Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇರಳ ಸಂತ್ರಸ್ಥರಿಗೆ ದೊಡ್ಡ ಸಹಾಯ ಮಾಡಿದ ಅಮಿತಾಬ್ ಬಚ್ಚನ್
ಕೇರಳದಲ್ಲಿ ಪ್ರವಾಹ ಉಂಟಾಗಿ ಜನರ ಜೀವನ ಬೀದಿಗೆ ಬಂದಿದ್ದರೂ, ಬಾಲಿವುಡ್ ಸೂಪರ್ ಸ್ಟಾರ್ ಗಳು ಎಂದುಕೊಂಡ ಕೆಲವರು ಯಾವುದೇ ರೀತಿಯ ನೆರವು ನೀಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಕಿಡಿಕಾರಿದ್ದರು.
ಅದರಲ್ಲೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನ ಟಾರ್ಗೆಟ್ ಮಾಡಿ ಕೆಲವರು ತಮ್ಮ ಆಕ್ರೋಶವನ್ನ ಹೊರಹಾಕಿದ್ದರು. ಮೊದ ಮೊದಲು ಕೇವಲ ಟ್ವೀಟ್ ಮೂಲಕ ಕೇರಳಿಗರಿಗೆ ಸಾಂತ್ವನ ಹೇಳಿ ಸುಮ್ಮನಾಗಿದ್ದ ಬಿಗ್ ಬಿ ಈಗ ದೊಡ್ಡ ಮೊತ್ತವನ್ನ ನೀಡುವ ಮೂಲಕ ನೆರವಾಗಿದ್ದಾರೆ.
ಹೌದು, ಕೇರಳ ಸಂತ್ರಸ್ಥರ ಪರಿಹಾರ ನಿಧಿಗೆ ಅಮಿತಾಬ್ ಬಚ್ಚನ್ 51 ಲಕ್ಷ ರೂಪಾಯಿ ನೀಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!
ಕೇವಲ 51 ಲಕ್ಷ ಹಣಮಾತ್ರವಲ್ಲ, ಅಗತ್ಯವಸ್ತುಗಳು ಹಾಗೂ ಬಟ್ಟೆಗಳನ್ನ ಕೂಡ ಕಳುಹಿಸಿದ್ದಾರಂತೆ. 80 ಜಾಕೆಟ್, 25 ಪ್ಯಾಂಟ್, 20 ಶರ್ಟ್, 40 ಜೋಡಿಯ ಶೂಗಳು, ಹಾಗೂ ಇತರೆ ಆಹಾರ ಸಾಮಾಗ್ರಿಗಳನ್ನ ಬಿಗ್ ಬಿ ಕೇರಳ ಸಂತ್ರಸ್ಥರಿಗಾಗಿ ನೀಡಿದ್ದಾರೆ ಎನ್ನಲಾಗಿದೆ.
ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.?
ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ 1 ಕೋಟಿ ನೀಡುವ ಮೂಲಕ ತಮ್ಮ ಸಹಾಯ ನೀಡಿದ್ದರು. ಇನ್ನು ಶಾರೂಖ್ ಖಾನ್ ಅಭಿಮಾನಿಗಳು ಕೇರಳ ಜನತೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದಾರೆ.
ಇವರ ಜೊತೆ ಆಲಿಯಾ ಭಟ್, ವಿದ್ಯಾ ಬಾಲನ್, ಅಭಿಷೇಕ್ ಬಚ್ಚನ್, ರಣ್ಬೀರ್ ಕಪೂರ್, ರಿಷಿ ಕಪೂರ್ ಸೇರಿದಂತೆ ಹಲವರು ಕೇರಳಗೆ ನೆರವು ನೀಡಿದ್ದಾರೆ ಎನ್ನಲಾಗಿದೆ.