Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ನಲ್ಲಿ ಸೊಲ್ಲಾಪುರ ಬೆಡಗಿ ಸೆಕೆಂಡ್ ಇನ್ನಿಂಗ್ಸ್
ಸ್ಯಾಂಡಲ್ ವುಡ್ ನಲ್ಲಿ ಈ ಸೊಲ್ಲಾಪುರದ ಬೆಡಗಿ ಮಿಂಚಿದ್ದು ಬಹಳ ಕಡಿಮೆ. ಕನ್ನಡದಲ್ಲಿ ಅಭಿನಯಿಸಿದ್ದು ಒಂದೇ ಒಂದು ಚಿತ್ರವಾದರೂ ಚಿತ್ರರಸಿಕರ ಮನಸ್ಸಿನಲ್ಲಿ ಮಾತ್ರ ಚಿರಮುದ್ರೆಯನ್ನು ಒತ್ತಿದರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಸಂಗಮ'ದಲ್ಲಿ ಅಭಿನಯಿಸಿದ್ದ ವೇದಿಕಾ ಇದೀಗ ಮತ್ತೆ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಚಿತ್ರಕ್ಕೆ ನಾಯಕಿಯಾಗಿ ವೇದಿಕಾ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಸಿಬಿಐ ಅಧಿಕಾರಿಯಾಗಿ ಕಾಣಿಸುತ್ತಿದ್ದು, ಇದೇ ಡಿಸೆಂಬರ್ 15ಕ್ಕೆ ಚಿತ್ರ ಸೆಟ್ಟೇರುತ್ತಿದೆ. ಹಲವು ಯಶಸ್ವಿ ಚಿತ್ರಗಳ ಸೂತ್ರಧಾರ ಪಿ.ವಾಸು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. [ಲಾಂಗು, ಮಚ್ಚಿಗೆ ಗುಡ್ ಬೈ ಹೇಳಿದ ಹ್ಯಾಟ್ರಿಕ್ ಹೀರೋ]
'ಗೋವಿಂದಾಯ ನಮಃ' ಚಿತ್ರವನ್ನು ನಿರ್ಮಿಸಿದ್ದ ಸುರೇಶ್ ಅವರು 'ಶಿವಲಿಂಗ'ಕ್ಕೆ ಕಾಸಿನ ಅಭಿಷೇಕ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತದ ಜಡಿಮಳೆಯ ಚಿತ್ರದ ರೆಗ್ಯುಲರ್ ಶೂಟಿಂಗ್ ಡಿಸೆಂಬರ್ 28ರಿಂದ ಆರಂಭವಾಗಲಿದೆ ಎನ್ನುತ್ತವೆ ಮೂಲಗಳು.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಬುಗುರಿ' ಚಿತ್ರದಲ್ಲಿ ಅಭಿನಯಿಸಿ ಮಧ್ಯಂತರದಲ್ಲೇ ವೇದಿಕಾ ಚಿತ್ರದಿಂದ ಹೊರಬಿದ್ದಿದ್ದರು. ತೆಲುಗು, ತಮಿಳಿನಲ್ಲಿ ವೇದಿಕಾ ಬಿಜಿಯಾಗಿದ್ದರೂ ಕನ್ನಡದಲ್ಲಿ ಮಾತ್ರ 'ಶಿವಲಿಂಗ' ಎರಡನೇ ಇನ್ನಿಂಗ್ಸ್.
ಈ ಬಾರಿ ವಾಸು ಕೋಲಿವುಡ್ ನ ಚೆಲುವೆಗೆ ಮಣೆಹಾಕಲಿದ್ದಾರೆ ಎನ್ನಲಾಗಿತ್ತು. ಅವರ ಮನಸ್ಸಿನಲ್ಲಿ 'ಸಂಗಮ'ದ ಚೆಲುವೆ ಇದ್ದರು ಎಂಬುದು ಈಗ ಬಹಿರಂಗವಾಗಿದೆ. ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ, ಆರ್ ಎಕ್ಸ್ ಸೂರಿ ಚಿತ್ರಗಳನ್ನು ನಿರ್ಮಿಸಿದ್ದ ಸುರೇಶ್ ಅವರು ಶಿವಲಿಂಗ ಚಿತ್ರದ ನಿರ್ಮಾಪಕರು. ಬೆಳ್ಳಿ ಚಿತ್ರದಲ್ಲಿ ಒಂದೇ ಹಿಡಿಯ ಐದು ಲಾಂಗ್ ಗಳನ್ನು ಝಳಪಿಸಿದ್ದ ಶಿವಣ್ಣ ಈಗ ಸಿಐಡಿ ಅಧಿಕಾರಿಯಾಗಿ ಗನ್ ಹಿಡಿಯುತ್ತಿದ್ದಾರೆ.