Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸ್ವಾಮೀಜಿ' ಸುದರ್ಶನ್ ಸಾವಿಗೆ ಕಂಬನಿ ಮಿಡಿದ 'ಅಗ್ನಿಸಾಕ್ಷಿ' ನಿರ್ದೇಶಕ
Recommended Video
ಕೆಲವು ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆ ಸೇರಿದ್ದ ನಟ ಸುದರ್ಶನ್ ಸುಧಾರಿಸಿಕೊಂಡು ವಾಪಸ್ ಮನೆ ಕಡೆ ಹೆಜ್ಜೆ ಹಾಕಲೇ ಇಲ್ಲ. ತೀವ್ರ ಅನಾರೋಗ್ಯಕ್ಕೆ ತುತ್ತಾದ ನಟ ಸುದರ್ಶನ್ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಸುದರ್ಶನ್, 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ 'ಸ್ವಾಮೀಜಿ' ಆಗಿ ನಟಿಸುತ್ತಿದ್ದರು.
ಡಾ. ರಾಜ್ ಜತೆ ಆಪ್ತ ನಂಟು ಹೊಂದಿದ್ದ ಸುದರ್ಶನ್: ಭಗವಾನ್
ನಟ ಸುದರ್ಶನ್ ರವರ ಸಾವಿಗೆ 'ಅಗ್ನಿಸಾಕ್ಷಿ' ಧಾರಾವಾಹಿ ನಿರ್ದೇಶಕ ಮೈಸೂರು ಮಂಜು ಕಂಬನಿ ಮಿಡಿದಿದ್ದಾರೆ. ''ತುಂಬ ನೋವಾಗ್ತಿದೆ. ಅವರಲ್ಲಿ 'ಅಹಂ' ಇರಲಿಲ್ಲ. ಅವರನ್ನ ನೋಡಿ ಕಲಿಯಬೇಕಾಗಿದ್ದು ತುಂಬಾ ಇದೆ. ಕನ್ನಡ ಇಂಡಸ್ಟ್ರಿಗೆ ಪ್ರೊಡಕ್ಷನ್ ಮಾಡಿದ್ದು ಅವರ ತಂದೆ. ತಮಿಳಿನಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು''
'ವಿಜಯನಗರದ ವೀರಪುತ್ರ' ಖ್ಯಾತಿಯ ನಟ ಆರ್.ಎನ್.ಸುದರ್ಶನ್ ಇನ್ನಿಲ್ಲ
''ಧಾರಾವಾಹಿಯಲ್ಲಿ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತ್ತು. ಜನರು ಕೂಡ ಅವರನ್ನ ಅದೇ ಪಾತ್ರದಲ್ಲಿ ಗುರುತಿಸುತ್ತಿದ್ದರು. ನಿರ್ದೇಶಕರಿಗೆ ಹೆಚ್ಚು ಸರ್ಪೋಟ್ ಮಾಡುತ್ತಿದ್ದರು. 'ಕೃಷ್ಣ ಜನ್ಮಾಷ್ಠಮಿ' ದಿನ ಕೊನೆಯದಾಗಿ ನಮ್ಮ ಜೊತೆ ಕೆಲಸ ಮಾಡಿದ್ದರು'' ಎಂದರು 'ಅಗ್ನಿಸಾಕ್ಷಿ' ನಿರ್ದೇಶಕ ಮೈಸೂರು ಮಂಜು.