Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ'' - ರವಿಚಂದ್ರನ್
Recommended Video
''ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು..'' ಎನ್ನುವ ಮಾತಿದೆ. ಒಂದು ಮದುವೆ, ಒಬ್ಬ ವ್ಯಕ್ತಿ ಯೋಚನೆ ಮಾಡುವ ಶೈಲಿಯನ್ನೇ ಬದಲು ಮಾಡುವ ಶಕ್ತಿ ಹೊಂದಿದೆ. ಅದೇ ರೀತಿ ಮಗಳ ಮದುವೆ ಕ್ರೇಜಿ ಸ್ಟಾರ್ ರವಿಚಂದ್ರನ್ ಬದುಕಿನಲ್ಲಿ ಬದಲಾವಣೆ ತಂದಿದೆ.
ಅದರ ಪ್ರಭಾವದಲ್ಲಿ ಇತ್ತೀಚಿಗೆ 'ಬಯಲಾಟದ ಬೀಮಣ್ಣ' ಎಂಬ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್ ''ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ'' ಎಂದು ಹೇಳಿದ್ದಾರೆ.
ಗಟ್ಟಿಮೇಳ.. ಗಟ್ಟಿಮೇಳ : ಗೀತಾಂಜಲಿಗೆ ಅಜಯ್ ಮಾಂಗಲ್ಯ ಧಾರಣೆ
ರವಿಚಂದ್ರನ್ ಸಿನಿಮಾವನ್ನು ದುಡ್ಡಿಗಾಗಿ ಮಾಡುವುದಿಲ್ಲ. ತಮ್ಮ ಕನಸು ತೆರೆ ಮೇಲೆ ಬಂದರೆ ಅದೇ ಗೆಲುವು ಎಂದುಕೊಂಡಿದ್ದಾರೆ. ಬರೀ ಕಲೆಕ್ಷನ್ ಆಧಾರದ ಮೇಲೆ ಒಂದು ಸಿನಿಮಾದ ಸೋಲು ಗೆಲುವಿನ ನಿರ್ಧಾರ ಮಾಡುವುದು ರವಿಚಂದ್ರನ್ ರಿಗೆ ಇಷ್ಟ ಆಗುವುದಿಲ್ಲವಂತೆ.
ಈ ರೀತಿ ಯೋಚನೆ ಮಾಡುತ್ತಿದ್ದ ರವಿಚಂದ್ರನ್ ರಿಗೆ ಈಗ ಹಣದ ಅಗತ್ಯ ಕೂಡ ತಿಳಿದಿದೆ. ''ಮಗಳ ಮದುವೆ ಮಾಡಿದ ಮೇಲೆ ನನಗೆ ದುಡ್ಡಿನ ಮಹತ್ವ ತಿಳಿದಿದೆ. ಅದಕ್ಕೆ ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ'' ಎಂದು ಹೇಳಿದ್ದಾರೆ.
ರವಿಚಂದ್ರನ್ ಮಗಳ ಅರಿಶಿಣ ಮತ್ತು ಮೆಹಂದಿ ಶಾಸ್ತ್ರದ ಸಂಭ್ರಮ
ಮಗಳ ಮದುವೆಯ ನಂತರ ರವಿಚಂದ್ರನ್ ಯೋಚನಾ ಕ್ರಮ ಕೊಂಚ ಬದಲಾಗಿದೆ. ತಮ್ಮ ಕನಸನ್ನು ತೆರೆ ಮೇಲೆ ತರುವುದರ ಜೊತೆಗೆ ಕಲೆಕ್ಷನ್ ಮೇಲೆಯೂ ಕ್ರೇಜಿ ಸ್ಟಾರ್ ಕಣ್ಣು ಇಡಲಿದ್ದಾರೆ.