Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಾಸ್ತ್ರಿ' ನಟಿ ಮಾನ್ಯ ಸಾಧನೆಗೆ ಅನು ಪ್ರಭಾಕರ್ ಮೆಚ್ಚುಗೆ
ಕನ್ನಡ ನಟಿ ಮಾನ್ಯ ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಓದು, ಶಿಕ್ಷಣದ ಮಹತ್ವ ಎಂತಹದ್ದು, ಕಷ್ಟದ ಸಮಯದಲ್ಲಿ ಅದನ್ನು ನಿಭಾಯಿಸಿದ ರೀತಿ, ಬಾಲ್ಯದಲ್ಲಿ ಕಳೆದುಕೊಂಡ ಶಿಕ್ಷಣವನ್ನು ಮತ್ತೆ ಪಡೆದು ಸಾಧಿಸಿದ ಅನುಭವ ಹೇಳಿಕೊಂಡಿದ್ದರು.
ನಟಿ ಮಾನ್ಯ ನಾಯ್ಡು ಅವರು ಈ ಪೋಸ್ಟ್ಗೆ ನಟಿ ಅನು ಪ್ರಭಾಕರ್ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ನನ್ನ ಸ್ನೇಹಿತೆಯ ಅದ್ಭುತ ಯಶಸ್ಸಿನ ಕಥೆ ಕೇಳಿ. ನಾವಿಬ್ಬರು ವರ್ಷ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ವಿ. ಅಲ್ಲಿಂದ ಸ್ನೇಹಿತರಾದ್ವಿ. ಪ್ರತಿಭಾನ್ವಿತ ಹಾಗೂ ಯಶಸ್ವಿ ನಟಿಯಾಗಿದ್ದ ಯಶಸ್ವಿ ವೃತ್ತಿಗೇರುವ (ವೃತ್ತಿ-VP in CREDIT SUISSE) ಮೂಲಕ ಅಸಾಧ್ಯವೆನ್ನುವುದು ಸಾಧಿಸಿ ತೋರಿಸಿದ್ದಾರೆ'' ಎಂದು ಅಭಿನಂದಿಸಿದ್ದರು.
ಜೀವನ ಎಂಬ ಸಾಗರದಲ್ಲಿ ತಾನು ಎದುರಿಸಿದ ಕಷ್ಟ ಹಂಚಿಕೊಂಡ 'ಶಾಸ್ತ್ರಿ' ನಾಯಕಿ ಮಾನ್ಯ
''ತನ್ನ ಬುದ್ಧಿವಂತಿಕೆಯನ್ನು ಖಂಡಿಸುವ ಒಬ್ಬ ವ್ಯಕ್ತಿಯು ಅವಳನ್ನು ಓದಲು ಮಾಡಲು ಪ್ರೇರೇಪಿಸಿದರು ಎಂದು ಅವಳು ಒಮ್ಮೆ ಹೇಳಿದ್ದಳು. ಆ ಪ್ರೇರಣೆಯ ಮಾನ್ಯ ಸಾಧನೆಗೆ ಕಾರಣವಾಯಿತು. ತನ್ನನ್ನು ಸಾಬೀತುಪಡಿಸಿಕೊಂಡು, ಆ ವ್ಯಕ್ತಿಯ ಅಭಿಪ್ರಾಯ ತಪ್ಪು ಎಂದು ಸಾಬೀತುಪಡಿಸಿದಳು'' ಎಂದು ತಿಳಿಸಿದ್ದಾರೆ.
''ನಟಿಯರು ಅಂದ್ರೆ ಕೇವಲ ಸೌಂದರ್ಯ ಮಾತ್ರವಲ್ಲ, ಅವರು ಬುದ್ದಿವಂತರು ಸಹ. ನಿನ್ನ ಸಾಧನೆಗೆ ಹ್ಯಾಟ್ಸಾಪ್, ನಿನಗೆ ಮತ್ತಷ್ಟು ಶಕ್ತಿ ಸಿಗಲಿ'' ಎಂದು ಅನು ಪ್ರಭಾಕರ್ ಶುಭಹಾರೈಸಿದ್ದಾರೆ. ಅನು ಪ್ರಭಾಕರ್ ಅವರ ಆತ್ಮೀಯ ಪ್ರತಿಕ್ರಿಯೆಗೆ ಮಾನ್ಯ ಧನ್ಯವಾದ ತಿಳಿಸಿದ್ದಾರೆ.
Recommended Video
ಪ್ರಸ್ತುತ, ನಟಿ ಮಾನ್ಯ ಅವರು ನ್ಯೂಯಾರ್ಕ್ನಲ್ಲಿ ಪತಿ ಹಾಗೂ ಮಗಳ ಜೊತೆ ನೆಲೆಸಿದ್ದು, ಅಲ್ಲಿಯೇ ಉದ್ಯೋಗ ಸಹ ಮಾಡುತ್ತಿದ್ದಾರೆ.