Don't Miss!
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡೆಗೂ ಮುತ್ತಿನ ಬಗ್ಗೆ ಮೌನ ಮುರಿದ ಅಂಬರೀಶ್
ರೆಬೆಲ್ ಗೂ ಟ್ರಬಲ್ ಗೂ ಬಿಡಿಸಲಾರದ ನಂಟು. ಮೆದುಳಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೇ ಬಿಂದಾಸ್ ಆಗಿ ಮಾತನಾಡುವ ಅಂಬಿ, ಕೆಲವರ ಕೆಂಗಣ್ಣಿಗೆ ಆಗಾಗ ಗುರಿಯಾಗುತ್ತಲೇ ಇರುತ್ತಾರೆ. ಮೊನ್ನೆಯಷ್ಟೆ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ, ಅಂಬಿ ತೆಗೆಸಿಕೊಂಡ ಒಂದು ಫೋಟೋ, ಇಡೀ ಬೆಳಗಾವಿ ಸದನ, ಮಂಡ್ಯ ಕಾಂಗ್ರೆಸ್, ದೆಹಲಿ ಹೈಕಮಾಂಡ್, ರಾಹುಲ್ ಗಾಂಧಿವರೆಗೂ ತಲುಪಿ, ಸ್ಯಾಂಡಲ್ ವುಡ್ ನೆಲವನ್ನೇ ಶೇಕ್ ಮಾಡಿಬಿಡ್ತು.
ನಟ, ನಿರ್ಮಾಪಕ ಜೈಜಗದೀಶ್ ಮತ್ತು ವಿಜಯ್ ಲಕ್ಷ್ಮಿ ಸಿಂಗ್ ಪುತ್ರಿ ವೈಭವಿ ಕೆನ್ನೆಗೆ ಮುತ್ತು ಕೊಟ್ಟ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗಿತ್ತು. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಂಬಿ, ಮೊನ್ನೆ ''ನನ್ನಿಷ್ಟ, ನಾನು 350 ಹುಡುಗಿಯರನ್ನ ಇಟ್ಟುಕೊಂಡಿದ್ದೀನಿ, ಅದು ನನ್ನ ವೈಯುಕ್ತಿಕ ಜೀವನ, ಏನ್ ಮಾಡ್ತೀರಾ'' ಅಂತ ಬಿಂದಾಸ್ ಆಗಿ ಪಟಾಕಿ ಸಿಡಿಸಿದ್ದರು.
ಅದು ಕೆಲವೆಡೆ ಬಾಂಬ್ ನಂತೆ ಸಿಡಿದ ಪರಿಣಾಮ, ಜೈಜಗದೀಶ್ ಕುಟುಂಬ ಸುದ್ದಿಗೋಷ್ಠಿಯನ್ನು ನಡೆಸಿ, ಫೋಟೋ ಲೀಕ್ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿಕೆ ನೀಡಿದ್ದರು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಇನ್ನು ಸುಮಲತಾ ಮೇಡಂ, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು. ಇದೀಗ ಮತ್ತೊಂದು ಸುತ್ತು ರೆಬೆಲ್ ಆಗಿರುವ ವಸತಿ ಸಚಿವ ಅಂಬರೀಶ್, ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಮುಂದೆ ಕೆಂಡಮಂಡಲವಾಗಿದ್ದಾರೆ. [ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!]
''ಮೊಮ್ಮಕ್ಕಳಿಗೆ ಮುತ್ತು ಕೊಡುವುದು ತಪ್ಪಾ. ಮೊಮ್ಮಗಳನ್ನು ಮುದ್ದಿಸುವ ಅಧಿಕಾರ ನಂಗಿಲ್ವಾ. ನನಗೂ ಖಾಸಗಿ ಬದುಕಿದೆ. ನನ್ನನ್ನು ಬದುಕಲು ಬಿಡಿ. ಸಮಾಜದಲ್ಲಿ ನನಗೂ ಘನತೆ ಗೌರವ ಇದೆ. ಎಲ್ಲದಕ್ಕೂ ಅಪಾರ್ಥ ಕಲ್ಪಿಸಬೇಡಿ'', ಅಂತ ಕಲಾಪಕ್ಕೆ ತೆರಳುವ ಮುನ್ನ ಮಾಧ್ಯಮಗಳಿಗೆ ಅಂಬರೀಶ್ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ, ಆದ ವಿವಾದದ ಬಗ್ಗೆ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. [ಮಂಡ್ಯ ಗದ್ದುಗೆಗೆ ಉತ್ತರಾಧಿಕಾರಿಯಾಗುತ್ತಾರಾ ಅಂಬಿ ಪುತ್ರ?]
ಇಲ್ಲಿವರೆಗೂ ಸೈಲೆಂಟ್ ಆಗಿದ್ದ ಅಂಬಿ ಮಾಮ, ಕೊನೆಗೂ ವಿವಾದದ ಬಗ್ಗೆ ಪ್ರತಿಕ್ರಿಯೆಸಿ ತೆರೆ ಎಳೆದಿದ್ದಾರೆ. ಇನ್ನಾದರೂ ಅಂತೆ-ಕಂತೆಗಳ ಪುಂಗಿ ನಿಂತರೆ ಸಾಕು! ಅಂದಹಾಗೆ, ಅಂಬರೀಶ್ ಅವರ ವಯಸ್ಸು ಅರುವತ್ತೆರಡು ಪ್ಲಸ್ ಎಂಬುದು ಬಹುಶಃ ಎಲ್ಲರಿಗೂ ನೆನಪಿದೆ ಅಲ್ಲವೇ. (ಫಿಲ್ಮಿಬೀಟ್ ಕನ್ನಡ)