Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
50 ದಿನ ಪೂರೈಸಿದ 'ಮದಗಜ', 2023ಕ್ಕೆ ಇದೇ ಟೀಮ್ನಿಂದ ಮತ್ತೊಂದು ಸಿನಿಮಾ
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 'ಮದಗಜ' ಸಿನಿಮಾ ರಿಲೀಸ್ ಆಗಿತ್ತು. ಶ್ರೀಮುರಳಿ ಹಾಗೂ ಮಹೇಶ್ ಕುಮಾರ್ ಕಾಂಬಿನೇಷನ್ ಸಿನಿಮಾವನ್ನು ರಾಬರ್ಟ್ ಚಿತ್ರದ ಸಿನಿಮಾ ಉಮಾಪತಿ ನಿರ್ಮಾಣ ಮಾಡಿದ್ದರು. 2021 ಡಿಸೆಂಬರ್ 03 ರಂದು ರಾಜ್ಯಾದ್ಯಂತ ಈ ಸಿನಿಮಾ ಗ್ರ್ಯಾಂಡ್ ಆಗಿ ಥಿಯೇಟರ್ಗೆ ಲಗ್ಗೆ ಇಟ್ಟಿತ್ತು. ಪರಭಾಷೆ ಸಿನಿಮಾಗಳ ನಡುವೆಯೂ 'ಮದಗಜ' ಸಿನಿಮಾ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತ್ತು.
Recommended Video
'ಮದಗಜ' ಯಶಸ್ಸಿನ ಬೆನ್ನಲ್ಲೇ ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಮೂವರು ಇತ್ತೀಚೆಗೆ ಒಟ್ಟಿಗೆ ಸೇರಿದ್ದಾರೆ. ಅದಕ್ಕೊಂದು ಕಾರಣ 'ಮದಗಜ' ಸಿನಿಮಾ ಇತ್ತೀಚೆಗೆ 50 ದಿನಗಳನ್ನು ಪೂರೈಸಿದೆ. ಇದೇ ಸಂಭ್ರಮದಲ್ಲಿ ಈ ಮೂರು ಒಟ್ಟಿಗೆ ಸೇರಿದ್ದರು. ಆ ಫೋಟೊಗಳು ವೈರಲ್ ಆಗಿದ್ದವು. ಆ ಭೇಟಿಯಲ್ಲಿ ಮೂವರೂ ತೆಗೆದುಕೊಂಡ ಹೊಸ ನಿರ್ಧಾರಗಳ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
11 ಸೆಂಟರ್ಗಳಲ್ಲಿ ಮದಗಜ 50 ದಿನ
ಶನಿವಾರ (ಜನವರಿ 22) ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಮೂವರು ಒಟ್ಟಿಗೆ ಸಕ್ಸಸ್ ಪಾರ್ಟಿ ಮಾಡಿದ್ದರು. 'ಮದಗಜ' ಸಿನಿಮಾ 50 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಈ ಪಾರ್ಟಿಯನ್ನು ನಿರ್ಮಾಪಕರು ಆಯೋಜನೆ ಮಾಡಿದ್ದರು. "ಡಿಸೆಂಬರ್ 03 ರಂದು ಬಿಡುಗಡೆಯಾಗಿದ್ದ 'ಮದಗಜ' ಕರ್ನಾಟಕದ 11 ಸೆಂಟರ್ಗಳಲ್ಲಿ 50 ದಿನಗಳನ್ನು ಪೂರೈಸಿದೆ. ಎರಡನೇ ಸಿನಿಮಾ 50 ದಿನಗಳನ್ನು ಪೂರೈಸಿದ್ದು ಖುಷಿಯಾಗಿದೆ." ಎಂದು ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿಬೀಟ್ಗೆ ತಿಳಿಸಿದ್ದಾರೆ.
