Don't Miss!
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ನಟಿಸುತ್ತಿರುವ 'ಮುಗಿಲ್ ಪೇಟೆ' ಸಿನಿಮಾ ಅಧಿಕೃತವಾಗಿ ಇಂದು (ನವೆಂಬರ್ 15) ಆರಂಭವಾಗಿದೆ. ನಟ ದರ್ಶನ್ ಈ ಚಿತ್ರವನ್ನ ಲಾಂಚ್ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಡಿ-ಬಾಸ್ ಬಂದಿಲ್ಲ.
ದರ್ಶನ್ ಅವರ ಅನುಪಸ್ಥಿತಿಯಲ್ಲೂ ಮುಗಿಲ್ ಪೇಟೆ ಸಿನಿಮಾ ಆರಂಭವಾಗಿದೆ. ಸಾಹೇಬ, ಬೃಹಸ್ಪತಿ, ಪ್ರಾರಂಭ ಚಿತ್ರದ ಬಳಿಕ ಮುಗಿಲ್ ಪೇಟೆ ಶುರುವಾಗಿದ್ದು, ಈ ಚಿತ್ರದಲ್ಲಿ ಮನೋರಂಜನ್ ಗೆ ಜೋಡಿಯಾಗಿ ಪುಣೆ ಮೂಲದ ನಟಿ ಖಯಾದು ಲೋಹರ್ ಆಯ್ಕೆಯಾಗಿದ್ದಾರೆ.
ದರ್ಶನ್ ಜೊತೆ 'ಮುಗಿಲ್ ಪೇಟೆ'ಗೆ ಹೋಗ್ತಾರೆ ಮನೋರಂಜನ್
ಮುಗಿಲ್ ಪೇಟೆ ಚಿತ್ರದ ನಾಯಕಿಯ ಬಗ್ಗೆ ತಿಳಿಯುವುದಾರೇ ಈಕೆ ಮೂಲತಃ ಅಸ್ಸಾಂ. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮರಾಠಿಯಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಮೊದಲ ಸಿನಿಮಾ ಇದಾಗಿದೆ.
ಮ್ಯಾನೇಜರ್ ಮೂಲಕ ಆಡಿಷನ್ ನೀಡಿದ್ದ ಖಯಾದು ಈ ಚಿತ್ರಕ್ಕೆ ಅಯ್ಕೆಯಾಗಿದ್ದಾರೆ. ಸದ್ಯಕ್ಕೆ ಫೋಟೋಶೂಟ್ ಮಾತ್ರ ಮುಗಿದಿದ್ದು, ಚಿತ್ರೀಕರಣದ ಬಗ್ಗೆ ಬಹಳ ಕಾತುರರಾಗಿದ್ದಾರಂತೆ. ಬಬ್ಲಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಖಯಾದು ಅವರ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ಭರವಸೆಯಲ್ಲಿದ್ದಾರಂತೆ.
ಜೊತೆಜೊತೆಗೆ ಕನ್ನಡವನ್ನ ಕಲಿಯುತ್ತಿರುವ ನಟಿ, ಕೆಲವು ಕನ್ನಡ ಸಿನಿಮಾಗಳನ್ನ ನೋಡಲು ನಿರ್ಧರಿಸಿದ್ದಾರಂತೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುರಿತು ತಿಳಿದುಕೊಂಡಿರುವ ಖಯಾದು, ''ಅಷ್ಟು ದೊಡ್ಡ ಫ್ಯಾಮಿಲಿಯಿಂದ ಬಂದಿರುವ ಮನೋರಂಜನ್ ಅವರ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ'' ಎಂದಿದ್ದಾರೆ.