್ದಿದ್ದಾರೆ. ಇದ್ದಕ್ಕಿದ್ದಂತೆ ತೇಜಸ್ವಿನಿ ಮನೆಗೆ ತೆರಳಿದ ಹೀರೋ ಪವನ್ ಸೂರ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರಂತೆ. ['ಗೂಳಿಹಟ್ಟಿ' ಮೇಲೆ ಗುಟುರು ಹಾಕಿರುವ ವಿಮರ್ಶಕರು]
ಹಾಗಂತ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ನಟಿ ತೇಜಸ್ವಿನಿ ದೂರು ದಾಖಲಿಸಿದ್ದಾರೆ. ನಾಯಕಿ ತೇಜಸ್ವಿನಿ ಏಕ್ದಂ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವುದಕ್ಕೆ ಕಾರಣ ಏನು ಅನ್ನೋದರ ಡೀಟೇಲ್ಸ್ ಇಲ್ಲಿದೆ ನೋಡಿ.....
ಶನಿವಾರ ನಡೆದ 'ಗೂಳಿಹಟ್ಟಿ' ಗಲಾಟೆ
ಮೊನ್ನೆ ಶನಿವಾರ ಬೆಳ್ಳಗೆ ನಟಿ ತೇಜಸ್ವಿನಿ ಮನೆಗೆ 'ಗೂಳಿಹಟ್ಟಿ' ಚಿತ್ರದ ನಾಯಕ ಪವನ್ ಸೂರ್ಯ ತೆರಳಿದ್ದಾರೆ. ಮನೆಗೆ ತೆರಳಿದ ತಕ್ಷಣ ತೇಜಸ್ವಿನಿ ಮೇಲೆ ಹೌಹಾರಿದ್ದಾರೆ. ಏರು ಧ್ವನಿಯಲ್ಲಿ ಮಾತನಾಡುವುದಕ್ಕೆ ಶುರುಮಾಡಿದ ಪವನ್ ಸೂರ್ಯ ಈಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಪ್ರಮೋಷನ್ ಗೆ ಬರ್ಲಿಲ್ಲ ಅಂತ ಗಲಾಟೆ
ಅಸಲಿಗೆ ನಟಿ ತೇಜಸ್ವಿನಿ ಮನೆಗೆ ಪವನ್ ಸೂರ್ಯ ತೆರಳುವುದಕ್ಕೆ ಕಾರಣ 'ಪ್ರಮೋಷನ್ ಸ್ಟ್ರಾಟೆಜಿ'. ನಾಯಕಿ ತೇಜಸ್ವಿನಿ 'ಗೂಳಿಹಟ್ಟಿ' ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲವಂತೆ. ನಿರ್ದೇಶಕರು ಫೋನ್ ಮಾಡಿದರೂ, ಅವರ ಕರೆಗೆ ಸ್ಪಂದಿಸದ ನಟಿ ತೇಜಸ್ವಿನಿ ಮೇಲೆ ಗರಂ ಆದ ಪವನ್, ಸೀದಾ ಅವರ ಮನೆಗೆ ಹೋಗಿ ಕೂಗಾಡಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದನೆ
ಬರೀ ಕೂಗಾಡಿದ್ದು ಮಾತ್ರವಲ್ಲ. ನಟಿ ತೇಜಸ್ವಿನಿಗೆ ಅವಾಚ್ಯ ಶಬ್ದಗಳಿಂದ ಪವನ್ ಸೂರ್ಯ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ, ಬೆದರಿಕೆ ಕೂಡ ಹಾಕಿದ್ದಾರೆ ಅಂತ ತೇಜಸ್ವಿನಿ ಆರೋಪಿಸಿದ್ದಾರೆ.
ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲು
ಆದ ಘಟನೆಯಿಂದ ಬೇಸರಗೊಂಡ ನಟಿ ತೇಜಸ್ವಿನಿ, ಜೆ.ಪಿ.ನಗರ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ. ನಟ ಪವನ್ ಸೂರ್ಯ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಮೋಷನ್ ಗೆ ಬಾರದೇ ಇರುವುದಕ್ಕೆ ಕಾರಣ
ನಟಿ ತೇಜಸ್ವಿನಿ 'ನಿತ್ಯವೇ ಸತ್ಯ' ಅನ್ನುವ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಆದ ಕಾರಣ, 'ಗೂಳಿಹಟ್ಟಿ' ಪ್ರಮೋಷನ್ ನಲ್ಲಿ ಭಾಗವಹಿಸುತ್ತಿಲ್ಲ ಅನ್ನೋದು ಮೂಲಗಳಿಂದ ಬಂದಿರುವ ಮಾಹಿತಿ.
ಟಿ.ಆರ್.ಪಿ ಫೇಸ್ ಗಳು ಬೇಕು
''ಪ್ರಮೋಷನ್ ಗಳಿಗೆ ಅಂತ ಚಾನೆಲ್ ಗಳಿಗೆ ಹೋದರೆ, ನೋಟೆಡ್ ಫೇಸ್ ಗಳು ಬೇಕು. ಅವರಿದ್ದರೆ ಮಾತ್ರ ಪ್ರೋಗ್ರಾಂ ಅಂತಾರೆ. ಆದ್ರೆ, ನಟಿ ತೇಜಸ್ವಿನಿ ಬರ್ತಾಯಿಲ್ಲ. ಅವರಿಲ್ಲ ಅಂದ್ರೆ, ಪ್ರಮೋಷನ್ ಹೇಗೆ ಸಾಧ್ಯ'' ಅಂತ ನಟ ಪವನ್ ಸೂರ್ಯ ಹೇಳುತ್ತಾರೆ.
ಬಿಟ್ಟಿ ಪಬ್ಲಿಸಿಟಿ ಆಯ್ತಲ್ಲ.!
ಸಿನಿಮಾ ಪ್ರಮೋಷನ್ ಒಳ್ಳೆ ರೀತಿಯಲ್ಲಿ ಆಗದೇ ಇದ್ದರೂ, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಮೇಲೆ 'ಗೂಳಿಹಟ್ಟಿ' ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅಲ್ಲಿಗೆ, ಸಿನಿಮಾಗೆ ಪಬ್ಲಿಸಿಟಿ ಆಗ್ತಿದೆಯಲ್ವಾ.!