ಶ್ರೀಮುರಳಿ, ಮಹೇಶ್, ಉಮಾಪತಿ ಬೇರೆ ಚಿತ್ರದಲ್ಲಿ ಬ್ಯುಸಿ
'ಮದಗಜ' ಸಿನಿಮಾದ ಬಳಿಕ ರೋರಿಂಗ್ ಶ್ರೀಮುರಳಿ 'ಬಘೀರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಡಾ. ಸೂರಿ ನಿರ್ದೇಶನ ಮಾಡಲಿದ್ದಾರೆ. ಸದ್ಯ ಶ್ರೀ ಮುರಳಿ ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಮಹೇಶ್ ಕುಮಾರ್ ಮಲ್ಟಿಸ್ಟಾರ್ ಸಿನಿಮಾವೊಂದಕ್ಕೆ ಕಥೆ ಹೆಣೆಯುತ್ತಿದ್ದಾರೆ. ಆದರೆ, ಮುಂದೆ ನಿರ್ದೇಶಿಸಲಿರುವ ಆ ಸ್ಟಾರ್ ಯಾರು? ಅನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇನ್ನು ನಿರ್ಮಾಪಕ ಉಮಾಪತಿ 'ಉಪಾಧ್ಯಕ್ಷ' ಸಿನಿಮಾದಲ್ಲಿ ಬ್ಯುಸಿ. ಈ ಚಿತ್ರದಲ್ಲಿ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
2023ಗೆ 'ಮದಗಜ' ತಂಡದಿಂದ ಹೊಸ ಸಿನಿಮಾ
'ಮದಗಜ' ಚಿತ್ರದ ಯಶಸ್ಸಿನ ಬೆನ್ನಿನಲ್ಲೇ ಇದೇ ತಂಡ ಮತ್ತೊಂದು ಸಿನಿಮಾಗೆ 2023ರಲ್ಲಿ ಒಂದಾಗಲಿದೆ. "ನಮ್ಮ ನಿರ್ಮಾಪಕರು ಮದಗಜ 50 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸಕ್ಸಸ್ ಪಾರ್ಟಿಯೊಂದನ್ನು ಕೊಟ್ಟಿದ್ದರು. ಈ ವೇಳೆ ಮದಗಜ ತಂಡವೇ ಸೇರಿಕೊಂಡು ಮತ್ತೊಂದು ಸಿನಿಮಾ ನಿರ್ಮಾಣ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಶ್ರೀಮುರಳಿ ಸರ್ ಬಘೀರ್ ಸಿನಿಮಾ ಮುಗಿಯಬೇಕು. ನಾನು ಒಂದು ಮಲ್ಟಿಸ್ಟಾರರ್ ಸಿನಿಮಾಗೆ ಕೆಲಸ ಮಾಡುತ್ತಿದ್ದೇನೆ. ನಿರ್ಮಾಪಕರು ಕೂಡ ಉಪಾಧ್ಯಕ್ಷ ಮಾಡುತ್ತಿದ್ದಾರೆ. ಇವೆಲ್ಲವೂ ಮುಗಿದ ಬಳಿಕ 2023ಕ್ಕೆ ಮತ್ತೆ ಒಟ್ಟಿಗೆ ಸೇರಲಿದ್ದೇವೆ." ಎಂದು ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
'ಮದಗಜ' ಸಕ್ಸಸ್ ಮೀಟ್
'ಮದಗಜ' 50 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಸಂಭ್ರಮಿಸಲು ತಂಡ ರೆಡಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಕ್ಸಸ್ ಮೀಟ್ ಮಾಡುವುದಾಗಿ ನಿರ್ಮಾಪಕ ಉಮಾಪತಿ ತಂಡಕ್ಕೆ ತಿಳಿಸಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ 'ಮದಗಜ' ಸಕ್ಸಸ್ ಮೀಟ್ ನಡೆಯುತ್ತೆ. 10 ರಿಂದ 15 ದಿನಗಳ ಒಳಗೆ 'ಮದಗಜ' ಸಕ್ಸಸ್ ಮೀಟ್ ನಡೆಯುವ ಸಾಧ್ಯತೆ ಎನ್ನಲಾಗುತ್ತಿದೆ. ಈ ಮಧ್ಯೆ ಶ್ರೀಮುರಳಿ ಅಭಿಮಾನಿಗಳು ಮತ್ತೆ ಕಾಂಬಿನೇಷನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳವ ಉತ್ಸಾಹದಲ್ಲಿದ್ದು, ಸಕ್ಸಸ್ ಮೀಟ್ನಲ್ಲಿ ಆ ಮಾಹಿತಿ ಸಿಗುವ ಸಾಧ್ಯತೆ ಇದೆ.