Don't Miss!
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆನೆಬಲ' ಸಿನಿಮಾ ಇದೇ ತಿಂಗಳ 28ಕ್ಕೆ ಬಿಡುಗಡೆ
'ಆನೆಬಲ' ಸಿನಿಮಾದ ಬಿಡುಗಡೆದ ದಿನಾಂಕ ನಿಗದಿಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ರಾಗಿ ಮುದ್ದೆಯ ಮೂಲಕ ಸುದ್ದಿ ಮಾಡಿದ್ದ ಸಿನಿಮಾ 'ಆನೆಬಲ'. ಸಿನಿಮಾದ ಪ್ರಮುಖ ಕಥಾವಸ್ತು ರಾಗಿ ಮುದ್ದೆಯಾಗಿದ್ದು, ಅದಕ್ಕೆ ತಕ್ಕ ಹಾಗೆ ಒಂದು ದೊಡ್ಡ ಗಾತ್ರದ ಮುದ್ದೆಯ ಮೂಲಕ ಚಿತ್ರತಂಡ ಗಮನ ಸೆಳೆದಿತ್ತು.
Recommended Video
ಟ್ರೇಲರ್ ಮತ್ತು ಹಾಡುಗಳ ನಂತರ ಸಿನಿಮಾವನ್ನು ಜನರ ಮುಂದೆ ತರಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಫೆಬ್ರವರಿ 28 ರಂದು 'ಆನೆಬಲ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ತಿಂಗಳು ಕನ್ನಡದಲ್ಲಿ ದಾಖಲೆಯ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಅದಕ್ಕೆ 'ಆನೆಬಲ' ಕೂಡ ಸೇರಿಕೊಂಡಿದೆ.
ಹೊಸಬರ ವಿನೂತನ ಪ್ರಯೋಗದ 'ಆನೆಬಲ' ಚಿತ್ರದ ಟ್ರೈಲರ್ ಬಿಡುಗಡೆ
'ಆನೆಬಲ' ಸಿನಿಮಾವನ್ನು ಮಂಡ್ಯ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಳ್ಳಿ ಪರಿಸರದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಮುತ್ತುರಾಜ್, ಗೌತಮ್ ಕ್ವತತ್ತಿ, ಚಿರಂಜೀವಿ, ಮಂಜುಳಾ ಸಿನಿಮಾದಲ್ಲಿ ನಟಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಡುಗಳಲ್ಲಿ ಇದೆ. ಜನತಾ ಟಾಕೀಸ್ ಸಂಸ್ಥೆ ಮೂಲಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಸಿನಿಮಾದ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಬರ್ತಾರೆ ಸೋನು ನಿಗಮ್
ಸೂನಗಹಳ್ಳಿ ರಾಜು ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕತೆ ಕೂಡ ಅವರದ್ದೇ ಆಗಿದೆ. ನೈಜತೆಗೆ ಒತ್ತು ನೀಡಿರುವ ನಿರ್ದೇಶಕರು ಆದಷ್ಟು ರಿಯಲಿಸ್ಟಿಕ್ ಆಗಿ ಶೂಟಿಂಗ್ ಮಾಡಿದ್ದಾರಂತೆ.