Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಂತು v/s ನುಸ್ರತ್ ತಂಡದಿಂದ ಮಂಗಳಮ್ಮನ ಬರ್ತಡೇ!
ವಿನಯ ರಾಜ್ ಕುಮಾರ್ ಅಭಿನಯದ ಚಿತ್ರ 'ಅನಂತು V/s ನುಸ್ರತ್'. ಸುಧೀರ್ ಶಾನುಭೋಗ್ ನಿರ್ದೇಶನದ ಈ ಚೊಚ್ಚಲ ಚಿತ್ರ ಮುಂದಿನ ವಾರ ತೆರೆಗೆ ಬರಲು ಸಿದ್ಧವಾಗಿದೆ.
ಡಿಸೆಂಬರ್ 21ರಂದು ಶುಕ್ರವಾರ ವಿನಯ್ ರಾಜಕುಮಾರ್ ಅವರ ತಾಯಿ ಮಂಗಳಾ ರಾಘವೇಂದ್ರ ರಾಜ್ ಅವರ ಜನ್ಮದಿನಾಚರಣೆಯಿತ್ತು. ಇದನ್ನು ಅರಿತ ಚಿತ್ರತಂಡದ ಆತ್ಮೀಯರು ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ಭೇಟಿನೀಡಿ ಚಿತ್ರತಂಡದ ವತಿಯಿಂದ ಕೇಕ್ ಕತ್ತರಿಸಿ ಶುಭ ಕೋರಿದರು.
ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಜನ್ಮದಿನಾಚರಣೆಯ ವೇಳೆ ಪತಿ ರಾಘವೇಂದ್ರ ರಾಜಕುಮಾರ್, ಪುತ್ರರಾದ ವಿನಯ್ ರಾಜ್ ಕುಮಾರ್, ಗುರು ರಾಘವೇಂದ್ರ ರಾಜ್ ಕುಮಾರ್, ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಭಾನುಮತಿ, ಚಿತ್ರತಂಡದ ಕಿರಣ್ ಧೀರಜ್ ಮೊದಲಾದವರ ಜೊತೆಗೆ ಆಪ್ತವಲಯದ ಅಭಿಮಾನಿಗಳ ಸಮಾಗಮವಿತ್ತು. ಮುಂದೆ ಓದಿರಿ..
ವಿನಯ್ ಅವರ ವಿಭಿನ್ನ ಪ್ರಯತ್ನ
ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಅವರು ವಕೀಲ ಅನಂತ ಕೃಷ್ಣನ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಜಡ್ಜ್ ನುಸ್ರತ್ ಫಾತಿಮಾ ಬೇಗ್ ಪಾತ್ರದಲ್ಲಿ ಲತಾ ಹೆಗ್ಗಡೆ ಅಭಿನಯವಿದೆ. ಇದೊಂದು ಹಾಸ್ಯ ಪ್ರೇಮ ಕಥೆಯಧಾರಿತ ಚಿತ್ರವಾಗಿದ್ದರೂ, ಅನಂತು ಮತ್ತು ನುಸ್ರತ್ ನಡುವಿನ ಪ್ರೇಮಕಥೆಗೆ ಹೆಚ್ಚು ಒತ್ತು ನೀಡಲಾಗಿದೆ.
ಭಾನುವಾರ ಬಂದ್ರೆ ಸಾಕು ಹುಡುಗಿ ನೋಡೋಕ್ಕೆ ಹೋಗ್ತಾರೆ ವಿನಯ್
ಚಿತ್ರದ ವಿಶೇಷತೆ
ಪಾತ್ರಗಳು ಹಾಗೂ ಘಟನೆಗಳನ್ನು ಕುತೂಹಲದಿಂದ ಜೋಡಿಸಿ ನಿರ್ದೇಶಕರು ಚಿತ್ರ ಮಾಡಿದಂತಿದೆ. ಮಾಣಿಕ್ಯ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ತಯಾರಾಗಿ ನಿಂತಿದೆ. ರವಿಶಂಕರ್, ಗುರು ಪ್ರಸಾದ್, ಭಗವಾನ್ ಮತ್ತಿತರ ತಾರಾಗಣವಿದ್ದು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ, ಸುನಾದ್ ಗೌತಮ್ ಅವರ ಸಂಗೀತ ಚಿತ್ರದಲ್ಲಿದೆ.
