Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತೋತಾಪುರಿ'ಯಲ್ಲಿ 'ಶಕೀಲ ಭಾನು' ಆದ ಅದಿತಿ ಪ್ರಭುದೇವ
ಅಜಯ್ ರಾವ್ ಅಭಿನಯದ 'ಧೈರ್ಯಂ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಅದಿತಿ ಪ್ರಭುದೇವ ಕಿರುತೆರೆಯಲ್ಲೂ 'ನಾಗಕನ್ನಿಕೆ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು.
ಸುನಿ ನಿರ್ದೇಶನದ 'ಬಝಾರ್' ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿರುವ ಅದಿತಿ ಪ್ರಭುದೇವ ಸದ್ಯಕ್ಕೆ 'ತೋತಾಪುರಿ' ರುಚಿ ನೋಡಿದ್ದಾರೆ.
ನಿಮಗೆಲ್ಲಾ ಗೊತ್ತಿರುವ ಹಾಗೆ 'ನೀರ್ ದೋಸೆ' ಜೋಡಿ ನಿರ್ದೇಶಕ ವಿಜಯ ಪ್ರಸಾದ್ ಮತ್ತು ಜಗ್ಗೇಶ್ ಮತ್ತೆ ಒಂದಾಗಿರುವುದು 'ತೋತಾಪುರಿ' ಚಿತ್ರದ ಮೂಲಕ. ಸುಮನ್ ರಂಗನಾಥ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಕೂಡ ನಟಿಸುತ್ತಿದ್ದಾರೆ.
ಈ ಬಾರಿ 'ತೋತಾಪುರಿ' : ಮತ್ತೆ ಒಂದಾದ 'ನೀರ್ ದೋಸೆ' ಜೋಡಿ
'ತೋತಾಪುರಿ' ಚಿತ್ರದಲ್ಲಿ ಅದಿತಿ ಪ್ರಭುದೇವ 'ಶಕೀಲ ಭಾನು' ಪಾತ್ರ ನಿರ್ವಹಿಸುತ್ತಿದ್ದಾರೆ. ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡಿರುವ ಅದಿತಿ, ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಸ್ಟಾರ್ ನಟನ ಜೊತೆಗೆ ನಟಿಸೋ ಅವಕಾಶ ಪಡೆದ ಕಾವ್ಯ ಶೆಟ್ಟಿ
ಒಂದುವರೆ ತಿಂಗಳಲ್ಲಿ ಆರು ಕೆ.ಜಿ ತೂಕ ಹೆಚ್ಚಿಸಿಕೊಂಡು ಶಕೀಲ ಭಾನು ಪಾತ್ರಕ್ಕೆ ಫಿಟ್ ಆಗಿದ್ದಾರೆ ಅದಿತಿ ಪ್ರಭುದೇವ. ಇಂಟ್ರೆಸ್ಟಿಂಗ್ ಅಂದ್ರೆ 'ತೋತಾಪುರಿ' ಚಿತ್ರದಲ್ಲಿ 'ಡಾಲಿ' ಧನಂಜಯ ಕೂಡ ನಟಿಸುತ್ತಿದ್ದಾರೆ.
ದೊಡ್ಡ ತಾರಾಬಳಗ ಹೊಂದಿರುವ 'ತೋತಾಪುರಿ' ಈಗಲೇ ಕುತೂಹಲ ಕೆರಳಿಸುತ್ತಿದೆ.