Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಬ್ಬದ ದಿನ ಖುಷಿ ಹೆಚ್ಚಿಸಿದ ಪುನೀತ್ - ಮನೋರಂಜನ್
Recommended Video
ಸಂಕ್ರಾಂತಿ ಹಬ್ಬದ ಆಚರಣೆ ಇರುವ ಅಭಿಮಾನಿಗಳಿಗೆ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಮನೋರಂಜ್ ಗಿಫ್ಟ್ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಮತ್ತು ಮನೋರಂಜನ್ ಅವರ 'ಬೃಹಸ್ಪತಿ' ಚಿತ್ರಗಳ ಕಡೆಯಿಂದ ಅಭಿಮಾನಿಗಳ ಹಬ್ಬದ ಖುಷಿ ಮತ್ತಷ್ಟು ಜಾಸ್ತಿ ಆಗಿದೆ.
ಇನ್ಮುಂದೆ 'ಅಂಜನಿಪುತ್ರ' ನೋಡೋರಿಗೆ Extra ಪವರ್ ಸಿಗಲಿದೆ
'ಅಂಜನಿಪುತ್ರ' ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಈ ವಿಶೇಷವಾಗಿ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆ ಟ್ರೇಲರ್ ಬಿಡುವುದು ಸಾಮಾನ್ಯ ಸಂಗತಿ. ಆದರೆ ಸಿನಿಮಾ ಬಂದ ಮೇಲೆ 'ಅಂಜನಿಪುತ್ರ' ಮತ್ತೊಂದು ಟ್ರೇಲರ್ ಬಂದಿದೆ. ಅಷ್ಟೆ ಅಲ್ಲದೆ ಇಂದಿನಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರು ಪುನೀತ್ ಅವರ ಹೆಚ್ಚು ಆಕ್ಷನ್ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ. 'ಅಂಜನಿಪುತ್ರ' ಸಿನಿಮಾ ನೋಡೋರಿಗೆ ಮತ್ತಷ್ಟು ಕಿಕ್ ನೀಡಲು ಹೊಸ ದೃಶ್ಯ ಸೇರಿಸಲಾಗಿದೆ.
ನಟ ಮನೋರಂಜನ್ ಅಭಿನಯದ 'ಬೃಹಸ್ಪತಿ' ಸಿನಿಮಾ ಕೂಡ ರಿಲೀಸ್ ಆಗಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಈ ವೇಳೆ ಸಿನಿಮಾ ಒಂದು ವಿಶೇಷ ಹಾಡಿನ ವಿಡಿಯೋವನ್ನು ಹಬ್ಬದ ದಿನ ಚಿತ್ರತಂಡ ರಿಲೀಸ್ ಮಾಡಿದೆ. ಚಿತ್ರದಲ್ಲಿ ಯೋಗರಾಜ್ ಭಟ್ ಬರೆದ 'ನೋಡ್ರಪ್ಪ ನಮೋನು ಆಗ್ಬಿಟ್ಟ ರವಿಚಂದ್ರನು..' ಎಂಬ ಹಾಡಿನ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. 'ಬೃಹಸ್ಪತಿ' ಮನೋರಂಜನ್ ಅಭಿನಯದ ಎರಡನೇ ಸಿನಿಮಾವಾಗಿದ್ದು, ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದರು.