Don't Miss!
- News ನೇಹಾ ಕೊಲೆ ಕೇಸ್ ಸಿಐಡಿಗೆ ಹಸ್ತಾಂತರ: ಇಂದು ಫಯಾಜ್ ವಶಕ್ಕೆ ಸಾಧ್ಯತೆ
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಾಸ್ತ್ರಿ' ನಟಿ ಮಾನ್ಯ ಸಾಧನೆಗೆ ಅನು ಪ್ರಭಾಕರ್ ಮೆಚ್ಚುಗೆ
ಕನ್ನಡ ನಟಿ ಮಾನ್ಯ ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಓದು, ಶಿಕ್ಷಣದ ಮಹತ್ವ ಎಂತಹದ್ದು, ಕಷ್ಟದ ಸಮಯದಲ್ಲಿ ಅದನ್ನು ನಿಭಾಯಿಸಿದ ರೀತಿ, ಬಾಲ್ಯದಲ್ಲಿ ಕಳೆದುಕೊಂಡ ಶಿಕ್ಷಣವನ್ನು ಮತ್ತೆ ಪಡೆದು ಸಾಧಿಸಿದ ಅನುಭವ ಹೇಳಿಕೊಂಡಿದ್ದರು.
ನಟಿ ಮಾನ್ಯ ನಾಯ್ಡು ಅವರು ಈ ಪೋಸ್ಟ್ಗೆ ನಟಿ ಅನು ಪ್ರಭಾಕರ್ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ನನ್ನ ಸ್ನೇಹಿತೆಯ ಅದ್ಭುತ ಯಶಸ್ಸಿನ ಕಥೆ ಕೇಳಿ. ನಾವಿಬ್ಬರು ವರ್ಷ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ವಿ. ಅಲ್ಲಿಂದ ಸ್ನೇಹಿತರಾದ್ವಿ. ಪ್ರತಿಭಾನ್ವಿತ ಹಾಗೂ ಯಶಸ್ವಿ ನಟಿಯಾಗಿದ್ದ ಯಶಸ್ವಿ ವೃತ್ತಿಗೇರುವ (ವೃತ್ತಿ-VP in CREDIT SUISSE) ಮೂಲಕ ಅಸಾಧ್ಯವೆನ್ನುವುದು ಸಾಧಿಸಿ ತೋರಿಸಿದ್ದಾರೆ'' ಎಂದು ಅಭಿನಂದಿಸಿದ್ದರು.
ಜೀವನ ಎಂಬ ಸಾಗರದಲ್ಲಿ ತಾನು ಎದುರಿಸಿದ ಕಷ್ಟ ಹಂಚಿಕೊಂಡ 'ಶಾಸ್ತ್ರಿ' ನಾಯಕಿ ಮಾನ್ಯ
''ತನ್ನ ಬುದ್ಧಿವಂತಿಕೆಯನ್ನು ಖಂಡಿಸುವ ಒಬ್ಬ ವ್ಯಕ್ತಿಯು ಅವಳನ್ನು ಓದಲು ಮಾಡಲು ಪ್ರೇರೇಪಿಸಿದರು ಎಂದು ಅವಳು ಒಮ್ಮೆ ಹೇಳಿದ್ದಳು. ಆ ಪ್ರೇರಣೆಯ ಮಾನ್ಯ ಸಾಧನೆಗೆ ಕಾರಣವಾಯಿತು. ತನ್ನನ್ನು ಸಾಬೀತುಪಡಿಸಿಕೊಂಡು, ಆ ವ್ಯಕ್ತಿಯ ಅಭಿಪ್ರಾಯ ತಪ್ಪು ಎಂದು ಸಾಬೀತುಪಡಿಸಿದಳು'' ಎಂದು ತಿಳಿಸಿದ್ದಾರೆ.
''ನಟಿಯರು ಅಂದ್ರೆ ಕೇವಲ ಸೌಂದರ್ಯ ಮಾತ್ರವಲ್ಲ, ಅವರು ಬುದ್ದಿವಂತರು ಸಹ. ನಿನ್ನ ಸಾಧನೆಗೆ ಹ್ಯಾಟ್ಸಾಪ್, ನಿನಗೆ ಮತ್ತಷ್ಟು ಶಕ್ತಿ ಸಿಗಲಿ'' ಎಂದು ಅನು ಪ್ರಭಾಕರ್ ಶುಭಹಾರೈಸಿದ್ದಾರೆ. ಅನು ಪ್ರಭಾಕರ್ ಅವರ ಆತ್ಮೀಯ ಪ್ರತಿಕ್ರಿಯೆಗೆ ಮಾನ್ಯ ಧನ್ಯವಾದ ತಿಳಿಸಿದ್ದಾರೆ.
Recommended Video
ಪ್ರಸ್ತುತ, ನಟಿ ಮಾನ್ಯ ಅವರು ನ್ಯೂಯಾರ್ಕ್ನಲ್ಲಿ ಪತಿ ಹಾಗೂ ಮಗಳ ಜೊತೆ ನೆಲೆಸಿದ್ದು, ಅಲ್ಲಿಯೇ ಉದ್ಯೋಗ ಸಹ ಮಾಡುತ್ತಿದ್ದಾರೆ.