Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುರುಕ್ಷೇತ್ರ-ಮದಕರಿ ನಂತರ ಡಿ-ಬಾಸ್ ಕೈಯಲ್ಲಿದೆ ಬಹುದೊಡ್ಡ ಪ್ರಾಜೆಕ್ಟ್.!
Recommended Video
ಕುರುಕ್ಷೇತ್ರ ಮುಗಿತು. ಗಂಡುಗಲಿ ಮದಕರಿ ನಾಯಕ ಆರಂಭವಾಗುತ್ತೆ. ಈ ಚಿತ್ರದ ನಂತರ ಮತ್ತೊಂದು ಮೆಗಾ ಪ್ರಾಜೆಕ್ಟ್ ಆರಂಭಿಸಲಿದ್ದಾರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇಂತಹದೊಂದು ಸುದ್ದಿ ಈಗ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ.
ಸಂಗೊಳ್ಳಿ ರಾಯಣ್ಣ, ದುರ್ಯೋಧನ, ಮದಕರಿ ನಾಯಕ ಮುಂದೆ ಯಾವ ಪಾತ್ರ ಇರಬಹುದು ಎಂಬ ಕುತೂಹಲ ಈಗ ಹೆಚ್ಚಾಗುತ್ತಿದೆ. ಈ ಮೆಗಾ ಸಿನಿಮಾದ ಬಗ್ಗೆ ದರ್ಶನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಟರೊಬ್ಬರು ಬಹಿರಂಗಪಡಿಸಿದ್ದು, ಯಾವುದು ಆ ಸಿನಿಮಾ ಎಂಬುದು ಈಗ ಟಾಕ್ ಆಫ್ ದಿ ಟೌನ್ ಆಗಿದೆ.
'ರಾಕ್ ಲೈನ್ ಮಾಲ್'ನಲ್ಲಿ ಮೊದಲ ದಿನ ಪೂರ್ತಿ 'ಕುರುಕ್ಷೇತ್ರ ಜಾತ್ರೆ'
ಅಷ್ಟಕ್ಕೂ, ಈ ಸುದ್ದಿ ಕೊಟ್ಟಿದ್ದು ಯಾರು? ದರ್ಶನ್ ಅವರ ಮುಂದಿನ ಟಾರ್ಗೆಟ್ ಯಾರಿರಬಹುದು? ಯಾವ ಚಿತ್ರದ ಕಡೆ ಡಿ ಬಾಸ್ ಒಲವು ತೋರಿದ್ದಾರೆ? ಮುಂದೆ ಓದಿ.....
ಮೆಗಾ ಪ್ರಾಜೆಕ್ಟ್ ನಲ್ಲಿ ಡಿ ಬಾಸ್
ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನ ಪಕ್ಕಕ್ಕಿಟ್ಟು ಈಗ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳ ಕಡೆ ಹೆಚ್ಚು ಗಮನ ಹರಿಸುತ್ತಿರುವ ಡಿ ಬಾಸ್, ಮತ್ತೊಂದು ಮೆಗಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರಂತೆ. ಆದ್ರೆ, ಅದು ಯಾವ ರೀತಿ ಸಿನಿಮಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
'ಮುನಿರತ್ನ ಕುರುಕ್ಷೇತ್ರ' ನೋಡುವುದಕ್ಕೆ 10 ಕಾರಣಗಳು
ಐತಿಹಾಸಿಕ ಅಥವಾ ಪೌರಾಣಿಕ.!
ಐತಿಹಾಸಿಕ ಅಥವಾ ಪೌರಾಣಿಕ ಚಿತ್ರಗಳಿಗೆ ಮೊದಲ ಆಧ್ಯತೆ ನೀಡುವುದಾಗಿ ದರ್ಶನ್ ಆಹ್ವಾನ ನೀಡಿದ್ದರು. ಬಹುಶಃ ಅದನ್ನ ಗಮನದಲ್ಲಿಟ್ಟುಕೊಂಡು ಕೆಲವು ಡಿ ಬಾಸ್ ಗಾಗಿ ಐತಿಹಾಸಿಕ ಅಥವಾ ಪೌರಾಣಿಕ ಕತೆಗಳನ್ನ ಮಾಡಿರಹುದಾ ಎಂಬ ನಿರೀಕ್ಷೆ ಇದೆ.
ರವಿಚೇತನ್ ಕೊಟ್ಟ ಸುಳಿವು
ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದರೆ, ರವಿ ಚೇತನ್ ದುರ್ಯೋಧನನ ಸಹೋದರರ ದುಶ್ಯಾಸನನ ಪಾತ್ರ ನಿಭಾಯಿಸಿದ್ದಾರೆ. ಸಿನಿಮಾ ರಿಲೀಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ ರವಿಚೇತನ್ ''ಕುರುಕ್ಷೇತ್ರ, ಮದಕರಿ ನಂತರ ದರ್ಶನ್ ಇನ್ನೊಂದು ದೊಡ್ಡ ಸಿನಿಮಾ ಮಾಡಲಿದ್ದಾರೆ. ಅದರಲ್ಲಿ ನನಗೊಂದು ಪಾತ್ರ ಸಿಗಬಹುದು ಎಂಬ ನಿರೀಕ್ಷೆ'' ಎಂದು ಹೇಳುವ ಮೂಲಕ ದೊಡ್ಡ ಪ್ರಾಜೆಕ್ಟ್ ಬಗ್ಗೆ ಸುಳಿವು ನೀಡಿದ್ದಾರೆ.
ದುರ್ಯೋಧನನ ಜೊತೆ ಅವರೊಬ್ಬರದೇ ಕಟೌಟ್: ಅದಕ್ಕೊಂದು ಕಾರಣನೂ ಇದೆ.!
ದರ್ಶನ್ ಬಳಿ ಇದೆ ರಾವಣನ ಕಥೆ
ಕನ್ನಡದ ಹಿರಿಯ ನಟರೊಬ್ಬರು ಡಿ ಬಾಸ್ ಗೆ ರಾವಣನ ಸ್ಕ್ರಿಪ್ಟ್ ನೀಡಿದ್ದರಂತೆ. ಆ ಸುದ್ದಿಗೂ ಈಗ ರವಿಚೇತನ್ ಹೇಳಿರುವ ಸುದ್ದಿಗೂ ಲಿಂಕ್ ಇರುವ ಹಾಗೆ ಕಾಣುತ್ತಿದೆ. ಒಂದು ವೇಳೆ ಇದೇ ನಿಜವಾದರೇ ದರ್ಶನ್ ಅವರ ರಾವಣನಾಗೋದ್ರಲ್ಲಿ ಯಾವುದೇ ಅಚ್ಚರಿ ಇಲ್ಲ. ಬಟ್, ಅಧಿಕೃತವಾಗುವವರೆಗೂ ಕಾದು ನೋಡಬೇಕಿದೆ.