'ಕುರುಕ್ಷೇತ್ರ' ಬಂದು ಹೋಗುತ್ತಿದ್ದಂತೆ 'ರಾಮಾಯಣ' ಶುರು
ಸೌತ್ ಇಂಡಸ್ಟ್ರಿಯಲ್ಲಿ ಕುರುಕ್ಷೇತ್ರ ಸಿನಿಮಾದ ಹವಾ ಜೋರಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಕುರುಕ್ಷೇತ್ರ ತೆರೆಕಾಣುತ್ತಿದೆ. ಇದೀಗ, ಕುರುಕ್ಷೇತ್ರ ಬಂದು ಹೋಗುತ್ತಿದ್ದಂತೆ ರಾಮಾಯಣ ಬರುವ ಸುದ್ದಿ ಸಿಕ್ಕಿದೆ.
ಹೌದು, ಬಾಲಿವುಡ್ ಮಂದಿ ರಾಮಾಯಣ ಆಧಾರಿತ ಸಿನಿಮಾ ಮಾಡಲು ಮುಂದಾಗಿದ್ದು, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಮೇಕಿಂಗ್ ಮಾಡಲಿದ್ದಾರೆ.
ಸದ್ಯಕ್ಕೆ ರಾಮಾಯಣ ಕುರಿತು ಸಿನಿಮಾ ಮಾಡಬೇಕು ಎಂದು ನಿರ್ಮಾಪಕರು ನಿರ್ಧಾರ ಮಾಡಿದ್ದು, ಈ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಗೌಪ್ಯವಾಗಿದೆ.

ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಮಧು ಮಂತೇನಾ, ನಮಿತ್ ಮಲ್ಹೋತ್ರಾ ಜಂಟಿಯಾಗಿ ಬಂಡವಾಳ ಹಾಕಲಿದ್ದಾರೆ. ದಂಗಲ್ ಖ್ಯಾತಿಯ ನಿತೀಶ್ ತಿವಾರಿ ಮತ್ತು ರವಿ ಉದ್ಯರ್ ನಿರ್ದೇಶನ ಮಾಡಲಿದ್ದಾರೆ.
ಇದು 3ಡಿಯಲ್ಲಿ ತಯಾರಾಗಲಿದ್ದು, ಮೂರು ಭಾಗಗಳಾಗಿ ಸಿನಿಮಾ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು ಅಚ್ಚರಿ ಅಂದ್ರೆ ಈ ಚಿತ್ರಕ್ಕಾಗಿ 500 ಕೋಟಿ ಬಜೆಟ್ ಎಂದು ಅಂದಾಜು ಮಾಡಲಾಗಿದೆಯಂತೆ.


Click it and Unblock the Notifications











