Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ಬಲಗೈ ಬಂಟ ಸೀನಣ್ಣ ಬಿಚ್ಚಿಟ್ಟ ಅಪರೂಪದ ಸಂಗತಿಗಳು
Recommended Video
ಬಿಳಿಗಡ್ಡ, ವಯಸ್ಸಾದ ವ್ಯಕ್ತಿ, ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಿ ಸುಮಲತಾ ಮತ್ತು ಅಭಿಷೇಕ್ ಅವರ ಪಕ್ಕದಲ್ಲೇ ಇದ್ದು, ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡುತ್ತಿದ್ದ ಇವ್ರು ಯಾರು ಎಂಬ ಕುತೂಹಲ ಹಲವರನ್ನ ಕಾಡಿದೆ.
ಹೆಸರು ಶ್ರೀನಿವಾಸ್, ಅಂಬಿ ಮತ್ತು ಅಂಬಿ ಆಪ್ತರಿಗೆ ಇವರು ಸೀನಣ್ಣ. ಸೀನಣ್ಣ ಅಂಬರೀಶ್ ಅವರ ಪಿಎ, ಸಹೋದರ, ಅಭಿಮಾನಿ, ಕುಟುಂಬದ ಸದಸ್ಯ ಎಲ್ಲವೂ ಆಗಿದ್ದರು. ಅಂಬರೀಶ್ ಮತ್ತು ಸೀನಣ್ಣ ಬಾಂಧವ್ಯ ನಿನ್ನೆ ಮೊನ್ನೆಯದಲ್ಲ. ಸುಮಾರು 35 ವರ್ಷದ ಪರಿಚಯ.
ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್
ಅಲ್ಲಿಂದ ಇಲ್ಲಿಯವರೆಗೂ ಅಂಬಿ ನಿವಾಸದಲ್ಲೇ ಜೀವನ ಮಾಡಿರುವ ಸೀನಣ್ಣ, ಅಂಬರೀಶ್ ಅವರನ್ನ ಬಹಳ ಹತ್ತಿರದಿಂದ ಬಲ್ಲವರು. ತನ್ನ ಒಡೆಯನ ಬಗ್ಗೆ ಯಾರಿಗೂ ಗೊತ್ತಿಲ್ಲದ ಅನೇಕ ವಿಷ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಆ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ತಿಳಿಯಲು ಮುಂದೆ ಓದಿ....
'ಅಂತ' ಸಿನಿಮಾ ವೇಳೆ ಬೇಟಿ
ಅಂಬರೀಶ್ ಅವರಿಗೆ ಕಾಲೇಜು ದಿನಗಳಿಂದಲೂ ಅಭಿಮಾನಯಾಗಿದ್ದ ಶ್ರೀನಿವಾಸ್ ಅವರು, ಹೇಗಾದರೂ ಮಾಡಿ ಅವರನ್ನ ಭೇಟಿಯಾಗಬೇಕು ಎಂದು ಯೋಚಿಸುತ್ತಿದ್ದರು. ಹೀಗೆ, ಒಂದು ದಿನ 'ಅಂತ' ಸಿನಿಮಾ ಶೂಟಿಂಗ್ ಗೆ ಸೀನಣ್ಣ ಹೋಗಿದ್ದರು. ಅಲ್ಲಿ ಅಂಬಿಯನ್ನ ಮಾತನಾಡಿಸಿದರು. ನಂತರ ಪದೇ ಪದೇ ಭೇಟಿಯಾಗುತ್ತಿದ್ದೆ. ಅದಕ್ಕೆ ಒಂದು ದಿನ ಅಂಬರೀಶ್ ''ಯಾಕೋ ಹೀಗ್ ಮಾಡ್ತೀಯಾ, ಬಾ ನನ್ ಜೊತೆನೇ ಇದ್ಬಿಡು'' ಅಂದ್ರು. ನಂತರ ಪಿಎ ಆಗಿ ಸೇರಿಕೊಂಡೆ. ಅಲ್ಲಿಂದ ಇಲ್ಲಿಯವರೆಗೂ ನಾನು ಸಹೋದರನಾಗಿಯೇ ನೋಡಿಕೊಂಡಿದ್ದಾರೆ ಎಂದು ಸೀನಣ್ಣ ಹೇಳಿಕೊಂಡಿದ್ದಾರೆ.
