Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಾಸ್ತ್ರಿ' ನಟಿ ಮಾನ್ಯ ಸಾಧನೆಗೆ ಅನು ಪ್ರಭಾಕರ್ ಮೆಚ್ಚುಗೆ
ಕನ್ನಡ ನಟಿ ಮಾನ್ಯ ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಓದು, ಶಿಕ್ಷಣದ ಮಹತ್ವ ಎಂತಹದ್ದು, ಕಷ್ಟದ ಸಮಯದಲ್ಲಿ ಅದನ್ನು ನಿಭಾಯಿಸಿದ ರೀತಿ, ಬಾಲ್ಯದಲ್ಲಿ ಕಳೆದುಕೊಂಡ ಶಿಕ್ಷಣವನ್ನು ಮತ್ತೆ ಪಡೆದು ಸಾಧಿಸಿದ ಅನುಭವ ಹೇಳಿಕೊಂಡಿದ್ದರು.
ನಟಿ ಮಾನ್ಯ ನಾಯ್ಡು ಅವರು ಈ ಪೋಸ್ಟ್ಗೆ ನಟಿ ಅನು ಪ್ರಭಾಕರ್ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ನನ್ನ ಸ್ನೇಹಿತೆಯ ಅದ್ಭುತ ಯಶಸ್ಸಿನ ಕಥೆ ಕೇಳಿ. ನಾವಿಬ್ಬರು ವರ್ಷ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ವಿ. ಅಲ್ಲಿಂದ ಸ್ನೇಹಿತರಾದ್ವಿ. ಪ್ರತಿಭಾನ್ವಿತ ಹಾಗೂ ಯಶಸ್ವಿ ನಟಿಯಾಗಿದ್ದ ಯಶಸ್ವಿ ವೃತ್ತಿಗೇರುವ (ವೃತ್ತಿ-VP in CREDIT SUISSE) ಮೂಲಕ ಅಸಾಧ್ಯವೆನ್ನುವುದು ಸಾಧಿಸಿ ತೋರಿಸಿದ್ದಾರೆ'' ಎಂದು ಅಭಿನಂದಿಸಿದ್ದರು.
ಜೀವನ ಎಂಬ ಸಾಗರದಲ್ಲಿ ತಾನು ಎದುರಿಸಿದ ಕಷ್ಟ ಹಂಚಿಕೊಂಡ 'ಶಾಸ್ತ್ರಿ' ನಾಯಕಿ ಮಾನ್ಯ
''ತನ್ನ ಬುದ್ಧಿವಂತಿಕೆಯನ್ನು ಖಂಡಿಸುವ ಒಬ್ಬ ವ್ಯಕ್ತಿಯು ಅವಳನ್ನು ಓದಲು ಮಾಡಲು ಪ್ರೇರೇಪಿಸಿದರು ಎಂದು ಅವಳು ಒಮ್ಮೆ ಹೇಳಿದ್ದಳು. ಆ ಪ್ರೇರಣೆಯ ಮಾನ್ಯ ಸಾಧನೆಗೆ ಕಾರಣವಾಯಿತು. ತನ್ನನ್ನು ಸಾಬೀತುಪಡಿಸಿಕೊಂಡು, ಆ ವ್ಯಕ್ತಿಯ ಅಭಿಪ್ರಾಯ ತಪ್ಪು ಎಂದು ಸಾಬೀತುಪಡಿಸಿದಳು'' ಎಂದು ತಿಳಿಸಿದ್ದಾರೆ.
''ನಟಿಯರು ಅಂದ್ರೆ ಕೇವಲ ಸೌಂದರ್ಯ ಮಾತ್ರವಲ್ಲ, ಅವರು ಬುದ್ದಿವಂತರು ಸಹ. ನಿನ್ನ ಸಾಧನೆಗೆ ಹ್ಯಾಟ್ಸಾಪ್, ನಿನಗೆ ಮತ್ತಷ್ಟು ಶಕ್ತಿ ಸಿಗಲಿ'' ಎಂದು ಅನು ಪ್ರಭಾಕರ್ ಶುಭಹಾರೈಸಿದ್ದಾರೆ. ಅನು ಪ್ರಭಾಕರ್ ಅವರ ಆತ್ಮೀಯ ಪ್ರತಿಕ್ರಿಯೆಗೆ ಮಾನ್ಯ ಧನ್ಯವಾದ ತಿಳಿಸಿದ್ದಾರೆ.
Recommended Video
ಪ್ರಸ್ತುತ, ನಟಿ ಮಾನ್ಯ ಅವರು ನ್ಯೂಯಾರ್ಕ್ನಲ್ಲಿ ಪತಿ ಹಾಗೂ ಮಗಳ ಜೊತೆ ನೆಲೆಸಿದ್ದು, ಅಲ್ಲಿಯೇ ಉದ್ಯೋಗ ಸಹ ಮಾಡುತ್ತಿದ್ದಾರೆ.