Don't Miss!
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಗ್ನಿ ಶ್ರೀಧರ್ 'ಎದೆಗಾರಿಕೆ' ಚಿತ್ರೀಕರಣ ಮುಕ್ತಾಯ
ಮಾರತ್ ಹಳ್ಳಿಯ ಈಜೋನ್ ಕ್ಲಬ್ ನಲ್ಲಿ ನಾಯಕ ಆದಿತ್ಯ, ನಾಯಕಿ ಆಕಾಂಕ್ಷಾ ಹಾಗೂ ಗುರುದತ್ ಅಭಿನಯದ ದೃಶ್ಯವೊಂದನ್ನು ಚಿತ್ರೀಕರಣ ಮಾಡುವುದರೊಂದಿಗೆ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ಮುಂಬೈ, ಸಕಲೇಶಪುರ, ಮಂಗಳೂರು ಮುಂತಾದ ಕಡೆ ಮೂವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಚೀತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದು ನಿರಾಂತಂಕ ಅನುಭವಿಸುತ್ತಿರುವ ಚಿತ್ರತಂಡ, ಈ ಚಿತ್ರವನ್ನು ಸಾಕಷ್ಟು ಹೋಮ್ ವರ್ಕ್ ಮಾಡಿ ಚಿತ್ರೀಕರಣ ಮಾಡಿದ್ದಾರೆ. ಕಥೆಗೆ ಅಗತ್ಯವಿತ್ತಾದ್ದರಿಂದ ಮುಂಬೈನಲ್ಲಿ ಕೂಡ ಚಿತ್ರೀಕರಣ ನಡೆಸಿದ್ದು ಸರ್ವ ರೀತಿಯಲ್ಲೂ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದಿದೆ ಚಿತ್ರತಂಡ.
ಸುಮನಾ ಕಿತ್ತೂರ್ ಈ ಮೊದಲು ನಿರ್ದೇಶಿಸಿದ್ದ ಕಳ್ಳರ ಸಂತೆ ಒಂದುಮಟ್ಟಿಗೆ ಯಶಸ್ವಿಯಾಗಿತ್ತು. ಹೀಗಾಗಿ ಸುಮನಾ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ಈಗ ಚಿತ್ರೀಕರಣ ಮುಗಿದಿದೆಯೆಂದು ಚಿತ್ರತಂಡ ಘೋಷಿಸಿರುವುದರಿಂದ ನಿರೀಕ್ಷೆ ಇಮ್ಮಡಿಯಾಗಿದೆ. ಇನ್ನೇನು ಬಿಡುಗಡೆಗೆ ಸ್ವಲ್ಪಕಾಲವಷ್ಟೇ ಬಾಕಿ.
ಮೊದಲು ನಾಯಕಿಯಾಗಿ ಸುಮನಾ ಕಿತ್ತೂರ್ ಆಯ್ಕೆಮಾಡಿದ್ದು ನಟಿ ಭಾವನಾಳನ್ನು. ಆದರೆ ಅನಾರೋಗ್ಯದ ಕಾರಣದಿಂದ ಭಾವನಾ ಈ ಚಿತ್ರದಿಂದ ಹಿಂದೆ ಸರಿಯಬೇಕಾಯಿತು. ಖಾಲಿಯಾದ ಭಾವನಾ ಜಾಗಕ್ಕೆ ಬಂದವರು 'ಒಲವೇ ಮಂದಾರ' ಖ್ಯಾತಿಯ ನಟಿ ಆಕಾಂಕ್ಷಾ. ಈ ಬದಲಾವಣೆ ಯಾವುದೇ ವಿವಾದ, ಮನಸ್ತಾಪಗಳಿಲ್ಲದೇ ನಡೆದಿದ್ದು ವಿಶೇಷ.
ಒಟ್ಟಿನಲ್ಲಿ, ಅಗ್ನಿ ಶ್ರೀಧರ್ ಕಥೆ, ಸಂಭಾಷಣೆ ಸುಮನಾ ನ್ಯಾಯ ಒದಗಿಸಿ ನಿರ್ದೇಶನ ಮಾಡಿದ್ದಾರೆ. ಆದಿತ್ಯ ಹಾಗೂ ಆಕಾಂಕ್ಷಾ ಜೋಡಿ ಚೆನ್ನಾಗಿ ನಟಿಸಿದೆ. ಮುಖ್ಯ ಪಾತ್ರವೊಂದರಲ್ಲಿ ಗುರುದತ್ ಮಿಂಚಿದ್ದಾರೆ. ಉಳಿದಂತೆ ಚಿತ್ರದ ಮೇಕಿಂಗ್ ತೀರಾ ಚೆನ್ನಾಗಿ ಬಂದಿದೆ. ಜನರಿಟ್ಟ ನಿರೀಕ್ಷೆಗೆ ಮೋಸವಾಗುವುದಿಲ್ಲ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ. (ಒನ್ ಇಂಡಿಯಾ ಕನ್ನಡ)