ಈ ನಂಬರ್ ನಿಂದ ಕರೆ ಬಂದರೆ ಅಂಬಿ ರಿಸೀವ್ ಮಾಡದೇ ಇರ್ತಿರಲಿಲ್ಲ
ನನ್ನನ್ನು ಬಿಟ್ಟು ಇರ್ತಿರಲಿಲ್ಲ
''ಒಂದ್ಕಡೆ ಅಭಿಮಾನ, ಅವರ ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ಅಂಬಿ ಅವರಲ್ಲಿ ಒಂದೇ ಒಂದು ದಿನವೂ ನೋವು ನೋಡಿಲ್ಲ. ನಾನೇನಾದರೂ ಕೆಲಸ ಇದೆ ಅಂತ ಮನೆಗೆ ಹೋಗಿದ್ದಾಗ, ಎರಡು ದಿನ ಬಂದಿಲ್ಲ ಅಂದ್ರೆ ಫೋನ್ ಮಾಡಿ 'ಈಗ ನನ್ ಮುಂದೆ ನೀನು ಇರಬೇಕು' ಅಂತಿದ್ರು. ಆಗ ಓಡಿ ಬರ್ತದ್ದೆ''
'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ
ರೇಸ್ ಚಟ ಆಗಿರಲಿಲ್ಲ
''ಅಂಬರೀಶ್ ಅವರಿಗೆ ಹೆಚ್ಚು ಇಷ್ಟವಾದ ಆಟ ರೇಸ್ ಎನ್ನುವುದು ಗೊತ್ತಿರುವ ವಿಚಾರ. ಆದ್ರೆ, ಭಾರಿ ಹಣವನ್ನ ಬೆಟ್ ಕಟ್ಟುವಷ್ಟು ಚಟ ಅವರಿಗಿರಲಿಲ್ಲ. ಕೇವಲ ಒಂದು ಸಾವಿರ, ಎರಡು ಸಾವಿರ ಬೆಟ್ ಕಟ್ತಿದ್ರು ಅಷ್ಟೇ. ಬಟ್, ರೇಸ್ ನ ತುಂಬಾ ಇಷ್ಟಪಡ್ತಿದ್ರು. ನಾನು ನೋಡಿದಾಗೆ ಐದು ಸಾವಿರವೇ ಅತಿ ಹೆಚ್ಚು ಬಟ್ ಕಟ್ಟಿದ್ದು ಅವರು''
ಅಂಬಿಗೆ ಇದ್ದ ಕೊನೆಯ ಆಸೆ ಬಗ್ಗೆ ಹೇಳಿಕೊಂಡ ಸುಮಲತಾ
ಯಾರ ಬಳಿಯೂ ಒಂದು ಪಡೆದಿಲ್ಲ
''ಅಂಬರೀಶ್ ಅವರು ಇದುವರೆಗೂ ಯಾರ ಬಳಿಯೂ ಒಂದು ರೂಪಾಯಿ ಪಡೆದಿಲ್ಲ. ಆದ್ರೆ, ಅದೇಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಹಲವು ಸಿನಿಮಾಗಳನ್ನ ಸಂಭಾವನೆ ಇಲ್ಲದೇ ಮಾಡಿಕೊಟ್ಟಿದ್ದಾರೆ. ಕಷ್ಟ ಅಂತ ಬಂದವರಿಗೆ ಏನಾದರೂ ಸಹಾಯ ಮಾಡ್ತಿದ್ರು. ಯಾರ ಬಳಿಯೂ ಕೈಚಾಚ ಬೇಡ, ಬೇರಯವರು ಕಾಸಿನಲ್ಲಿ ಕಾಫಿ ಕೂಡ ಕುಡಿಯಬೇಡ. ನಿನಗೆ ಏನಾದರೂ ಬೇಕು ಅಂದ್ರೆ ನನ್ನನ್ನು ಕೇಳು. ನೀನು ಎಷ್ಟು ಪ್ರಮಾಣಿಕತೆಯಿಂದ ಇರ್ತಿಯೋ ಅಲ್ಲಿಯವರೆಗೂ ನನ್ನ ಜೊತೆಯಲ್ಲೇ ಇರ್ತೀಯಾ'' ಎಂದು ಹೇಳಿಕೊಟ್ಟಿದ್ದರು.
