Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!
Recommended Video
ಅಂಬರೀಶ್ ತಮ್ಮ ಇಡೀ ಜೀವನದಲ್ಲಿ ತಾವು ಆಸೆ ಪಟ್ಟಂತೆ ಬದುಕಿ ಬಾಳಿದವರು. ರೆಬೆಲ್ ವ್ಯಕ್ತಿತ್ವ ಹೊಂದಿದ್ದ ಅಂಬರೀಶ್ ಇಂದಿನ ಚಿತ್ರರಂಗಕ್ಕೆ 'ದೊಡ್ಡಣ್ಣ'ನಂತಿದ್ದರು. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಯಾದ್ರು ಮೊದಲು ಬರ್ತಿದ್ದೇ ಅಂಬಿ ಮನೆಗೆ.
ಕೇವಲ ಸಿನಿಮಾರಂಗ ಮಾತ್ರವಲ್ಲ, ಕೆಲವರ ವೈಯಕ್ತಿಕ ಜೀವನದಲ್ಲಾದ ಸಮಸ್ಯೆಗಳಿಗೂ ಅಂಬರೀಶ್ ಪರಿಹಾರ ನೀಡಿದ್ದಾರೆ. ಹೀಗಿದ್ದ ಅಂಬರೀಶ್ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.
ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?
ಬಹಿರಂಗವಾಗಿ ಕಾರ್ಯಕ್ರಮಗಳಿಗೆ ಹೋಗುವುದಕ್ಕೆ ಕಷ್ಟಪಡುತ್ತಿದ್ದರು. ಕೆಲವು ಕಡೆ ಕುಸಿದು ಬಿದ್ದ ಘಟನೆಗಳು ನಡೆದಿದ್ದವು. ಇಂತಹ ಅಂಬಿಗೆ ಕೊನೆಯ ದಿನದಲ್ಲೂ ಎರಡು ಪ್ರಮುಖ ಆಸೆಗಳು ಇದ್ದವು. ಆ ಎರಡು ಆಸೆಗಳನ್ನ ನೆರವೇರಿಸದೇ ಇಹಲೋಕ ತ್ಯಜಿಸಿದರು ಎನ್ನುವುದು ಈಗ ಬೇಸರದ ಸಂಗತಿ. ಅಂಬಿಗೆ ಕೊನೆಯ ದಿನಗಳಲ್ಲಿದ್ದ ಆ ಎರಡು ಆಸೆ ಯಾವುದು.? ಮುಂದೆ ಓದಿ....
ಅಂಬಿ ಮಗನ ಸಿನಿಮಾ
ಅಂಬರೀಶ್ ಅವರ ಮಗ ಅಭಿಷೇಕ್ 'ಅಮರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಹುತೇಕ 'ಅಮರ್' ಸಿನಿಮಾ ಚಿತ್ರೀಕರಣ ಮುಗಿದಿತ್ತು. ಮಗನ ಸಿನಿಮಾ ನೋಡುವ ಆಸೆ ಮತ್ತು ಉದ್ದೇಶ ಎರಡೂ ಅಂಬಿಗಿತ್ತು. ಮಗನನ್ನ ಇಂಡಸ್ಟ್ರಿಗೆ ದೊಡ್ಡದಾಗಿ ಪರಿಚಯ ಮಾಡಬೇಕು ಎಂಬ ಕನಸು ಕೂಡ ಕಂಡಿದ್ದರು. ಆದ್ರೆ, ಅಂಬರೀಶ್ ಅವರ ಈ ಆಸೆ ಕೊನೆಗೂ ಈಡೇರಲೇ ಇಲ್ಲ. 'ಅಮರ್' ಸಿನಿಮಾ ನೋಡದೇ ಅಂಬಿ ಇಹಲೋಕ ತ್ಯಜಿಸಿದ್ದಾರೆ.
ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?
ಜೆಪಿ ನಗರ ಮನೆ ರೆಡಿಯಾಗ್ಬೇಕಿತ್ತು
ಜೆಪಿ ನಗರದಲ್ಲಿರುವ ಅಂಬರೀಶ್ ಅವರ ನಿವಾಸ ನವೀಕರಣದ ಕೆಲಸ ನಡೆಯುತ್ತಿತ್ತು. ಮನೆಯನ್ನ ಹೊಸದಾಗಿ ವಿನ್ಯಾಸಗೊಳಿಸುತ್ತಿದ್ದರು. ಹೀಗಾಗಿ, ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿದ್ದ ಅಪಾರ್ಟ್ ಮೆಂಟ್ ನಲ್ಲಿ ಕೆಲವು ದಿನ ವಾಸವಾಗಿದ್ದರು. ಬಟ್, ಕೊನೆಯ ತಮ್ಮ ದಿನಗಳನ್ನ ಕನಸಿನ ಮನೆಯಲ್ಲಿ ಕಳೆಯಲು ಸಾಧ್ಯವಾಗಿಲ್ಲ ಎಂಬ ಕೊರಗು ಅವರನ್ನ ಕಾಡಿತ್ತು.
ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ
ಕಲಾವಿದರ ಸಂಘದ ಕಟ್ಟಡ ನಿರ್ಮಾಣ
ಇನ್ನು ಕಲಾವಿದರಿಗಾಗಿ ಒಂದು ಕಟ್ಟಡ ಬೇಕು ಎನ್ನುವುದು ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಿಂದಲೂ ಇದ್ದ ಮಹಾದಾಸೆ. ಇಂತಹ ಆಸೆಯನ್ನ ಅಂಬರೀಶ್ ಅವರ ನೆರವೇರಿಸಿದ್ದರು. ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಅಂತಹ ಕಲಾವಿದರಮ್ನ ಜೊತೆಗೂಡಿಸಿಕೊಂಡು ಕಲಾವಿದರಿಗಾಗಿ ಚಾಮರಾಜಪೇಟೆಯಲ್ಲಿ ಕಲಾವಿದರ ಸಂಘ ಕಟ್ಟಿದರು. ಇದು ಅಂಬಿಗೆ ಬಹಳ ಸಂತೋಷ ನೀಡಿತ್ತು.
ಅಂಬಿ ವಿಧಿವಶ: ವಿಕ್ರಂ ಆಸ್ಪತ್ರೆಯಲ್ಲಿ ಗಣ್ಯರ ದಂಡು
ತಾಯಿಗೆ ತಕ್ಕ ಮಗ
ಅಂಬರೀಶ್ ಅವರ ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಿದ್ದರೂ, ಸುದೀಪ್ ಅವರ ಒತ್ತಾಯದ ಮೆರೆಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಎಂಬ ಸಿನಿಮಾ ಮಾಡಿದರು. ದುರದೃಷ್ಟವಶಾತ್ ಅದೇ ಅವರ ಕೊನೆಯ ಸಿನಿಮಾ ಆಯ್ತು. ಇನ್ನು ಸುಮಲತಾ ಹಾಗೂ ಅಜಯ್ ರಾವ್ ಅಭಿನಯದ 'ತಾಯಿಗೆ ತಕ್ಕ ಮಗ' ಸಿನಿಮಾವನ್ನ ಅಂಬಿ ಕೊನೆಯದಾಗಿ ನೋಡಿದ್ದರು.