Don't Miss!
- News ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಜಾಗೃತಿಗೆ ಅಣ್ಣಾವ್ರ ಹಾಡು ಬಳಸಿದ ವೈದ್ಯಕೀಯ ವಿದ್ಯಾರ್ಥಿಗಳು
ಇಂದು ಡಾ.ರಾಜ್ಕುಮಾರ್ ಹುಟ್ಟುಹಬ್ಬ. ರಾಜ್ಯದಾದ್ಯಂತ ಕೊರೊನಾದ ವಿಷಮ ಪರಿಸ್ಥಿತಿ ಇದೆ. ಈ ಸಂಕಷ್ಟದ ಸಮಯದಲ್ಲೂ ಅಣ್ಣಾವ್ರರನ್ನು ಅನುಕೂಲಾನುಸಾರ ನೆನಪಿಸಿಕೊಳ್ಳುತ್ತಿದ್ದಾರೆ. ಗೌರವ ಸಲ್ಲಿಸುತ್ತಿದ್ದಾರೆ ಅವರ ಅಭಿಮಾನಿಗಳು.
ಡಾ.ರಾಜ್ಕುಮಾರ್ ಹುಟ್ಟುಹಬ್ಬವಾದ ಇಂದು ಮೈಸೂರಿನ ವೈದ್ಯಕೀಯ ವಿದ್ಯಾರ್ಥಿಗಳು ಭಿನ್ನವಾಗಿ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ರಾಜ್ಕುಮಾರ್ ಅವರ ಹಾಡನ್ನು ಬಳಸಿಕೊಂಡು ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.
ಮೈಸೂರಿನ ವಾಕ್ ಮತ್ತು ಶ್ರವಣ ಸಂಬಂಧಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಕುಮಾರ್ ಅವರ 'ಪ್ರೇಮದ ಕಾಣಿಕೆ' ಸಿನಿಮಾದ ''ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ'' ಹಾಡಿನ ಸಾಹಿತ್ಯವನ್ನು ಬದಲಾಯಿಸಿ ಕೊರೊನಾ ಜಾಗೃತಿ ಗೀತೆಯನ್ನಾಗಿ ಮಾಡಿ ಹಾಡಿಗೆ ನರ್ತಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹಾಡಿನ ಸಾಹಿತ್ಯ ಇಂತಿದೆ.
''ಕೊರೊನಾಗೊಂದು ಎಲ್ಲೆ ಎಲ್ಲಿದೆ
ಈ ಕೇಸಸ್ಗೆಲ್ಲಿ ಕೊನೆ ಎಲ್ಲಿದೆ
ಏಕೆ ಹೊರಗೆ ಹೋಗುವೆ
ಮನೇಲಿರು, ಮನೇಲಿರು''
''ಸಿನಿಮಾ ಹಾಲು, ಶಾಪಿಂಗ್ ಮಾಲು ಏಕೆ ಸುತ್ತುವೆ
ಟ್ರಿಪ್ಪು, ಹರಟೆ, ಪಾರ್ಟಿ ಅಂತ ಏಕೆ ಅಲೆಯುವೆ
ಹ್ಯಾಂಗೌಟು, ಟಿಂಡರ್ ಡೇಟು ಆಮೇಲ್ ಟೈಮಿದೆ
ಈಗ ಮನೇಲಿರುವುದು ಅವಶ್ಯವಾಗಿದೆ
ಕೈ ತೊಳೆಯಿರಿ, ಮಾಸ್ಕ್ ಧರಿಸಿರಿ
ಅದೇನೇ ಆಗಲಿ ದೂರದಲ್ಲಿರಿ''
Recommended Video
ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಕೊರೊನಾ ಕಿಟ್ ಹಾಕಿಕೊಂಡು ಹಾಡಿಗೆ ಅಭಿನಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.