ಅಂಬಿ ನಿಧನದ ನಂತರ ಸುಮಲತಾ ಮೊದಲ ಮಾತು!
ಅಲ್ಲವೂ ಸುಮ ಅತ್ತಿಗೆ ನೋಡಿಕೊಳ್ಳುತ್ತಿದ್ದರು
''ಅಂಬರೀಶ್ ಅವರಿಗೆ ಶಾಪಿಂಗ್ ಮಾಡುವುದು ಇಷ್ಟವಿರುತ್ತಿರಲಿಲ್ಲ. ಎಲ್ಲವೂ ಸುಮಲತಾ ಅತ್ತಿಗೆ ಮಾಡ್ತಿದ್ದರು. ಅಂಬಿ ಅಣ್ಣನಿಗೆ ಬಟ್ಟೆ ಬೇಕು ಅಂದ್ರೆ, ಮನೆಗೆ ಕರೆಯಿಸಿ ಕೊಡಿಸುತ್ತಿದ್ದರು. ಅಣ್ಣನಿಗೆ ಏನು ಬೇಕು ಏನು ಬೇಡ ಎನ್ನುವುದು ಸುಮ ಅತ್ತಿಗೆ ಗೊತ್ತಿತ್ತು. ಅವರಿಗೆ ಎಲ್ಲವೂ ಅವರೇ'' ಎಂದು ಅವರಿಬ್ಬರ ಬಾಂಧವ್ಯ ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ಗೆ ಮುಂದಿನ 'ಬಾಸ್' ಯಾರು.?
ಮೂರು ಟೇಕ್ ಮೇಲೆ ತಗೊಳ್ತಿರಲಿಲ್ಲ
''ನಾನು ನೋಡಿದ ಹಾಗೆ ಅವರು ಮೂರು ಶಾಟ್ ತೆಗೆದುಕೊಂಡ ಇತಿಹಾಸವೇ ಇಲ್ಲ. ಒಂದು ಅಥವಾ ಎರಡು ಶಾಟ್ ನಲ್ಲೇ ಓಕೆ ಆಗ್ತಿತ್ತು. ಒಂದು ಸಲ ಡೈರೆಕ್ಟರ್ ಸ್ಕ್ರಿಪ್ಟ್ ಓದಿದರೇ, ಒಂದೆ ಸಲ ಡೈಲಾಗ್ ಹೇಳ್ತಿದ್ರು. ಇನ್ನು ಅಂಬಿ ಅಣ್ಣನಿಗೆ ಹೆಚ್ಚು ಜ್ಞಾಪಕ ಶಕ್ತಿ ಇತ್ತು. ಸಾವಿರಾರು ಸಂಖ್ಯೆಗಳನ್ನ ನೆನಪಿನಲ್ಲಿಟ್ಟುಕೊಂಡಿದ್ದರು. ಯಾರಿಗಾದರೂ ಫೋನ್ ಮಾಡಬೇಕು ಅಂದ್ರೆ, ಹಾಗೆ ನಂಬರ್ ಹೇಳುತ್ತಿದ್ದರು''