Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ ಪ್ರಚಾರ ಮಾಡಿದ್ದು ಏಕೆ? ಇದಕ್ಕೂ ಸುಮಲತಾಗೂ ಸಂಬಂಧ ಇದೆಯಾ?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಕಿರ'ನಿಗೆ ಪವರ್ ಫುಲ್ ವಾಯ್ಸ್ ನೀಡಿದ ಪವರ್ ಸ್ಟಾರ್!
'ಪೊಲೀಸ್ ಕ್ವಾರ್ಟಸ್' ಖ್ಯಾತಿಯ ನಟ ಅನೀಶ್ ಅವರು 'ಅಕಿರ' ಚಿತ್ರದ ಮೂಲಕ ಮತ್ತೊಮ್ಮೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ನಟಿಯಾಗಿ ಅದಿತಿ ಅವರು ಅನಿಶ್ ಜೊತೆ ಡ್ಯುಯೆಟ್ ಹಾಡಿದ್ದಾರೆ.
ನಿರ್ದೇಶಕ ಜಿ.ನವೀನ್ ರೆಡ್ಡಿ ಆಕ್ಷನ್-ಕಟ್ ಹೇಳಿರುವ ಅನೀಶ್ ಅವರ 'ಅಕಿರ' ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ವಾಯ್ಸ್ ನೀಡಿದ್ದು. ಆವಾರ್ಡ್ ವಿನ್ನಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಲಕ್ಕಿ ವಾಯ್ಸ್ ಎಂದೇ ಖ್ಯಾತಿ ಪಡೆದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ಅಕಿರ' ಚಿತ್ರಕ್ಕೆ ಒಂದು ಹಾಡನ್ನು ಹಾಡಿದ್ದಾರೆ. ಇದಕ್ಕೆ ಫುಲ್ ಖುಷ್ ಆಗಿರುವ ಸಂಗೀತ ನಿರ್ದೇಶಕ ಅಜನೀಶ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಪುನೀತ್ ಅವರು ಈ ಚಿತ್ರಕ್ಕೆ ಹಾಡಿದ್ದು, ದೀಪಾವಳಿ ಗಿಫ್ಟ್ ನೀಡಿದಂತಾಗಿದೆ ಎಂದಿದ್ದಾರೆ.
Thank
you
power
star
@PunithRAAJkumar
sir
for
rendering
your
mesmerising
voice
for
movie
akira
gift
for
deepavali
pic.twitter.com/3sq0S2xmKo
—
B
AJANEESH
LOKNATH
(@AJANEESHB)
November
11,
2015
ಇನ್ನು ದ ಮೋಸ್ಟ್ ಬ್ಯುಸಿಯೆಸ್ಟ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಗಾಯನದಿಂದ ಬರುವ ಆದಾಯವನ್ನು ಚಾರಿಟಿಗೆ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.
ಇನ್ನು ಒಂದು ವಿಶೇಷ ಏನಪ್ಪಾ ಅಂದರೆ ಪುನೀತ್ ರಾಜ್ ಕುಮಾರ್ 'ಅಕಿರ' ಚಿತ್ರಕ್ಕೆ ಹಾಡಿದ್ದಕ್ಕಾಗಿ ಒಂದೇ ಒಂದು ಪೈಸೆ ಕೂಡ ಪಡೆದುಕೊಂಡಿಲ್ಲ, ಎಂದು ಪುನೀತ್ ರಾಜ್ ಕುಮಾರ್ ಅವರ ಮ್ಯಾನೇಜರ್ ಎನ್ ಎಸ್ ರಾಜಕುಮಾರ್ ಅವರು ತಿಳಿಸಿದ್ದಾರೆ.