twitter
    For Quick Alerts
    ALLOW NOTIFICATIONS  
    For Daily Alerts

    ಶ್ರುತಿ ಬಾಯಿ ಮುಚ್ಚಬೇಕು ಅಂದ್ರೆ 2 ಕೋಟಿ ಕೊಡಬೇಕಂತೆ!

    |

    Recommended Video

    ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀ ಟೂ ಆರೋಪ | 2 ಕೋಟಿ ಅಪರಿಚಿತನಿಂದ ಡಿಮ್ಯಾಂಡ್ | FILMIBEAT KANNADA

    ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀ ಟೂ ಪ್ರಕರಣಕ್ಕೆ ಅನೇಕ ತಿರುವುಗಳು ಸಿಗುತ್ತಿದೆ. ಈಗ ಈ ಘಟನೆಗೆ ಸಂಬಂಧಿಸಿದ ಹಾಗೆ ಮತ್ತೊಂದು ಅಚ್ಚರಿಯ ಸುದ್ದಿ ಬಂದಿದೆ.

    'ಶ್ರುತಿ ಹರಿಹರನ್ ಬಾಯಿ ಮುಚ್ಚಿಕೊಂಡು ಇರಬೇಕು ಎಂದರೆ 2 ಕೋಟಿ ಹಣ ಕೊಡಬೇಕು' ಎಂದು ಬೇಡಿಕೆ ಇಡಲಾಗಿದೆಯಂತೆ. ಅರ್ಜುನ್ ಸರ್ಜಾ ಅವರ ಮ್ಯಾನೆಜರ್ ಗೆ ಈ ರೀತಿಯ ಕರೆ ಹೋಗಿದೆಯಂತೆ. ದುಡ್ಡು ಕೊಟ್ಟರೆ ಮಾತ್ರ ಈ ಪ್ರಕರಣ ಸುಖಾಂತ್ಯ ಕಾಣಲಿದೆ ಎಂದು ವ್ಯಕ್ತಿಯೊಬ್ಬ ಹೇಳಿದ್ದಾನಂತೆ. ಹೌದು, ಈ ರೀತಿಯ 'ಅಂತೆ' ಕಂತೆ ಸುದ್ದಿ ಈಗ ಹೊರಬಂದಿದೆ.

    ಮೀಟೂ ಬಗ್ಗೆ ಶಿವಣ್ಣ ಏನಂತಾರೆ? ಯಾರ ಪರ ನಿಲ್ತಾರೆ? ಮೀಟೂ ಬಗ್ಗೆ ಶಿವಣ್ಣ ಏನಂತಾರೆ? ಯಾರ ಪರ ನಿಲ್ತಾರೆ?

    ಹಾಗಾದರೆ, ಸದ್ಯ ಬಂದಿರುವ ಈ ವಿಷಯ ನಿಜವೇ.?, ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಇಬ್ಬರ ಪ್ರಕರಣ ಮುಂದೆ ಏನಾಗುತ್ತದೆ ಎನ್ನುವ ಕೆಲ ಸಂಗತಿಗಳು ಮುಂದಿದೆ ಓದಿ...

    ಅನಾಮಿಕ ವ್ಯಕ್ತಿಯಿಂದ ಕರೆ

    ಅನಾಮಿಕ ವ್ಯಕ್ತಿಯಿಂದ ಕರೆ

    ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಅನಾಮಿಕ ವ್ಯಕ್ತಿಯಿಂದ ಕರೆ ಬಂದಿದೆಯಂತೆ. ಫೋನ್ ಮಾಡಿ ಮಾತನಾಡಿದ ಆ ವ್ಯಕ್ತಿ ಮೀ ಟೂ ಪ್ರಕರಣದ ಬಗ್ಗೆ ಶ್ರುತಿ ಹರಿಹರನ್ ಏನು ಮಾಡನಾಡದೆ ಬಾಯಿ ಮುಚ್ಚಿಕೊಂಡು ಇರಬೇಕು ಎಂದರೆ 1.5 ರಿಂದ 2 ಕೋಟಿ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದನಂತೆ.

