Don't Miss!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- News Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ನಟಿಸುತ್ತಿರುವ 'ಮುಗಿಲ್ ಪೇಟೆ' ಸಿನಿಮಾ ಅಧಿಕೃತವಾಗಿ ಇಂದು (ನವೆಂಬರ್ 15) ಆರಂಭವಾಗಿದೆ. ನಟ ದರ್ಶನ್ ಈ ಚಿತ್ರವನ್ನ ಲಾಂಚ್ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಡಿ-ಬಾಸ್ ಬಂದಿಲ್ಲ.
ದರ್ಶನ್ ಅವರ ಅನುಪಸ್ಥಿತಿಯಲ್ಲೂ ಮುಗಿಲ್ ಪೇಟೆ ಸಿನಿಮಾ ಆರಂಭವಾಗಿದೆ. ಸಾಹೇಬ, ಬೃಹಸ್ಪತಿ, ಪ್ರಾರಂಭ ಚಿತ್ರದ ಬಳಿಕ ಮುಗಿಲ್ ಪೇಟೆ ಶುರುವಾಗಿದ್ದು, ಈ ಚಿತ್ರದಲ್ಲಿ ಮನೋರಂಜನ್ ಗೆ ಜೋಡಿಯಾಗಿ ಪುಣೆ ಮೂಲದ ನಟಿ ಖಯಾದು ಲೋಹರ್ ಆಯ್ಕೆಯಾಗಿದ್ದಾರೆ.
ದರ್ಶನ್ ಜೊತೆ 'ಮುಗಿಲ್ ಪೇಟೆ'ಗೆ ಹೋಗ್ತಾರೆ ಮನೋರಂಜನ್
ಮುಗಿಲ್ ಪೇಟೆ ಚಿತ್ರದ ನಾಯಕಿಯ ಬಗ್ಗೆ ತಿಳಿಯುವುದಾರೇ ಈಕೆ ಮೂಲತಃ ಅಸ್ಸಾಂ. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮರಾಠಿಯಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಮೊದಲ ಸಿನಿಮಾ ಇದಾಗಿದೆ.
ಮ್ಯಾನೇಜರ್ ಮೂಲಕ ಆಡಿಷನ್ ನೀಡಿದ್ದ ಖಯಾದು ಈ ಚಿತ್ರಕ್ಕೆ ಅಯ್ಕೆಯಾಗಿದ್ದಾರೆ. ಸದ್ಯಕ್ಕೆ ಫೋಟೋಶೂಟ್ ಮಾತ್ರ ಮುಗಿದಿದ್ದು, ಚಿತ್ರೀಕರಣದ ಬಗ್ಗೆ ಬಹಳ ಕಾತುರರಾಗಿದ್ದಾರಂತೆ. ಬಬ್ಲಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಖಯಾದು ಅವರ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ಭರವಸೆಯಲ್ಲಿದ್ದಾರಂತೆ.
ಜೊತೆಜೊತೆಗೆ ಕನ್ನಡವನ್ನ ಕಲಿಯುತ್ತಿರುವ ನಟಿ, ಕೆಲವು ಕನ್ನಡ ಸಿನಿಮಾಗಳನ್ನ ನೋಡಲು ನಿರ್ಧರಿಸಿದ್ದಾರಂತೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುರಿತು ತಿಳಿದುಕೊಂಡಿರುವ ಖಯಾದು, ''ಅಷ್ಟು ದೊಡ್ಡ ಫ್ಯಾಮಿಲಿಯಿಂದ ಬಂದಿರುವ ಮನೋರಂಜನ್ ಅವರ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ'' ಎಂದಿದ್ದಾರೆ.