Don't Miss!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್, ಪುನೀತ್ ಗೆ ಚಾಲೆಂಜ್ ಹಾಕಿದ ಅನಿಲ್ ಕುಂಬ್ಳೆ
Recommended Video
ಸ್ಯಾಂಡಲ್ ವುಡ್ ನಲ್ಲಿ ಈ ಬಾರಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕವನ ಓದುವ ಮೂಲಕ ಕನ್ನಡ ಸೆಲಿಬ್ರಿಟಿಗಳು ರಾಜ್ಯೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ.
ಕವನ ಓದುವ ಚಾಲೆಂಜ್ ಈಗ ಖ್ಯಾತ ಕ್ರಿಕೆಟ್ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಹತ್ತಿರ ಬಂದಿದೆ. ನಟ ಗಣೇಶ್, ಅನಿಲ್ ಕುಂಬ್ಳೆಗೆ ಈ ಸವಾಲು ಹಾಕಿದ್ದರು. ಇದನ್ನು ಯಶಸ್ಸಿಯಾಗಿ ಪೂರೈಸಿದ ಕುಂಬ್ಳೆ ನಂತರ, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಗಾಯಕ ವಿಜಯ್ ಪ್ರಕಾಶ್ ರಿಗೆ ಚಾಲೆಂಜ್ ನೀಡಿದ್ದಾರೆ.
10 ತಿಂಗಳ ಚಿತ್ರರಂಗ: ಬಿಡುಗಡೆಯಾಗಿದ್ದು 163 ಸಿನಿಮಾ, 100 ಡೇಸ್ ಆಗಿದ್ದು ಎರಡೇ ಸಿನಿಮಾ
ಅನಿಲ್ ಕುಂಬ್ಳೆ, ರಾಷ್ಟ್ರಕವಿ ಕುವೆಂಪುರವರ ಕವನ ಓದಿದ್ದಾರೆ. ''ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ'' ಎಂದು ಹಾಡಿದ್ದಾರೆ. ಈ ಮೂಲಕ ತಮ್ಮ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಟದ ತಮ್ಮ ಸಾಧನೆಯಿಂದ ಕರುನಾಡಿಗೆ ಹೆಮ್ಮೆ ತಂದಿರುವ ಕುಂಬ್ಳೆ ಇದೀಗ ಕವನ ಓದಿದ್ದಾರೆ.
''ಈ ಸವಾಲನ್ನು ಮುಂದುವರೆಸಬೇಕು ಎಂದು ನನ್ನ ಸ್ನೇಹಿತರಾದ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ವಿಜಯ ಪ್ರಕಾಶ್ ರಿಗೆ ಕೇಳಿಕೊಳ್ಳುತ್ತೇನೆ.'' ಎಂದ ಕುಂಬ್ಳೆ, ವಿಜಯ ಪ್ರಕಾಶ್ ಹಾಡಿನ ಮೂಲಕವೇ ಈ ಚಾಲೆಂಜ್ ಪೂರ್ಣಗೊಳಿಸಬೇಕು ಎಂದಿದ್ದಾರೆ.
#poetryreadingchallenge @Official_Ganesh. Hope you all like it. Passing this challenge to @KicchaSudeep @PuneethRajkumar @rvijayprakash 🙏🏽 pic.twitter.com/N7JsMFKAec
— Anil Kumble (@anilkumble1074) November 15, 2019
ರಾಕಿಂಗ್ ಸ್ಟಾರ್ ಯಶ್ ಹಾಕಿದ ಸವಾಲು ಸ್ವೀಕರಿಸಿದ ನಟ ಚಿಕ್ಕಣ್ಣ
ಅಂದಹಾಗೆ, ಕವನ ಚಾಲೆಂಜ್ ನಟ ಯಶ್ ಮೂಲಕ ಪ್ರಾರಂಭ ಆಗಿತ್ತು. ಹಿರಿಯ ಪತ್ರಕರ್ತರೊಬ್ಬರು ನೀಡಿದ ಸವಾಲನ್ನು ಯಶ್ ಸ್ವೀಕರ ಮಾಡಿದ್ದರು. ನಂತರ ಅದನ್ನು ನಿರ್ದೇಶಕ ನಾಗಾಭರಣ, ಗೀತಾ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್, ಗೌಸ್ ಪೀಸ್, ಹಾಸ್ಯ ನಟ ಚಿಕ್ಕಣ್ಣ, ರವಿಶಂಕರ್ ಗೌಡ ಹಾಗೂ ರವಿಶಂಕರ್ ರಿಗೆ ನೀಡಿದ್ದರು.