Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ವಿಷ್ಣು ಪುತ್ರಿ-ಅನಿರುದ್ಧ್ ಮದುವೆ
ಫೆಬ್ರವರಿ 17, ಭಾನುವಾರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಹೊಸ ನಾಯಕ ನಟ ಅನಿರುದ್ಧ್ ಹಾಗೂ ವಿಷ್ಣುವರ್ಧನ್ ದತ್ತು ಪುತ್ರಿ ಕೀರ್ತಿ ಮದುವೆ.
ತಾನು ಇಂಟೀರಿಯರ್ ಡೆಕೊರೇಟರ್ ಆಗಿದ್ದಾಗಲೇ ಅನಿರುದ್ಧ್ ಜತ್ಕರ್ ವಿಷ್ಣು ಅಳಿಯನಾಗಿ ಗೊತ್ತಾಗಿದ್ದರು. ಮುದ್ದು ಮುದ್ದಾಗಿರುವ ಈತ ಈಗ ಭರವಸೆ ಹುಟ್ಟಿಸಿರುವ ನಾಯಕ. ‘ಚಿತ್ರ’ದಲ್ಲಿ ನಾಯಕ ಪ್ರಸಾದ್ ಗೆಳೆಯನಾಗಿ ಮಿಂಚಿದ ಈತ ಚಿಟ್ಟೆ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ. ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಈತನ ಪೈಪ್ಲೈನ್ನಲ್ಲಿರುವ ಅತಿ ನಿರೀಕ್ಷೆಯ ಚಿತ್ರ ತುಂಟಾಟ.
ಅಂದಹಾಗೆ, ಕೀರ್ತಿ- ಅನಿರುದ್ಧ್ ಮದುವೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಬರುವ ನಿರೀಕ್ಷೆಯಿದೆ. ಈ ಪೈಕಿ ಅನಾರೋಗ್ಯದಿಂದ ಹಾಸಿಗೆ ಹಿಡಿದು, ಈಗ ಪರವಾಗಿಲ್ಲ ಎಂಬಂತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ವಿಷ್ಣು ಪ್ರೀತಿಯ ಗೆಳೆಯ ರಜನೀಕಾಂತ್ ಪ್ರಮುಖರು. ಚಿತ್ರರಂಗದ ದೊಡ್ಡ ದಂಡು ಅಂದು ನೆರೆಯುವುದು ಖಚಿತ. ಮದುವೆಯನ್ನು ವಿಷ್ಣು ಭಾರೀ ಅದ್ಧೂರಿಯಾಗೇ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ- ಮದುವೆಯ ಪ್ರತಿ ಕರೆಯೋಲೆಗೆ ಆಗಿರುವ ಕನಿಷ್ಠ ಖರ್ಚು 350 ರುಪಾಯಿ; ಅದೂ ರಿಸೈಕಲ್ಡ್ ಕಾಗದದಿಂದ ಮಾಡಿದ ಹೊರತೂ ! ಅನಿರುದ್ಧ್- ಕೀರ್ತಿ ಮದುವೆಗೆ ನೀವು ಹೋಗುತ್ತೀರಾ?
ಮುಖಪುಟ / ಸ್ಯಾಂಡಲ್ವುಡ್