Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರೈತ' ಗಣಪತಿಯನ್ನ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಅಮೂಲ್ಯ ದಂಪತಿ
ಇಂದು ಸಂಕಷ್ಟ ಹರ ಗಣೇಶ ಚತುರ್ಥಿ.. ನಾಡಿನ ಮನೆ ಮನೆಯಲ್ಲೂ ಗಣೇಶ ಹಬ್ಬವನ್ನ ಜೋರಾಗಿ ಆಚರಿಸಲಾಗುತ್ತಿದೆ. ನಟಿ ಅಮೂಲ್ಯ ಮನೆಯಲ್ಲೂ ಗೌರಿ-ಗಣೇಶ ಹಬ್ಬದ ಸಂಭ್ರಮ ಅದ್ಧೂರಿಯಾಗಿದೆ.
ಹೇಳಿ ಕೇಳಿ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಅವರಿಗೆ ಪರಿಸರ ಕಾಳಜಿ ಹೆಚ್ಚು. ಪರಿಸರ ಪ್ರೇಮಿಗಳಾಗಿರುವ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಸಸಿ ನೆಟ್ಟಿದ್ದು ನಿಮಗೆ ನೆನಪಿರಬಹುದು.
ಇದೀಗ ಪರಿಸರ ಸ್ನೇಹಿಯಾಗಿ ಗಣೇಶ ಹಬ್ಬವನ್ನ ಅಮೂಲ್ಯ-ಜಗದೀಶ್ ದಂಪತಿ ಆಚರಿಸಿದ್ದಾರೆ. ಜೇಡಿ ಮಣ್ಣಿನಿಂದ ತಯಾರಿಸಲಾದ ವಿಶೇಷ ರೈತ ಗಣಪತಿಯನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ, ಅಮೂಲ್ಯ-ಜಗದೀಶ್ ಪೂಜೆ ಸಲ್ಲಿಸಿದ್ದಾರೆ.
ನಟ ದರ್ಶನ್ ಮನೆಯ ಮಣ್ಣಿನ ಗಣೇಶ ನೋಡಿ
ಅಂದ್ಹಾಗೆ, ಈ ರೈತ ಗಣಪನನ್ನು ಜೇಡಿ ಮಣ್ಣು ಹಾಗೂ ಸಗಣಿಯಿಂದ ತಯಾರಿಸಲಾಗಿದೆ. ಇದರಲ್ಲಿ ಕಾಳುಗಳನ್ನೂ ಸೇರಿಸಲಾಗಿದೆ. ರೈತ ಗಣಪತಿಯನ್ನ ಕುಂಡದಲ್ಲಿ ಅಥವಾ ತೋಟದಲ್ಲಿ ವಿಸರ್ಜಿಸಿದರೆ, ಮೂರ್ತಿಯಲ್ಲಿದ್ದ ಕಾಳುಗಳು ಮೊಳಕೆಯೊಡೆದು ಸಸಿಯಾಗಿ ಬೆಳೆಯುತ್ತದೆ.
'ದಿ ವಿಲನ್' ತಂಡದ ಗಣೇಶ ಆಚರಣೆ ಸಖತ್ ವಿಶೇಷವಾಗಿತ್ತು
''ನೀವೂ ಕೂಡ ನಿಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ, ಪರಿಸರ ಉಳಿಸಿ... ನಮ್ಮ ಗಣಪ.. ರೈತ ಗಣಪ'' ಅಂತ ಹೇಳುವ ಮೂಲಕ ಗಣೇಶ ಹಬ್ಬದ ಪ್ರಯುಕ್ತ ಎಲ್ಲರಿಗೂ ಶುಭ ಕೋರುವುದರ ಜೊತೆಗೆ ಜಾಗೃತಿಯನ್ನೂ ಮೂಡಿಸಿದ್ದಾರೆ ಅಮೂಲ್ಯ ದಂಪತಿ.
Happy Gowri Ganesha habba ❤️😍 pic.twitter.com/p9hwNQ3Yps
— Amulya (@Amulya_moulya) September 13, 2018