Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಬ್ಬದ ದಿನ ಖುಷಿ ಹೆಚ್ಚಿಸಿದ ಪುನೀತ್ - ಮನೋರಂಜನ್

ಸಂಕ್ರಾಂತಿ ಹಬ್ಬದ ಆಚರಣೆ ಇರುವ ಅಭಿಮಾನಿಗಳಿಗೆ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಮನೋರಂಜ್ ಗಿಫ್ಟ್ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಮತ್ತು ಮನೋರಂಜನ್ ಅವರ 'ಬೃಹಸ್ಪತಿ' ಚಿತ್ರಗಳ ಕಡೆಯಿಂದ ಅಭಿಮಾನಿಗಳ ಹಬ್ಬದ ಖುಷಿ ಮತ್ತಷ್ಟು ಜಾಸ್ತಿ ಆಗಿದೆ.
ಇನ್ಮುಂದೆ 'ಅಂಜನಿಪುತ್ರ' ನೋಡೋರಿಗೆ Extra ಪವರ್ ಸಿಗಲಿದೆ
'ಅಂಜನಿಪುತ್ರ' ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಈ ವಿಶೇಷವಾಗಿ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆ ಟ್ರೇಲರ್ ಬಿಡುವುದು ಸಾಮಾನ್ಯ ಸಂಗತಿ. ಆದರೆ ಸಿನಿಮಾ ಬಂದ ಮೇಲೆ 'ಅಂಜನಿಪುತ್ರ' ಮತ್ತೊಂದು ಟ್ರೇಲರ್ ಬಂದಿದೆ. ಅಷ್ಟೆ ಅಲ್ಲದೆ ಇಂದಿನಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರು ಪುನೀತ್ ಅವರ ಹೆಚ್ಚು ಆಕ್ಷನ್ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ. 'ಅಂಜನಿಪುತ್ರ' ಸಿನಿಮಾ ನೋಡೋರಿಗೆ ಮತ್ತಷ್ಟು ಕಿಕ್ ನೀಡಲು ಹೊಸ ದೃಶ್ಯ ಸೇರಿಸಲಾಗಿದೆ.
ನಟ ಮನೋರಂಜನ್ ಅಭಿನಯದ 'ಬೃಹಸ್ಪತಿ' ಸಿನಿಮಾ ಕೂಡ ರಿಲೀಸ್ ಆಗಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಈ ವೇಳೆ ಸಿನಿಮಾ ಒಂದು ವಿಶೇಷ ಹಾಡಿನ ವಿಡಿಯೋವನ್ನು ಹಬ್ಬದ ದಿನ ಚಿತ್ರತಂಡ ರಿಲೀಸ್ ಮಾಡಿದೆ. ಚಿತ್ರದಲ್ಲಿ ಯೋಗರಾಜ್ ಭಟ್ ಬರೆದ 'ನೋಡ್ರಪ್ಪ ನಮೋನು ಆಗ್ಬಿಟ್ಟ ರವಿಚಂದ್ರನು..' ಎಂಬ ಹಾಡಿನ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. 'ಬೃಹಸ್ಪತಿ' ಮನೋರಂಜನ್ ಅಭಿನಯದ ಎರಡನೇ ಸಿನಿಮಾವಾಗಿದ್ದು, ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದರು.