Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ಕುಟುಂಬಸ್ಥರಿಂದ ಅಸ್ತಿ ಪೂಜೆ ಮತ್ತು ಹಾಲು ತುಪ್ಪ ಕಾರ್ಯ
ನಟ ಅಂಬರೀಶ್ ನಿಧನರಾಗಿ ಇಂದಿಗೆ ನಾಲ್ಕು ದಿನಗಳು ಕಳೆದಿವೆ. ಇಂದು ಅವರ ಸಮಾಧಿಗೆ ಅಸ್ತಿ ಪೂಜೆ ಹಾಗೂ ಹಾಲು ತುಪ್ಪ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.
ನಿಧನರಾದ ಮೂರು ದಿನಕ್ಕೆ ಅಂದರೆ, ನಿನ್ನೆ ಹಾಲು ತುಪ್ಪ ಬಿಡುವ ಕಾರ್ಯ ಮಾಡಬೇಕಿತ್ತು. ಆದರೆ, ನಿನ್ನೆ ಮಂಗಳವಾರ ಆಗಿರುವ ಕಾರಣ ಇಂದು ಈ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ಅಂಬರೀಶ್ ಪತ್ನಿ ಸುಮಲತಾ, ಮಗ ಅಭಿಷೇಕ್ ಪೂಜೆ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಪಂಚಭೂತಗಳಲ್ಲಿ ಲೀನರಾದ 'ಮಂಡ್ಯದ ಗಂಡು' ಅಮರ್ ನಾಥ್
ವಿಧಿ ವಿಧಾನದಂತೆ ಎಲ್ಲ ಪೂಜಾ ಕಾರ್ಯಗಳು ನಡೆಯುತ್ತಿದೆ. ಚಿತಾ ಬಸ್ಮವನ್ನು ಪಶ್ಚಿಮ ವಾಹಿನಿಯಲ್ಲಿ, ಕಾಶಿ ಹಾಗೂ ಗೋಕರ್ಣದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಜೊತೆಗೆ ದೇವಸ್ಥಾನವೊಂದರಲ್ಲಿ ಯಾಗ ಮತ್ತು ಹೋಮ ನಡೆಯುತ್ತಿದೆ. ದೇವಸ್ಥಾನದ ಸಿಬ್ಬಂದಿಗಳೇ ಅಂಬರೀಶ್ ಅವರ ಅಭಿಮಾನದಿಂದ ಸ್ವತಃ ಪ್ರೇರಿತವಾಗಿ ಈ ಕಾರ್ಯ ಮಾಡುತ್ತಿದ್ದಾರೆ.
ಒಗ್ಗಲಿಗ ಸಂಪ್ರದಾಯದಂತೆ ಇಂದಿನ ಪೂಜಾ ಕಾರ್ಯ ನಡೆಯುತ್ತಿದೆ. ಕಂಠೀರವ ಸ್ಟೂಡಿಯೋದಲ್ಲಿ ಇಂದು ಕೂಡ ಅಭಿಮಾನಿಗಳು ಆಗಮಿಸುತ್ತಿದ್ದು, ಪೊಲೀಸ್ ಭದ್ರತೆಯನ್ನು ವಹಿಸಲಾಗಿದೆ.
14 ದಿನ ಇದ್ದಿದ್ದರೇ ಅಂಬಿ ಮನೆಯಲ್ಲಿ ನಡೆಯುತ್ತಿತ್ತು ಸಂಭ್ರಮ
ಅಂದಹಾಗೆ, ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅಂಬರೀಶ್ ಅಪ್ತ ಸೀನಪ್ಪ ಸೇರಿದಂತೆ ಕುಟುಂಬದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.