Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕ್ಕಣ್ಣ ಹಾಕಿದ್ದ ಚಾಲೆಂಜ್ ಪೂರೈಸಿದ ನಟ ಅಜಯ್ ರಾವ್
ಹಾಸ್ಯ ನಟ ಚಿಕ್ಕಣ್ಣ ಅವರು ನಟ ಅಜಯ್ ರಾವ್ಗೆ ಒಂದು ಸವಾಲು ಹಾಕಿದ್ದರು. ಆರ್ಸಿಬಿ ತಂಡದ ಕುರಿತು ಆರ್ಸಿಬಿ ತಂಡದ ಅಭಿಮಾನದ ಕುರಿತು ನಾನ್ಸ್ಟಾಪ್ ಆಗಿ ಹೇಳಿರುವ ಡೈಲಾಗ್ ಹೇಳಿ ವಿಡಿಯೋ ಮಾಡಬೇಕು ಎಂದು ಹೇಳಿದ್ದರು.
ಚಿಕ್ಕಣ್ಣ ಅವರ ಸವಾಲು ಸ್ವೀಕರಿಸಿದ್ದ ನಟ ಅಜಯ್ ರಾವ್ ಡೈಲಾಗ್ ಹೇಳಿ ಡೈಲಾಗ್ ಚಾಲೆಂಜ್ ಪೂರೈಸಿದ್ದಾರೆ. ಚಿಕ್ಕಣ್ಣ ಅವರ ಆರ್ಸಿಬಿ ಡೈಲಾಗ್ ನಾನ್ಸ್ಟಾಪ್ ಹೇಳಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮುಂದೆ ಈ ಚಾಲೆಂಜ್ನ್ನು ಚಿತ್ರದ ನಾಯಕಿ ನಟಿ ಅಪೂರ್ವ ಹಾಗೂ ಕನ್ನಡ ಕಲಾಭಿಮಾನಿಗಳು ಮುಂದುವರಿಸಿ ಎಂದು ವಿನಂತಿಸಿಕೊಂಡಿದ್ದಾರೆ.
ಹಾಸ್ಯ ನಟ ಚಿಕ್ಕಣ್ಣ ಹಾಕಿದ ಚಾಲೆಂಜ್ ಸ್ವೀಕರಿಸ್ತಾರಾ ನಟ ಅಜಯ್ ರಾವ್?
ಅಂದ್ಹಾಗೆ, ಚಿಕ್ಕಣ್ಣ ಹೇಳುವ ಆ ಡೈಲಾಗ್ ಕೃಷ್ಣ ಟಾಕೀಸ್ ಸಿನಿಮಾದು. ಆರ್ಸಿಬಿ ತಂಡದ ಬಗ್ಗೆ ವಿರೋಧಿಗಳು ಏನೇ ಹೇಳಿದರು, ನಾವು ಆರ್ಸಿಬಿ ಫ್ಯಾನ್ ಎಂದು ಸುಮಾರು 40 ಸೆಕೆಂಡ್ ನಾನ್ಸ್ಟಾಪ್ ಭರ್ಜರಿ ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇನ್ನುಳಿದಂತೆ ಕೃಷ್ಣ ಟಾಕೀಸ್ ಸಿನಿಮಾದಲ್ಲಿ ಅಜಯ್ ರಾವ್ ನಾಯಕ ನಟನಾಗಿ ನಟಿಸಿದ್ದು, ಚಿಕ್ಕಣ್ಣ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಆನಂದ್ ಈ ಚಿತ್ರ ನಿರ್ದೇಶಿಸಿದ್ದು, ಇದು ಹಾರರ್ ಥ್ರಿಲ್ಲಿಂಗ್ ಸಿನಿಮಾ ಆಗಿದೆ.
Recommended Video
ಸಿಂಧು ಲೋಕನಾಥ್, ಅಪೂರ್ವ, ಯಶ್ ಶೆಟ್ಟಿ, ನಿರಂತ್, ಶೋಭ್ರಾಜ್, ಮಂಡ್ಯ ರಮೇಶ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಏಪ್ರಿಲ್ 9 ರಂದು ಈ ಚಿತ್ರ ತೆರೆಕಾಣುತ್ತಿದೆ.