    ಶ್ರುತಿ ಹರಿಹರನ್ ವಿವಾದ: ಇಂದು ಪ್ರಶಾಂತ್ ಸಂಬರ್ಗಿ ಇಂದ ಸಿಡಿಯಲಿದೆ ಹೊಸ ಬಾಂಬ್.! ಶ್ರುತಿ ಹರಿಹರನ್ ವಿವಾದ: ಇಂದು ಪ್ರಶಾಂತ್ ಸಂಬರ್ಗಿ ಇಂದ ಸಿಡಿಯಲಿದೆ ಹೊಸ ಬಾಂಬ್.!

    'ಅಂತೆ' ಕಂತೆ ಮಾತ್ರ

    'ಅಂತೆ' ಕಂತೆ ಮಾತ್ರ

    ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಇದೀಗ ಹೊರ ಬಂದಿದೆ. ಆದರೆ, ಅದು 'ಅಂತೆ' ಕಂತೆ ಸುದ್ದಿ ಮಾತ್ರ. ಆ ವ್ಯಕ್ತಿ ಹಣ ಕೇಳಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಅರ್ಜುನ್ ಸರ್ಜಾ ಕಡೆಯವರು ನೀಡಿಲ್ಲ. ಸೋ, ಹೀಗಿರುವಾಗ ಇದು, ನಿಜವೋ ಸುಳ್ಳೋ ಎಂದು ನಂಬುವುದು ಕಷ್ಟ.''

    ಶ್ರುತಿ ಪರ ಎಂದಿದ್ದ ಪ್ರಕಾಶ್ ರೈ ಈಗ ಉಲ್ಟಾ ಹೊಡೆದರು ಶ್ರುತಿ ಪರ ಎಂದಿದ್ದ ಪ್ರಕಾಶ್ ರೈ ಈಗ ಉಲ್ಟಾ ಹೊಡೆದರು

    ಇಂದು ಸಂಧಾನ ಸಭೆ

    ಇಂದು ಸಂಧಾನ ಸಭೆ

    ಈ ಪ್ರಕರಣ ಯಾವ ಹಂತಕ್ಕೆ ಹೋಗಲಿದೆ ಎನ್ನುವುದು ಇಂದು ತೀರ್ಮಾನ ಆಗಲಿದೆ. ಇಂದು ನಟ ಅಂಬರೀಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಇಬ್ಬರೂ ಭಾಗಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

    ಚೆಂಬರ್ ನಲ್ಲಿ ತೀರ್ಮಾನವಾಗಲಿ ಎಂದ ಶಿವಣ್ಣ

    ಚೆಂಬರ್ ನಲ್ಲಿ ತೀರ್ಮಾನವಾಗಲಿ ಎಂದ ಶಿವಣ್ಣ

    ಶ್ರುತಿ - ಸರ್ಜಾ ಗಲಾಟೆಯ ಬಗ್ಗೆ ಮಾತನಾಡಿದ ಶಿವಣ್ಣ ''ಚೆಂಬರ್ ಬಗ್ಗೆ ನಮಗೆ ಗೌರವ ಇದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಅಲ್ಲಿಯೇ ಈ ವಿವಾದ ಅಂತ್ಯ ಕಾಣಲಿ. ನಾನು ಯಾರ ಭಾವನೆಗೆ ನೋವುಂಟು ಮಾಡುವುದು ಬೇಡ. ಅವರದ್ದು ಸರಿ, ಇವರದ್ದು ಸರಿ ಎಂದು ಹೇಳುವುದಿಲ್ಲ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    English summary
    Sruthi Hariharan allegations against Arjun Sarja: Anonymous Person demanded Rs.2 crore for compromise.
    Thursday, October 25, 2018, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X