ವಿನಯ್ ಚಿತ್ರದ ಬಗ್ಗೆ ಜನರು ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ.!
ಬರ್ತಡೇ ದಿನ..
ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಜನ್ಮದಿನಾಚರಣೆಯ ವೇಳೆ ಪತಿ ರಾಘವೇಂದ್ರ ರಾಜಕುಮಾರ್, ಪುತ್ರರಾದ ಹಾಗೂ ಅನಂತು v/s ನುಸ್ರತ್ ಚಿತ್ರದ ನಾಯಕ ವಿನಯ್ ರಾಜ್ ಕುಮಾರ್, ಅವರ ಸಹೋದರ ಗುರು ರಾಘವೇಂದ್ರ ರಾಜ್ ಕುಮಾರ್, ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಭಾನುಮತಿ, ಚಿತ್ರತಂಡದ ಕಿರಣ್ ಧೀರಜ್ ಮೊದಲಾದವರ ಜೊತೆಗೆ ಆಪ್ತವಲಯದ ಅಭಿಮಾನಿಗಳ ಸಮಾಗಮವಿತ್ತು. ಇತ್ತೀಚೆಗಷ್ಟೇ ಕಿರುತೆರೆಯ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದಂಥ 'ಸಿದ್ದಾರ್ಥ' ಸಿನಿಮಾ ಖ್ಯಾತಿಯ ನಯನಾ ಕೂಡ ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಗಾಜನೂರಿನ ಗ್ರಾಮದಲ್ಲಿ ಮರುಹುಟ್ಟು ಪಡೆದ ವಿನಯ್ ರಾಜ್ ಕುಮಾರ್
ಕೊಡಬೇಕಾಗಿರುವುದೆಲ್ಲ ನಾವೇ..!
''ನಮಗೆ ಅಪ್ಪಾಜಿ ಕಾಲದಿಂದಲೇ ಅಭಿಮಾನಿಗಳ ಆಶೀರ್ವಾದ ದೊರಕಿದೆ. ಒಬ್ಬ ನಟನ ಅಭಿಮಾನಿಗಳಾಗಿ ನೀವುಗಳು ಅಪಾರವಾದ ಕೊಡುಗೆ ನೀಡಿದ್ದೀರಾ. ಅಂಥ ನಿಮಗೆ ಕೊಡುಗೆ ನೀಡುವಲ್ಲಿ ನಾವೇ ಕಡಿಮೆಯಾದ ಹಾಗಿದ್ದೇವೆ. ನನ್ನ ಕಿರಿಯ ಮಗ ಡಾ.ರಾಜಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿಯ ಮೂಲಕ ಸೇವಾ ಮನೋಭಾವದ ಪ್ರಯತ್ನ ನಡೆಸಿದ್ದಾನೆ. ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಯ ಮೂಲಕ ಸಮಾಜದ ಸುಧಾರಣೆ ಬಯಸುವ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಜೀವ ತುಂಬುವ ಕೆಲಸಕ್ಕೆ ಪ್ರಯತ್ನಿಸಿದ್ದು ನಾವೆಲ್ಲ ಆತನಿಗೆ ಬೆಂಬಲವಾಗಿದ್ದೇವೆ. ಈ ಬಾರಿ ಅಂಧ ವಿದ್ಯಾರ್ಥಿನಿಯೋರ್ವಳು ಉತ್ತೀರ್ಣಗೊಂಡಿರುವುದು ಸೇರಿದಂತೆ ಒಂದಷ್ಟು ಉತ್ತಮ ಬೆಳವಣಿಗೆಗಳಾಗಿವೆ. ಈ ಎಲ್ಲ ಸಂತಸದ ನಡುವೆ ನಾನು ಮಂಗಳಮ್ಮ ಎಂದೇ ಕರೆಯುವ ನನ್ನ ಪತ್ನಿಗೆ ಜನ್ಮದಿನ ಎನ್ನುವುದು ಖುಷಿ ತಂದಿದೆ. ಅದರಲ್ಲಿ ಕೂಡ ಮಗನ ಚಿತ್ರತಂಡದವರು ಈ ಸಂಭ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದು ನಮ್ಮ ಖುಷಿಯನ್ನು ಹೆಚ್ಚಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ರಾಘವೇಂದ್ರ ರಾಜ್ ಕುಮಾರ್ ಶುಭಕೋರಿದರು.