'ತೋತಾಪುರಿ'ಯಲ್ಲಿ 'ಶಕೀಲ ಭಾನು' ಆದ ಅದಿತಿ ಪ್ರಭುದೇವ
ಅಜಯ್ ರಾವ್ ಅಭಿನಯದ 'ಧೈರ್ಯಂ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಅದಿತಿ ಪ್ರಭುದೇವ ಕಿರುತೆರೆಯಲ್ಲೂ 'ನಾಗಕನ್ನಿಕೆ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು.
ಸುನಿ ನಿರ್ದೇಶನದ 'ಬಝಾರ್' ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿರುವ ಅದಿತಿ ಪ್ರಭುದೇವ ಸದ್ಯಕ್ಕೆ 'ತೋತಾಪುರಿ' ರುಚಿ ನೋಡಿದ್ದಾರೆ.
ನಿಮಗೆಲ್ಲಾ ಗೊತ್ತಿರುವ ಹಾಗೆ 'ನೀರ್ ದೋಸೆ' ಜೋಡಿ ನಿರ್ದೇಶಕ ವಿಜಯ ಪ್ರಸಾದ್ ಮತ್ತು ಜಗ್ಗೇಶ್ ಮತ್ತೆ ಒಂದಾಗಿರುವುದು 'ತೋತಾಪುರಿ' ಚಿತ್ರದ ಮೂಲಕ. ಸುಮನ್ ರಂಗನಾಥ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಕೂಡ ನಟಿಸುತ್ತಿದ್ದಾರೆ.

'ತೋತಾಪುರಿ' ಚಿತ್ರದಲ್ಲಿ ಅದಿತಿ ಪ್ರಭುದೇವ 'ಶಕೀಲ ಭಾನು' ಪಾತ್ರ ನಿರ್ವಹಿಸುತ್ತಿದ್ದಾರೆ. ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡಿರುವ ಅದಿತಿ, ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.

ಒಂದುವರೆ ತಿಂಗಳಲ್ಲಿ ಆರು ಕೆ.ಜಿ ತೂಕ ಹೆಚ್ಚಿಸಿಕೊಂಡು ಶಕೀಲ ಭಾನು ಪಾತ್ರಕ್ಕೆ ಫಿಟ್ ಆಗಿದ್ದಾರೆ ಅದಿತಿ ಪ್ರಭುದೇವ. ಇಂಟ್ರೆಸ್ಟಿಂಗ್ ಅಂದ್ರೆ 'ತೋತಾಪುರಿ' ಚಿತ್ರದಲ್ಲಿ 'ಡಾಲಿ' ಧನಂಜಯ ಕೂಡ ನಟಿಸುತ್ತಿದ್ದಾರೆ.
ದೊಡ್ಡ ತಾರಾಬಳಗ ಹೊಂದಿರುವ 'ತೋತಾಪುರಿ' ಈಗಲೇ ಕುತೂಹಲ ಕೆರಳಿಸುತ್ತಿದೆ.


Click it and Unblock the Notifications











