Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅವರು ಬದಲಾಗಿದ್ದಾರೆ, ನಟಿಸುವ ಹೊತ್ತಿಗೆ ಕೈ ನಡುಗುವುದಿಲ್ಲ , ರಾತ್ರಿ ಕೂಡ ಮಾತು ತೊದಲುವುದಿಲ್ಲ
*ಸತ್ಯನಾರಾಯಣ
ಅನಂತನಾಗ್ ಬದಲಾಗಿದ್ದಾರೆ. ಸಂಜೆ ನಂತರ ಶೂಟಿಂಗ್ಗೆ ಬರೋದಿಲ್ಲ, ಮೂಡ್ ಕೆಟ್ಟರೆ ನಟಿಸೋದಿಲ್ಲ ಮೊದಲಾದ ಹಳೇ ಜನಪ್ರಿಯ ಆರೋಪಗಳಿಂದ ಅವರೀಗ ಕಳಚಿಕೊಂಡಿದ್ದಾರೆ. ಅನಂತ್ರಂಥ ನಟರೊಂದಿಗೆ ಕೆಲಸ ಮಾಡುವುದೇ ಒಂದು ಅವಿಸ್ಮರಣೀಯ ಅನುಭವ ಎಂದು ಎ.ಆರ್.ಬಾಬುವಿನಂಥ ದಿಢೀರ್ ನಿರ್ದೇಶಕರಿಂದ ಹಿಡಿದು, ಟಿ.ಎನ್. ಸೀತಾರಾಂರಂಥ ಜಾಣ ನಿರ್ದೇಶಕರೂ ಗಟ್ಟಿಯಾಗಿ ಹೇಳುತ್ತಿದ್ದಾರೆ.
ಸೂರ್ಯ ಮುಳುಗುವುದಕ್ಕೆ ಮುಂಚೆ ಚಿಯರ್ಸ್ ಎನ್ನುವ ಅನಂತ್ ಈಗ ಮತದಾನದಲ್ಲಿ ರಾತ್ರಿ 2ರ ತನಕ ಶೂಟಿಂಗ್ ಮಾಡಿದ್ದಾರೆ. ಮಲೆನಾಡಿನ ಚಳಿಗೆ ಬೆದರದೆ ಹೊಳೆಯಲ್ಲಿ, ಬಯಲಲ್ಲಿ ನಡೆದಾಡಿದ್ದಾರೆ. ಚಿತ್ರತಂಡದವರೇ ಆತಂಕಗೊಂಡಾಗ ‘ನನ್ನ ಸ್ಟಾಕ್ ಜೇಬಲ್ಲಿದೆ , ಆಮೇಲೆ ತಗೊತೀನಿ’ ಎಂದು ಸಮಾಧಾನ ಮಾಡಿದ್ದಾರೆ. ಚಿತ್ರಕಥೆಯಲ್ಲಾಗಲೀ, ಸಂಭಾಷಣೆಯಲ್ಲಾಗಲೀ ಯಾವತ್ತೂ ಹಸ್ತಕ್ಷೇಪ ಮಾಡದ ಅನಂತ್ ಈ ಬಾರಿ ಎಲ್ಲದರ ಬಗ್ಗೆಯೂ ವಿಚಾರಿಸುತ್ತಿದ್ದಾರೆ. ತಮ್ಮ ಪಾತ್ರದಲ್ಲಿ ತಾವೇ ಒಂದಿಷ್ಟು ಇಂಪ್ರೊವೈಸೇಷನ್ ಮಾಡಿಕೊಂಡಿದ್ದಾರೆ. ನಟಿಸುವ ಹೊತ್ತಿಗೆ ಅವರ ಕೈ ನಡುಗುವುದಿಲ್ಲ. ರಾತ್ರಿ ಕೂಡ ಮಾತು ತೊದಲುವುದಿಲ್ಲ !
ತೀರ್ಥಹಳ್ಳಿಯಲ್ಲಿ ತೀರ್ಥಸೇವನೆಗೆ ಮೊದಲೇ ಬಿಚ್ಚಿಕೊಂಡ ಅನಂತ ಚಿಂತನೆ ಇಲ್ಲಿದೆ :
- ತಾವು ಮತ್ತೆ ರಾಜಕೀಯದತ್ತ ಹೊರಳುವ ಸಾಧ್ಯತೆಯಿದೆಯೇ?
- ರಾಜಕೀಯಕ್ಕೆ ಹೋಗಿ ಮತ್ತೆ ಚಿತ್ರರಂಗಕ್ಕೇ ಬಂದದ್ದಕ್ಕೆ ನಿಮಗೆ ಪಶ್ಚಾತಾಪವಿದೆಯೇ?
- ರಾಜಕೀಯದ ಕನೆಕ್ಷನನ್ನು ನೀವು ಕಳಚಿಕೊಂಡದ್ದರ ಬಗ್ಗೆ ನಿಮ್ಮ ಸ್ನೇಹಿತರಿಗಾಗಲಿ, ಅಭಿಮಾನಿಗಳಾಗಲೀ ಬೇಸರವಾಗಿಲ್ಲವೇ?
- ರಾಮಕೃಷ್ಣ ಹೆಗಡೆ ಅವರು ರಾಜ್ಕುಮಾರ್ ತವರೂರಿನ ಬಗ್ಗೆ ಆಡಿದ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯೇನು?
- ಮತದಾನ ಮೂಲಕ ಒಳ್ಳೆ ಚಿತ್ರಗಳ ಪರಂಪರೆ ಮತ್ತೆ ಶುರುವಾಗುತ್ತದೆ ಅನ್ನುವ ನಂಬಿಕೆ ನಿಮಗಿದೆಯೇ?
ವಾರ್ತಾ
ಸಂಚಯ
ಮುಖಪುಟ
/
ಸ್ಯಾಂಡಲ್ವುಡ್